Monday, June 29, 2009

ಮಗು


ಮಗು
ನಿನ್ನಗು
ನನಗೂ
ಅಮ್ಮಗೂ.
ಮಗು
ನೀನಗು
ದೂಡಿ
ನಮ್ಮ ಬಿಗು.
ಮಗು
ನೀನಕ್ಕರೆ
ನಮಗೆ
ಹಾಲು ಸಕ್ಕರೆ
ತಾಯಿಗೆ
ನೀನೇ ಆಸ್ತಿ
ಹೇಳುವಳಲ್ಲಾ
ನನ್ನ ಚಿನ್ನ
ನನ್ನ ಬಂಗಾರ?

ಭಾವ, ಜೀವ, ಕವನ ಕಥನ



ಭಾವ ಭಾವಕೆ ಬದುಕು
ಬದುಕ ಬದುಕಲಿ ಭಾವ
ಭಾವವಿಲ್ಲದ ನಾವು
ತಣ್ಣಗೆ ಬಿದ್ದಂತೆ ಕಾವು

ಮಂಥಿಸಿದರೆ ಕಥನ
ಮಂಥಿಸಿದರೆ ಕವನ
ಮಂಥಿಸಿದರೆ ಸ್ವಂತ
ರಂಜಿಸಲು ಜೀವನ


ಅಕ್ಕನ ಗಂಡ ಭಾವ
ಅವರಿಲ್ಲದಿರೆ ಅಭಾವ
ಆ ಭಾವಕ್ಕೆ ಈ ಭಾವ
ಒಬ್ಬರೊಳಗೊಬ್ಬರ ಜೀವ

ಇಹದ ಬದುಕು - ಭವ
ಬದುಕಿರಲು - ಅದೇ ಜೀವ
ತೊರೆದುಜೀವ- ನಿರ್ಜೀವ
ಭಾವ ಬೇಕು ಮರೆಯಲು ನೋವ

‘ಮನಸ‘ ಕದಡಿತು - ಮೂಡಿತು ಕವನ
ಕನಸ ಹೆಣೆಯಿತು - ಬೆಂಬಿಡದ ಮನನ
ಭಾವನ- ಮಂಥನ, ಕಥನ- ಕವನ
ಹೀಗಲ್ಲವೇ ಸಹಜ ನಿರಂತರ ಜೀವನ ?

Wednesday, June 3, 2009

ಹಲೋ...ಪ್ರೊ. ಪರಮೇಶ್



(ದಾವಣಗೆರೆಯ ಗಾಂಜಾ ಸಾಧುವಿನ ಕಥೆ ಕೇಳಿ ಪ್ರೇರಿತ)

ಭಂ..ಭಂ..ಭೋಲೇ ಶಂಕರ
ಭಸ್ಮ ಉಂಟು ಭಂಗಿ ಇಲ್ಲ
ಸಿಗರೇಟ್ ಹಿಡಿದಿದೆ ನನ್ ಕರ
ಹಿಡಿದಿದೆ ಸುಕ್ಕು
ಮುಖ ಬಾಯಿ ಬೊಕ್ಕು
ಆದ್ರೂ ಯಾರಿಲ್ಲ ನನ್ ಥರ
ಕೈಲಿ ದೇಹಿ ಕಮಂಡಲ
ಗಡ್ಡನೆರೆ ಮುಖಮಂಡಲ
ಕಾವಿತೊಟ್ಟು ಹೇಳುವೆ ಹರೋಹರ
ಎಲ್ಲಿರುವೆ ಗಂಗಾಧರ
ಲೈನು busy ಬಲು ಭಯಂಕರ
ಮಿಸ್ ಕಾಲ್ ಕೊಟ್ಟಿರುವೆ ಪ್ರೊ.ಪರಮೇಶ್ವರ
ಯಾಗಾದಿ ಪೂಜೆ ಬೇಕಿಲ್ಲ
ಹೋಮ ಹವನ ಸಾಕಲ್ಲ
ಮೊಬೈಲ್ ಯುಗ ಆಯ್ತಲ್ಲ
ನೀನೇ ಕಾಲ್ ಮಾಡೋ ಶಿವ ಶಂಕರ

