Friday, February 5, 2010

ಹಾಗೇ ಇನ್ನೊಂದೆರ್ಡು ಡೋಸ್

ಆಗಿದ್ದರೆ ಭೇಟಿ
ಆಗಿದ್ದರೆ ಒಂದುವೇಳೆ ಭೇಟಿ
ನಮಗಿರುತಿರಲಿಲ್ಲ ಸಾಟಿ
ಲೈಲಾ ಮಜನೂ ಸಲೀಂ ಅನಾರ್
ಪ್ರೇಮಪುಸ್ತಕ ಸೇರ್ತಿದ್ವು ಗಟಾರ್

ಲವ್ ಸ್ಟೋರಿ
ವೈನಾಗಿದ್ದ ನಮ್ಮ ಲವ್ ಸ್ಟೋರೀಲಿ
ಅಗ್ಬಾರ್ದಿತ್ತು ಖಳನಾಯಕ ನಿಮ್ಮಪ್ಪ
ಮೀಟಾಗ್ತಿರ್ಲಿಲ್ಲ ಹೀಗೆ ಬೇರೆ-ಬೇರೆ ದಾರೀಲಿ
ಆಗ್ತಿದ್ದೆ ಅಮ್ಮನ್ಗೆ ಸೊಸೆ ಮಾವ ನಮ್ಮಪ್ಪ


ಮಿಲ್ಟ್ರಿ-ಚೌಲ್ಟ್ರಿ
ಗುಂಡ ಹೋದ ಸೇರಲು ಮಿಲ್ಟ್ರಿಗೆ
ಗುಂಡಿ ಅಟ್ಕಾಯಿಸ್ಕೊಂಡ್ಲು ರಸ್ತೇಲಿ
ಕಣ್ಣಿಗೆ-ಕಣ್ಣು ಸೇರಿದ್ವು,
ಮನಸುಗಳೆರಡೂ ಒಂದಾದ್ವು
ಮದ್ವೆ ಅಗ್ತಾವ್ರೆ ಬಂದ್ಬಿಡಿ ಚೌಲ್ಟ್ರಿಗೆ


ಸೂರ್ಯ ಗ್ರಹಣ
ಗುಂಡ ಹೋದ ಇಂಟರ್ ವ್ಯೂಹಕ್ಕೆ
ಬಿದ್ದ ಪುಂಖಾನುಪುಂಖ ಪ್ರಶ್ನೆ ಜಾಲಕ್ಕೆ
ಕೇಳಿದ್ರು, ಧರತಿ-ಸೂರ್ಯನ ಮಧ್ಯೆ
ಚಂದ್ರ ಬಂದರೆ ಏನಾಗುತ್ತೆ ಗುಂಡ..?
ಥಟ್ ಅಂತ ಕೊಟ್ಟ ಉತ್ರ ಗುಂಡ
ಆಗೋದೇನು..? ಚಂದ್ರನ್ನ ಧರತಿ
ಮದ್ವೆ ಆಗ್ತಾಳೆ, ಸೂರ್ಯಂಗೆ
ಗ್ರಹಣ ವಕ್ರಸ್ತೈತೆ....

Wednesday, January 20, 2010

ಎರಡು ಕವನಗಳು - ಚಿಂತನೆಗೆ

ನಾಳೆ ಚಿಂತೆ ಬಿಡು
ಭವಿತಕೆ ಹೇಳಿಬಿಡು
ಚಿಂತೆ ಮಾಡದಿರು
ಸೂತ್ರವಾಗಲಿದು ಎಂದೂ
ಮರೆತುಬಿಡು
ನೋಡದಿರು
ಕನ್ನಡಿಯನ್ನೆಂದೂ
ತೊರೆದುಬಿಡು
ನಿಟ್ಟುಸಿರು
ಕಾಡಬೇಡೆಂದು
ನಿಂತು ನಟ್ಟ ನಡು
ನಾಳೆ ಎನ್ನದಿರು
ಸುಖಪಡುವೆ ಎಂದೆಂದೂ