Monday, June 1, 2009

ಅಕ್ಕಿಗೂ ಮೊದ್ಲು ಭತ್ತ ಅಲ್ವೇ ಸಾ



ಮೂರ್ತಿ, ಬ್ಲಾಗ್ ಪೋಸ್ಟ್ ನನಗೆ ಯಾರೋ ಮೈಲ್ ಮಾಡಿದ್ರು...ಬಹುಶಃ ಈ ಕವಿ ಮೂಲಕ...ನೆನಪಾಗ್ತಿಲ್ಲ, ಚನ್ನಾಗಿದೆ ವಿಷಯ ತಮಾಷೆ ಮತ್ತು ನಮ್ಮ ನಾಗರಿಕ ನಗರವಾಸಿಗಳು ಹಳ್ಳಿಯವರನ್ನು ಕಂಡು ಮೂಗು ಮುರಿಯೋದು ಬಿಡಬೇಕು..ಯಾಕಂದ್ರೆ ಕೆಲ ವಿಷಯ ಅವ್ರಿಂದ ಕಲೀಬೇಕಾಗುತ್ತೆ...
ಉದಾ.. ಹಳ್ಳಿ ಸ್ಕೂಲಿಗೆ ಕುತೂಹಲಕ್ಕೆ ಬಂದ ನಗರದ ಹುಡುಗ ಹಳ್ಳಿ ಹುಡುಗ್ರನ್ನ ಬುದ್ದಿ ಇಲ್ಲದೋರು ಅಂತ ಆಡ್ಕೊಂಡಿದ್ದನ್ನ ನೋಡಿ ಮೇಷ್ಟ್ರುಅವನಿಗೆ ಮತ್ತು ತಿಮ್ಮನಿಗೆ ಹೊರಗಡೆ ಹೋಗಿ ನಾವು ತಿನ್ನೋ ಅನ್ನದ ಮೂಲಾನ ತನ್ನಿ ಅನ್ತಾರೆ...ನಗರದ ಹುಡುಗ ಹೊರಗಡೆ ಕುಯ್ಲಿಗೆ ಗದ್ದೆ ಇದ್ದದ್ದು ನೋಡಿ ಮೇಷ್ಟ್ರು ನನ್ನ ಬುದ್ಧಿ ಪರೀಕ್ಷೆಗೆ ಹೀಗೆ ಹೇಳಿದ್ದಾರೆ ಅಂತ ..ತನ್ನ ಭಾವನ ಮನೆಗೆ ಹೋಗಿ ಅಕ್ಕಿ ಕಾಳುಗಳನ್ನ ತರ್ತಾನೆ...ಮೇಷ್ಟ್ರು ಇಬ್ಬರನ್ನೂ ಕೇಳ್ದಾಗ ತಿಮ್ಮ ಭತ್ತದ ತೆನೆ ತೋರ್ಸಿದ್ರೆ..ನಗರದ ಹುಡುಗ ಹೆಮ್ಮೆಯಿಂದ ಅಕ್ಕಿ ಕಾಳು ತೋರಿಸ್ತಾನೆ.
ಮೇಷ್ಟ್ರು ಹೇಳ್ತಾರೆ.. ನಾನು ಹೇಳಿದ್ದು ನಾನು ತಿನ್ನೋ ಅನ್ನದ ಮೂಲ.. ಅದಕ್ಕೆ ನಗರದ ಹುಡುಗ ಹೇಳ್ತಾನೆ..ಅಕ್ಕಿ ಅಲ್ಲವೇ ಅನ್ನಮಾಡೋಕೆ ಬೇಕಾಗಿರೋದು...ಆದ್ರೆ ತಿಮ್ಮ ಹೇಳ್ತಾನೆ, ಸಾ ಅಕ್ಕಿಗೂ ಮೊದ್ಲು ಭತ್ತ ಅಲ್ವೇ ಸಾ... ಷಹಬ್ಬಾಶ್ ತಿಮ್ಮ ಅಂತಾರೆ ಮೇಷ್ಟ್ರು.