ಪ್ರಳಯ
ಎಲ್ಲಿ ಪ್ರಳಯ?
ಎಲ್ಲ ಸುಳ್ಳಯ್ಯ
ಆಕರ್ಷಿಸಲೊಂದು ನೆಪ
೨೦೧೨, ಓಡದಿದ್ದರೆ
ಪಾಪರ್ ಆಗುವರೇ ಪಾಪ!!
ಕೊಚ್ಚಿ ಹೋದವು ಊರು
ಕಳಚಿ ತಲೆಮೇಲಿನ ಸೂರು
ಅನ್ನ-ವಸ್ತ್ರವಿಲ್ಲದ ಪರದಾಟ
ಅವರ ಕೇಳಿ ಏನೆಂದು ವಿಧಿಯಾಟ
ಮನೆಮಂದಿಯೆಲ್ಲಾ ಕೊಚ್ಚಿಹೋದರೆ
ತೋರದೇ ಒಂದೂ ಉಪಾಯ
ಅಳಿಸಿ ಹೋದರೆ ಮನೆತನದ ಹೆಸರೇ
ಅದೇ ಅಲ್ಲವೇ ಅವರಿಗೆ ಪ್ರಳಯ..?
ಅಲ್ಲಿ ಅನ್ನ-ಸೂರಿಗೆ ಚೀರಾಟ
ಇಲ್ಲಿ ಪದವಿ-ಛೇರಿಗೆ ಜಗ್ಗಾಟ
ತಮ್ಮವರ ಅಗಲಿ ಕೋಡಿ ಕಣ್ಣೀರು
ಇಲ್ಲಿ ಮೊಸಳೆ ಕಣ್ಣಲಿ ಹುಸಿನೀರು
ನೆರೆಗೆ ಹೋದವರು ಕೆಲವರು
ಬರಿದೇ ಸತ್ತವರು ಹಲವರು
ಪದವಿ-ಅಧಿಕಾರದಾಸೆಯ ನಮ್ಮವರು
ಅನ್ನ-ನೀರುಬಿಡಿ,
ಮಾನವತೆಯನೇ ಮರೆತರು

Wednesday, January 13, 2010

ಸಂಕ್ರಾಂತಿ - ತ್ರಿವರ್ಣಕ್ರಾಂತಿ



ಹಸಿರುಸಿರಾಡುವ ಹೊಲ ಗದ್ದೆ
ಉಸಿರಾಗಿದ್ದವು, ರೈತನೆಂದ ಗೆದ್ದೆ
ಕೊಳ್ಳುವುದು ಭಾರ, ಮಾರು ಅಗ್ಗ
ಸಾಲಹೊರೆ, ರೈತನ ಕೊರಳಿಗೆ ಹಗ್ಗ
ಬರಲಿ ಅನ್ನದಾತನ ಅನುಕೂಲದ ದಿನ
ತೀರಲಿ ಸಾಲ,ಹಸಿರಾಗಿ ಹೊಲ ಅನುದಿನ
ಬರಲಿ ಸಂಕ್ರಾಂತಿ ಮನೆಗೆ, ಗದ್ದೆಗೆ
ಊರಿಗೆ, ನಾಡಿಗೆ, ರೈತನಿಗೆ ಗದ್ದುಗೆ
ಆಗಲಿ ತ್ರಿವರ್ಣ ಕ್ರಾಂತಿ, ಹಸಿರು ಶಾಂತಿ
ಶ್ವೇತ ಹೈನಿಗೆ, ಮೀನಿಗೆ ನೀಲಕ್ರಾಂತಿ
ಬಾನಲಿ ಹಾರಾಡಿ ತ್ರಿವರ್ಣ ಪಟಪಟ
ತ್ಯಾಗ, ಶೌರ್ಯಕ್ಕಾಗಲಿ ಕೇಸರಿ ದಿಟ
ಸಮೃದ್ಧಿ, ಸಸ್ಯಸಿರಿ ಆಗಲಿ ಹಸಿರು
ಶಾಂತಿಗೆ ಬಿಳಿ, ಮುನ್ನಡೆಗೆ ಚಕ್ರವೇ ಉಸಿರು
ಸಂಭ್ರಮವಾಗಲಿ ಒಂದೆಡೆ ಅನ್ನದಾತನಿಗೆ
ತರಲಿ ಎಳ್ಳು-ಬೆಲ್ಲದ ಸಂಕ್ರಾಂತಿ
ಯೋಧನ ಶೌರ್ಯ, ಮೇಧಾವಿಗಳ ನಾಡಿಗೆ
ನಮಿಸಿ ವಿಶ್ವ ಆಗಲಿ ತ್ರಿವರ್ಣ ಕ್ರಾಂತಿ