Sunday, May 31, 2009

ಗೊತ್ತಿಲ್ಲ ಮಗು

ಅಪ್ಪಾ
ಏನು ಮಗು?
ತೆರಿಗೆ ಹೆಚ್ಚು ವಸೂಲಿ ಆಯ್ತು ಅಂತ
ಬಿ.ಬಿ.ಎಂ.ಪಿ. ನೌಕರರಿಗೆ ಔತಣ ಏರ್ಪಡಿಸಿದ್ದರಲ್ಲಾ..?
ಹೌದು ಮಗು, encourage ಮಾಡೋಕೆ..
ಮತ್ತೆ ನಿರಂತರ ಹೆಚ್ಚು ಕೃಷಿ ಉತ್ಪನ್ನಗಳನ್ನು ಕೊಡೋ
ರೈತನಿಗೆ ಯಾಕೆ ..ಊಟ ಬೇಡ
ಸರಿಯಾಗಿ ವಿದ್ಯುತ್ ಪೂರೈಸ್ತಾಯಿಲ್ಲ ಸರ್ಕಾರ..?
ಗೊತ್ತಿಲ್ಲ ಮಗು.

ಅಪ್ಪಾ
ಏನುಮಗು?
ಮೈಸೂರ್ ಸಿಲ್ಕುಸೀರೆ ದುಬಾರಿಯಂತೆ?
ಹೌದು ಮಗು
ಮತ್ತೆ ಸರ್ಕಾರ ಮೂರು ಸಾವಿರಕ್ಕೆ
ಬಡವರಿಗೇ ಏಟುಕೋ ಸೀರೆ ಮಾಡ್ತಾರಂತೆ
ಹೌದು ಮಗು
ಚುನಾವಣೆ ಸಮ್ಯದಲ್ಲಿ ದಾಳಿಮಾಡಿ
ಜಪ್ತುಮಾಡಿದ ಸೀರೆ ಇವು ಅಂತಾರಲ್ಲಾ..
ಗೊತ್ತಿಲ್ಲ ಮಗು.

ಅಪ್ಪಾ
ಏನುಮಗು?
ಶಿವಮೊಗ್ಗದಲ್ಲಿ ಕೃಷಿ ವಿ,ವಿ, ಸ್ಥಾಪಿಸ್ತಾರಂತೆ?
ಹೌದು ಮಗು
ಮತ್ತೆ ರೈತನಿಗೆ ಕೃಷಿಗೆ ಇನ್ನೂ ಹೆಚ್ಚು
ಜಮೀನು ಸಿಗುತ್ತಾ?
ಗೊತ್ತಿಲ್ಲ ಮಗು

Sunday, May 24, 2009

ಗೊತ್ತಿಲ್ಲ ಮಗು

ಅಪ್ಪಾ
ಏನು ಮಗು?
ಬಿನ್ ಲ್ಯಾಡನ್ನು ನಂ ಮಾವ
ಬಿಲ್ ಕ್ಲಿಂಟನ್ನು ನಂ ಬಾವ ಅಂತ ಹಾಡಿದೆಯಲ್ವಾ?
ಹೌದು ಮಗು
ಮತ್ತೆ ಇವರಿಬ್ಬರೂ ಕ್ಲೋಸ್ ರಿಲಟಿವ್ಸ್ ಅಂತಾಯ್ತಲ್ಲ?
ಹಾಗೇ ಅಂದ್ಕೋ...
ಮತ್ತೆ ನಮ್ಮಪ್ಪ ಲಾಲೂ ಅಂತಾನೂ ಇದೆ..!!!
ಇವರು ಮೂವರೂ ಸಂಬಂಧಿಕರಾಗ್ಲಿಲ್ವಾ?
ನಂಗೊತ್ತಿಲ್ಲ ಮಗು.