Tuesday, December 29, 2009

ಗಾನ ಗಾರುಡಿಗನಿಗೆ ನಮನ

ಲಾಭ-ನಷ್ಟ
ತರವಲ್ಲ ತಂಬೂರಿ ತಂತಿ ಹರಿಯಿತು
ಇಹವಲ್ಲ ಪರಕೆ ಪ್ರಾಣಪಕ್ಷಿ ಹಾರಿತು
ನಿಮ್ಮಾಗಮನ ಸ್ವರ್ಗದಿ ಲಾಭವಲ್ಲಿ
ಕಳೆದುಕೊಂಡ ನಮಗೆ ಆಯಿತು ನಷ್ಟವಿಲ್ಲಿ.

ಹಾರಿತ್ತು ಪ್ರಾಣ ಪಕ್ಷಿ
ಕೋಡಗ ಆಗಲಿಲ್ಲ ಕೋಳಿಗೆ ತುತ್ತು
ಆನೆ ಹೊಗಲಿಲ್ಲ ಆಡಿಗಿಲ್ಲ ಹೊತ್ತು
ಮೋಡ ಮಳೆಗರೆಯದೆ ಹೋದದ್ದು
ಜಟಕದ ಕುದುರೆ ಸುಮ್ಮನೆ ನಡೆದದ್ದು
ನೀಲಾಕಾಶಕೆ, ಸಾಬಿಗೆ ಆಗದಾಯ್ತು ಗೊತ್ತು
ಯಾರಿಗೂ ತಿಳಿಯಲೇ ಇಲ್ಲ
ಹುಟ್ಟುಹಬ್ಬದಂದೇ ಪ್ರಾಣಪಕ್ಷಿ ಹಾರಿತ್ತು.


ಇನ್ನಿಲ್ಲದ ಗಾಯನ ಗಾರುಡಿಗ
ಮನಬಿಚ್ಚು-ಮುಕ್ತ ಕಂಠದ ಭೋರ್ಗರೆವ ಹಾಡು
ನೇಗಿಲಯೋಗಿ ಮಣ್ಣವಾಸನೆ ಬಂತಲ್ಲಿಗೆ ಬೀಡು
ಏನೋ ತವಕ, ಎಂತಹ ಚಿಮ್ಮುವ ಹುರುಪು ನೋಡು
ಗಾಯನ ಗಾರುಡಿಗನ ಕಳೆದುಕೊಂಡಿತು ನಮ್ಮ ನಾಡು

Sunday, December 6, 2009

ದಾನವತೆ ಕೊನೆಯಾಗುವುದು



ದಾನವತೆ ಕೊನೆಯಾಗುವುದು
ಕಣ್ಣುಕಲೆತರೆ - ತುಟಿ ಅಲ್ಲ
ರೆಪ್ಪೆಮಾತನಾಡುವುವು
ಕಣ್ಮುಚ್ಚಿ ತನ್ಮಯನಾದರೆ
ಮನ-ಮನದಿ ಮಾತನಾಡುವುದು
ಮನ-ತೆರೆದರೆ ಮನಕೆ
ಹೃದಯಗಳು ಒಂದಾಗುವುವು
ಹೃದಯ ಬಿಚ್ಚಿ ನುಡಿದರೆ
ನಡೆ-ತಡೆಗೋಡೆಯ ಹಾರುವುವು
ವೈಶಾಲ್ಯದಿ ಯೋಚನೆ ಹರಿದರೆ
ಹರಿವನದಿ ಸಾಗರ ಸೇರುವುದು
ಸಾಗರಕುಂಟೇ ಸೀಮೆಗಳು?
ಸಾಗರಕೆಲ್ಲಿಯ ಆಳಗಳು?
ಸಾಗರೆಕೆ ಸಾಗರೆವೇ ತಾ ಸಾಟಿ
ಕ್ಷುಲ್ಲಕಗಳು ಮರೆಯಾಗುವುವು
ಧರ್ಮಗಳು ಮನದ ನೆಮ್ಮದಿಗೆ
ಕರ್ಮಗಳು ಇಹದ ತಹಬದಿಗೆ
ಧರ್ಮ ತಹಬದಿಗೆ ಯತ್ನಿಸಿದರೆ
ಕರ್ಮಗಳು ನೆಮ್ಮದಿಯ ಕಾಡುವುವು
ಮಾನವತೆಗೆ ಮನಕೊಟ್ಟರೆ
ದಾನವತೆ ಕೊನೆಯಾಗುವುದು

ಮೂರ್ಖತೆ ಪರಮಾವಧಿ
ನನ್ನ ಮನೆಯ ವಸ್ತು
ನಾನೇ ಸುಟ್ಟು ಬೇಸ್ತು
ನೀನಿರಬಹುದು ಕಟ್ಟುಮಸ್ತು
ನಿನ್ನ ಬಾಲನೀನೆ ಹಿಡಿಯಬೇಡ
ಮೂರ್ಖ ಸಿಗದೇನೂ.. ಆಗುವೆ ಸುಸ್ತು
ಮುಷ್ಕರ, ಧರಣಿ ಕುಂತೆ
ನಿನ್ನ ಇಂದಿಗೆ ನಿನ್ನ ಚಿಂತೆ
ನಿನ್ನ ನೆರೆಯವನದು ಅನಿಸಿ ಕಂತೆ
ಮುಳುಗುವೆ ಇದು ಸ್ವಾರ್ಥಗಳ ಸಂತೆ
ಕೆಲಸ ಬಿಡುವೆ ..ಧ್ವಂಸ ಮಾಡುವೆ
ಕಂಸನಾಗುವೆ, ಹಿಂಸೆ ಮಾಡುವೆ
ಬಸ್ಸು, ಕಟ್ಟಡ ಸರ್ವಜನ ಆಸ್ತಿ ಸುಡುವೆ
ಯಾವುದೋ ಮಗು ನರಳಿಸುವೆ
ನಿನ್ನ ನಾಶಕೆ ನೀನೇ ನಾಂದಿ ಹಾಡಿಸುವೆ
ಬಿಡು ದ್ವೇಷ-ಕಟ್ಟು ದೇಶ
ಮರೆತು ರೋಷ- ಕಳಚು ವೇಷ
ಚೆಲ್ಲು ವಿಷ - ಇರಲಿ ಹರುಷ
ಇನ್ನೂ ಏಕೆ ಮೀನ ಮೇಷ?
ಎಲ್ಲಬಿಡು ಮರೆತು ಬಿಡು
ಜೊತೆಗೂಡು, ಹೆಗಲುಕೊಡು
ಕೃಷಿಮಾಡು ಕಟ್ಟು ನಾಡು
ಕೆಡಹಲು ಸಾಕು ಒಂದೇ ಕೋಡು
ನೆಡಲು ಬೇಕು ಸಾವಿರ ಮೇಡು
ಮೆಟ್ಟು ನಾಡು ಇದುವೇ ಬೀಡು
ಕಟ್ಟು ನಾಡು ಕಟ್ಟು ನಾಡು ಕಟ್ಟು ನಾಡು

Sunday, November 22, 2009

ಎರಡು ದಿಕ್ಕು -ಒಂದೇ ಯೋಚನೆ













ನಾಳೆ ಚಿಂತೆ ಬಿಡು
ಭವಿತಕೆ ಹೇಳಿಬಿಡು
ಚಿಂತೆ ಮಾಡದಿರು
ಸೂತ್ರವಾಗಲಿದು ಎಂದೂ
ಮರೆತುಬಿಡು
ನೋಡದಿರು
ಕನ್ನಡಿಯನ್ನೆಂದೂ
ತೊರೆದುಬಿಡು
ನಿಟ್ಟುಸಿರು
ಕಾಡಬೇಡೆಂದು
ನಿಂತು ನಟ್ಟ ನಡು
ನಾಳೆ ಎನ್ನದಿರು
ಸುಖಪಡುವೆ ಎಂದೆಂದೂ