ಅಪ್ಪಾ..
ಹೇಳು ಮಗು..
ಬೆಂಗ್ಳೂರ್ ರೋಡುಗಳು ಮಳೆಯಿಂದ
ಹಳ್ಳ ಕೊಳ್ಳಗಳಾಗಿವೆಯಂತೆ..
ಹೌದು ಮಗು..ವಾಹನ ಏನು ಜನ ನಡೆದಾಡೋದೂ
ಅಪಾಯಕಾರಿ ಅಗ್ಬಿಟ್ಟಿದೆ
ಮತ್ತೆ ,,ಮಳೆ ಬರೋವರ್ಗೂ ರಿಪೇರಿ ಮಾಡೊಲ್ಲ
ಅಲ್ವಾ ಅಪ್ಪ,,?
ಹೌದು ಮಗು...
ಮಳೆ, ಸರ್ಕಾರ ನುಂಗಣ್ಣಗಳಿಗೆ ಒಳ್ಳೆ ಚಾನ್ಸು
ಅಂತ ಪೇಪರ್ನಲ್ಲಿ ಬರ್ದಿದ್ದಾರಲ್ಲಾ, ಯಾಕಪ್ಪಾ..?
ನಂಗೊತ್ತಿಲ್ಲ ಮಗು.

ಅಪ್ಪಾ..
ಏನು ಮಗು..?
ಕನ್ನಡದ ಗಾಯಕ ಪ್ರತಿಭೆಗಳಿದ್ರೂ
ಹಿಂದೀ ಗಾಯಕರನ್ನು ಕನ್ನಡಕ್ಕೆ ಯಾಕೆ ತರ್ತಾರೆ..?
ಅವರ ಹಾಡು ಜನಪ್ರಿಯ ಆಗಿದೆ ಅಂತ
...ಮತ್ತೆ ಬೋಲ್ಡ್ ಆಗಿ ಅಭಿನಯಿಸೋ
ಪರಭಾಷಾ ತಾರೆಯರನ್ನೂ ತರ್ತಾರಲ್ಲಾ..?
ಹೌದು ಮಗು..
ಅಷ್ಟು ‘ಬೋಲ್ಡ್‘ ಆಗಿ ಕನ್ನಡದ ಹುಡ್ಗೀರು
ಮಾಡೋಲ್ಲ ಆಂತಾನೇ..?
ನಂಗೊತ್ತಿಲ್ಲ ಮಗು.

ಅಪ್ಪಾ..
ಸ್ಲಂ ಅಂದ್ರೆ ಏನಪ್ಪಾ...??
ಬೆಂಗ್ಳೂರು ಹಳೇ ಮದ್ರಾಸು ರೋಡಿನಪಕ್ಕ
ಗುಡ್ಲು ಕಟ್ಕೊಂಡು ಇದ್ದಾರಲ್ಲಾ
ಕೊಳೆಗೇರಿ ಅಂತಾರಲ್ಲಾ ಅದು...
ಕೊಳೇಗೇರಿ ನಾಯಿಗೆ ಆಸ್ಕರ್ ಪ್ರಶಸ್ತಿ
ಕೊಟ್ಟರಂತೆ...??
ಹೌದು ಮಗು..
ಮತ್ತೆ ನಮ್ಮ ಗಬ್ಬು ನಾರೋದನ್ನ
ನಾವೇ ಜಗತ್ತಿಗೆ ತೋರ್ಸಿದ್ದಕ್ಕಾ ..ಪ್ರಶಸ್ತಿ?
ನಂಗೊತ್ತಿಲ್ಲ ಮಗು.