ಪ್ರಳಯ
ಎಲ್ಲಿ ಪ್ರಳಯ?
ಎಲ್ಲ ಸುಳ್ಳಯ್ಯ
ಆಕರ್ಷಿಸಲೊಂದು ನೆಪ
೨೦೧೨, ಓಡದಿದ್ದರೆ
ಪಾಪರ್ ಆಗುವರೇ ಪಾಪ!!
ಕೊಚ್ಚಿ ಹೋದವು ಊರು
ಕಳಚಿ ತಲೆಮೇಲಿನ ಸೂರು
ಅನ್ನ-ವಸ್ತ್ರವಿಲ್ಲದ ಪರದಾಟ
ಅವರ ಕೇಳಿ ಏನೆಂದು ವಿಧಿಯಾಟ
ಮನೆಮಂದಿಯೆಲ್ಲಾ ಕೊಚ್ಚಿಹೋದರೆ
ತೋರದೇ ಒಂದೂ ಉಪಾಯ
ಅಳಿಸಿ ಹೋದರೆ ಮನೆತನದ ಹೆಸರೇ
ಅದೇ ಅಲ್ಲವೇ ಅವರಿಗೆ ಪ್ರಳಯ
ಅಲ್ಲಿ ಅನ್ನ-ಸೂರಿಗೆ ಚೀರಾಟ
ಇಲ್ಲಿ ಪದವಿ-ಛೇರಿಗೆ ಜಗ್ಗಾಟ
ತಮ್ಮವರ ಅಗಲಿ ಕೋಡಿ ಕಣ್ಣೀರು
ಇಲ್ಲಿ ಮೊಸಳೆ ಕಣ್ಣಲಿ ಹುಸಿನೀರು
ನೆರೆಗೆ ಹೋದವರು ಕೆಲವರು
ಬರಿದೇ ಸತ್ತವರು ಹಲವರು
ಪದವಿ-ಅಧಿಕಾರದಾಸೆಯ ನಮ್ಮವರು
ಅನ್ನ-ನೀರುಬಿಡಿ, ಮಾನವತೆಯನೇ ಮರೆತರು

Friday, October 30, 2009

ಎಲ್ಲಿದೆ ಪ್ರಳಯ...ಹೇಗೆ ಅಂತ್ಯ??? ಮಾಯನ್...ಮನು..?













ಹಿಂದೂ ಪುರಾಣಗಳ ಆಧಾರದ ಮೇಲೆ.....2012 ಕ್ಕೆ ಅರ್ಥ ಇಲ್ಲ??!!! ಹೇಗೆ?
(ಇದಕ್ಕೆ.. ಬಲ್ಲವರು ಪೂರಕ ಮಾಹಿತಿ ಕೊಡಬಹುದು)


"ಅರೆ ಇವನ ಇವನ ಪ್ರಳಯದ ಸಂಶಯ ನಿವಾರಿಸಿ ಮೂರುದಿನ ಆಗಿಲ್ಲ ಇನ್ನೊಬ್ಬರನ್ನ ಕರೆತರ್ತಾ ಇದ್ದಾನಲ್ಲ...ಇವರೇನಾದ್ರೂ ಅವರ್ದ್ದೇ ತರ್ಕ ತಂದರೋ ಹೇಗೆ..? ಎ0ಮ್ದು ಕೊಳ್ಳುತ್ತಾ ರಾಮಣ್ಣ ತನ್ನ ಮನೆಕಡೆ ಬರುತ್ತಿದ್ದ ಗೋಪಾಲ ಮತ್ತು ಅವರ ಜೊತೆಯಿದ್ದವರನ್ನು ಬರ ಮಾಡಿಕೊಳ್ಳುತ್ತಾ...‘ಬರಪ್ಪಾ ಗೋಪಲ...ಬನ್ನಿ ಒಳಗ್ಬನ್ನಿ....ಅಂದಹಾಗೆ ಇವರು ಯಾರು ಗೊತ್ತಾಗಲಿಲ್ಲ..?‘
ರಾಮು ಇವರು ನಮ್ಮ ವೇದ ಪುರಾಣಗಳನ್ನು ಅಧ್ಯಯನ ಮಾಡ್ತಿರೋರು..ಇವರು ನಿನ್ನ ಮಾತು ಒಪ್ತಾರೆ..ಅಷ್ಟೇ ಅಲ್ಲ..ನಮ್ಮ ವೇದ ಪುರಾಣಗಳ ಪ್ರಕಾರ ಇದು ಕೇವಲ ಯುಗದ ಪ್ರಾರಂಭ ಆಗಿರೋಕೆ ಸಾಧ್ಯ ಅನ್ತಿದ್ದಾರೆ...ಅದೂ ನಮ್ಮ ಯುಗದ್ದಲ್ಲ..ಮಾಯನ್ ಯುಗದ್ದು..ನಮ್ಮ ಪ್ರಕಾರ ಯುಗ ಮುಗಿಯೋಕೆ...ಇನ್ನೂ ದೂರ ಇದೆ...ಪ್ರಳಯ ಹಾಗಿರ್ಲಿ...ಅಂತಾರೆ....ಅಂದಹಾಗೆ ಇವರು ವಿದ್ವಾನ್ ಸಿದ್ಧರಾಮ್. ಎಂದು ತನ್ನ ಜೊತೆಯಿದ್ದವರನ್ನು ರಾಮಣ್ಣನಿಗೆ ಪರಿಚಯಿಸಿದ.

ಸರ್ ನೀವೊಬ್ಬ scientist ಅಂತ ಹೇಳಿದ್ರು ಗೋಪಾಲ್ ..ಹಾಗೇ ಇವರ ಪ್ರಳಯದ ಬಗ್ಗೆ ಎದ್ದಿರುವ ಊಹಾ ಪೋಹಾ ನಿಜವಲ್ಲ ಅಂತ ಹೇಳಿದ್ದಿರಂತೆ...ಎಂದರು ವಿದ್ವಾನ್
ನೋಡಿ ನನ್ನ ಅಧ್ಯಯನ ಈಗಷ್ಟೇ ಪ್ರಾರಂಭವಾಗಿದೆ ನನಗೆ ತಿಳಿದಿರುವುದನ್ನು ಹೇಳ್ತೇನೆ...
ನಮ್ಮ ವೇದ-ಪುರಾಣಗಳ ಪ್ರಕಾರ...ಬ್ರಹ್ಮ ನಮ್ಮ ಸೃಷ್ಠಿಕರ್ತ...ಇಡೀ ಬ್ರಹ್ಮಾಂಡದ ಸೃಷ್ಠಿಕರ್ತ ಎಂದೇ ಹೇಳಬೇಕು. ಅಲ್ಲವೇ?
ಹೌದು...ಎಂದು ಗೋಣು ಹಾಕಿದರು ರಾಮಣ್ಣ ಮತ್ತು ಗೋಪಾಲ್ ..
ಮುಂದುವರಿದ ವಿದ್ವಾನರು...

ಮಾಯನ್ ಪ್ರಕಾರ ಅವರ ಪಂಚಾಂಗ 2012 ಕ್ಕೆ ಕೊನೆಯಾದರೆ ಬೇರೆ ಯುಗ ಪ್ರಾರಂಭವಾಗಬೇಕು...ಅದು ಪ್ರಳಯ ಅನ್ನುವುದಾದರೆ...ಮನುಕುಲದ ಸಮಾಪ್ತಿ ಎಂದಾಯಿತು...ಆದರೆ ಹಿಂದೂ ಪುರಾಣಗಳ ಪ್ರಕಾರ ಇದು ಅಸಾಧ್ಯ..ಇದು ಕೇವಲ ಒಂದು ಯುಗದ (ಮಾಯನ್) ಅಂತ್ಯ ಮತ್ತು ಮತ್ತೊಂದರ ಪ್ರಾರಂಭ...!!!
ಹೇಗೆ??

ಇದರ ಪ್ರಕಾರ ಬ್ರಹ್ಮನ ಆಯಸ್ಸು 100 ಭ್ರಹ್ಮ ವರ್ಷಗಳು. ಬ್ರಹ್ಮನ ವರ್ಷದ ಒಂದುದಿನವನ್ನು ‘ಕಲ್ಪ‘ ಎನ್ನುತ್ತೇವೆ...ಇದರ ಅವಧಿ 4.32 ದಶಕೋಟಿ ವರ್ಷಗಳು (ಇದು ಪೃಥ್ವಿಯ ಆಯಸ್ಸಿಗೆ ಸಮ). ಪ್ರತಿ ಕಲ್ಪದಲ್ಲಿ (ಆತನ ಒಂದು ದಿನ) ಬ್ರಹ್ಮ ಹದಿನಾಲ್ಕು ಮನು ವಂಶಗಳನ್ನು ಸೃಷ್ಠಿಸುತ್ತಾನಂತೆ. ಒಂದು ಮನು ವಂಶ (ಮನ್ವಂತರ) ಎಪ್ಪತ್ತೊಂದು ಚತುರ್ಯುಗಗಳನ್ನು ಹೊಂದಿರುತ್ತದಂತೆ...ಚತುರ್ಯುಗಗಳು ಅಂದರೆ ಸತ್ಯ, ತ್ರೇತ, ದ್ವಾಪರ ಮತ್ತು ಕಲಿ.
ಸತ್ಯಯುಗ - 1,728,000 ಮಾನವ ವರ್ಷಗಳ ಅವಧಿ ಹೊಂದಿರುತ್ತೆ
ತ್ರೇತ ಯುಗ- 1,296,000 ಮಾ.ವ.
ದ್ವಾಪರ ಯುಗ- 864,000 ಮಾ.ವ.
ಕಲಿಯುಗ - 432,000 ಮಾ.ವ.
ನಮ್ಮ ಆರ್ಯಭಟನ ಪ್ರಕಾರ ಕಲಿಯುಗ ಪ್ರಾರಂಭವಾಗಿದ್ದು 3102 ಕ್ರಿಸ್ತ ಪೂರ್ವ ಅಂದರೆ 3102+2009=5111 ವರ್ಷ ಕಳೆದಿದೆ. ಅಂದರೆ ಕಲಿಯುಗದ 432,000 ವರ್ಷ ಅವಧಿಯಲ್ಲಿ ನಾವು ಕಳೆದಿರುವುದು ಕೇವಲ 5111 ವರ್ಷ ಅಂದರೆ ಯುಗಾಂತ್ಯಕ್ಕೆ ಇನ್ನೂ 427,889 ವರ್ಷ ಇದೆ ನಂತರ ಒಂದು ಚತುರ್ಯುಗ ಮುಗಿದಂತೆ. ಈಗ ನಡೆಯುತ್ತಿರುವ ಮನು ವಂಶ ಏಳನೇ ಮನುವಂಶ ಇದಕ್ಕೆ ವೈಸ್ವತ್ ಮನುವಂಶ ಎನ್ನುತ್ತಾರೆ. ಹೀಗೆ ಹದಿನಾಲ್ಕು ಮನು ವಂಶಕಾಲ ಮುಗಿದ ಮೇಲೆ ಪ್ರಳಯ...!!!! ಅಂದ್ರೆ ಕಲಿಯುಗದ ಉಳಿದಿರುವ 427,889 ವರ್ಷದ ನಂತರ ಇನ್ನೂ ಏಳು ಮನುವಂಶಗಳು ಉಳಿದಿವೆ..ಪ್ರತಿ ಮನು ವಂಶಕ್ಕೆ 71 ಚತುರ್ಯುಗಗಳು ಅಂದರೆ 71 x 7 = 497 ಚತುರ್ಯುಗಗಳು. ಒಂದು ಚತುರ್ಯುಗ = 4,320,000 ವರ್ಷ ಅಂದರೆ ಉಳಿದಿರುವ 497 ಚತುರ್ಯುಗಕ್ಕೆ ತಗಲುವ ಅವಧಿ 2,147,040,000 ವರ್ಷ...!!!!! ಅಲ್ಲಿಗೆ ಬ್ರಹ್ಮನ ಒಂದು ದಿನ (ಕಲ್ಪ) ಮುಗಿಯುತ್ತೆ ಅಂದರೆ ಪ್ರಳಯ, ಬ್ರಹ್ಮ ನಿದ್ರಿಸುತ್ತಾನೆ..ಬೆಳಗೆದ್ದು ಮತ್ತೊಂದು ಸೃಷ್ಠಿ ಅಂದರೆ 14 ಮನುವಂಶಗಳು...ಹೀಗೆ ಬ್ರಹ್ಮನ ೧೦೦ ವರ್ಷ..ಒಬ್ಬ ಬ್ರಹ್ಮನ ಪತನ ಮತ್ತೊಬ್ಬನ ಉಗಮ...

ಯಾವುದಕ್ಕೆ ಅಂತ್ಯ? ಯಾರದ್ದು ಅಂತ್ಯ? ವಿಚಾರ ವೈಶಾಲ್ಯತೆಯ ಆಧಾರಕ್ಕೆ ಬಂದರೆ 2012..ಅಂದರೆ ಇನ್ನು ಉಳಿದಿರುವ ಮೂರು ವರ್ಷ...ಉಳಿದಿರುವ ಕಲಿಯುಗದ ಅವಧಿಯಲ್ಲಿ ತೃಣಮಾತ್ರ!!!