Friday, December 16, 2011



ಛಾಯಾ ಚಿತ್ರ: ರಂಜಿತಾ ಹೆಗಡೆ


ಉದಯರವಿ
ಉದಯಿಸಿಹ ರವಿಯ ನೋಡು ಹೇಗೆ ಕೆಂಪು ಮೂಡಿದೆ
ಗಗನದಾಚೆ ಪೂರ್ವಾಂಗಣದಿ ಕೆಂಪು ನೀರು ಚಲ್ಲಿದೆ
ಕಿರಣ ಹರಡಿ ಬಾನಂಗಳದಲಿ ಹೊಂಬಣ್ಣವ ಸುರಿಸಿದೆ
ಕಲಕಲರವದಿ ಹರಿವನದಿ ದೇಗುಲ ಘಂಟೆ ಮೊಳಗಿದೆ

ಮೋಡವೆರಡೋ ಮೂರೋ ಧೈರ್ಯತುಂಬಿ ನಿಂತಿವೆ
ಒಡಲಾಳದಿ ಹನಿಗಳೆರಡ ಬಸಿರ ಬಯಕೆ ಹೊಂದಿವೆ
ಬೆಳಗಿನ ತಣ್ಣನೆಯ ಗಾಳಿ ತಾಗಿ ಮೋಡ ಭಾರವಾಗಿವೆ
ಹೀಗೇ ಹಲವು ಕೂಡಿ ಒಮ್ಮೆ ಭೂಮಿತುಂಬಾ ಹನಿಸಿವೆ

ಹನಿಯ ಕುಡಿದ ಮಣ್ಣು ತಾನೂ ಬೀಜ ಫಲಕೆ ಕಾದಿದೆ
ಬೀಜ ಬಿರಿದು ಮೊಳಕೆಯೊಡೆದು ಸಸಿತಲೆಯ ಎತ್ತಿದೆ
ಸಸಿಯೂ ಸವಿದು ನೀರಧಾರೆ ಬೆಳೆದು ಹೆಮ್ಮರವಾಗಿದೆ
ಮರಗಳೆಷ್ಟೋ ಭೂಮಿಗಪ್ಪಿ ಹಸಿರ ಹೊದಿಕೆಯಾಗಿದೆ

ಬೇಡ ಮನುಜ ಭೂಮಿ ಕಣಜ ಬಗೆದು ಖನಿಜದ ಆಸೆಗೆ
ಮಣ್ಣ ಕೊರೆತ ಮರಕೆ ಹೊಡೆತ ಬೀಳುವುವೆಲ್ಲ ಭೂಮಿಗೆ
ಹರಿವನದಿ ಕೊರೆವ ಬದಿ ನೆರೆಹಾವಳಿ ಸತತ ಬದುಕಿಗೆ
ಮೋಡಮಾಯ ಕಾಡುಮಾಯ ಸುಡಲು ಸೂರ್ಯಬೇಗೆ   

22 comments:

  1. thumba chennagide.. dhanyavadagalu

    ReplyDelete
  2. ರಂಜಿತಾ ಕವನದ ಭಾವಕ್ಕೆ ಸ್ಫೂರ್ತಿ ಚಿತ್ರ ಹಾಗಾಗಿ ಶ್ರೇಯ ಚಿತ್ರಕ್ಕೆ,,, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  3. ಪ್ರಾಸದಿಂದ ಕೂಡಿದ ಕವನ ಓದಲು ಸಂತಸವಾಯ್ತು.
    ಪ್ರ‍ೇರಣೆ ನೀಡಿದ ಚಿತ್ರವೂ ಕಣ್ಸೆಳೆಯುವಂತಿದೆ.

    ReplyDelete
  4. Azad sir....

    Odoke kushi aagutte...sundara prasa jodane....Madhura Kavana....Nice oine sir...

    ReplyDelete
  5. ಜಲನಯನ,
    ಕುವೆಂಪು ಅವರ ಕವನಗಳನ್ನು ನೆನಪಿಸುವ ಕವಿತೆ. ಸುಂದರವಾದ ವರ್ಣನೆಯಿಂದ ಕೂಡಿದೆ.

    ReplyDelete
  6. ಧನ್ಯವಾದ ಮಂಜುಳಾವ್ರೆ.. ಚಿತ್ರ ಕಂಡೊಡನೇ ಪದಗಳ ಸರವೊಂದು ಮೂಡಿತು ಹಾಗೇ ಕವನಕ್ಕೆ ಕೈ ಹಾಕಿದೆ.

    ReplyDelete
  7. ಅಶೋಕ್, ಧನ್ಯವಾದ ನಿಮ್ಮ ಅನಿಸಿಕೆ ಮತ್ತು ಕವನವನ್ನು ಇಷ್ಟಪಟ್ಟಿದ್ದಕ್ಕೆ.

    ReplyDelete
  8. ಸುನಾಥಣ್ಣ.. ಅವರ ಒಂದೆರಡು ಅಕ್ಷರದ ಸಮ ನನ್ನೆಲ್ಲಾ ಪ್ರಯತ್ನಗಳಾದರೂ ಧನ್ಯವೆನಿಸುತ್ತೆ ನನ್ನ ಕನ್ನಡ ಲೇಖನ ಕೃಷಿ... ನಿಮ್ಮ ಅಭಿಮಾನ ಪ್ರೋತ್ಸಾಹವೇ ನನಗೆ ಟಾನಿಕ್...ಧನ್ಯವಾದ

    ReplyDelete
  9. ಅಂದದ ಚಿತ್ರಕ್ಕೆ ಚೆಂದದ ಕವನ.ಅಭಿನಂದನೆಗಳು.

    ReplyDelete
  10. ಧನ್ಯವಾದ...ಡಾಕ್ಟ್ರೇ.. ಚಿತ್ರಕ್ಕೆ ಶ್ರೇಯ ರಂಜಿತಾಗೆ, ಕವನಕ್ಕೆ ನಿಮ್ಮ ಅನಿಸಿಕೆ ಧನ್ಯವಾದ...

    ReplyDelete
  11. ಪ್ರಾಸದೊಂದಿಗೆ ಭಾವಗಳು ಮಿಳಿತವಾಗಿ ಮೂಡಿ ಬಂದ ಕವನದ ಸೊಗಸೋ ಸೊಗಸು..

    ಇಷ್ಟವಾಯ್ತು ಸರ್..

    ReplyDelete
  12. ಸುಶ್ಮಾ, ಧನ್ಯವಾದ...ಪ್ರಾಸ ನನಗೂ ಇಷ್ಟ...

    ReplyDelete
  13. ಆಜಾದು...

    ಚಂದದ ಫೋಟೊಕ್ಕೆ ಸುಂದರ ಕವನ...

    ಬೆಳಗಿನ ವಾತವರಣವೇ ಅಂಥಾದು ಅಲ್ವಾ?

    ReplyDelete
  14. ಚಿತ್ರಕ್ಕೆ ಮೆರಗು ತ೦ದ ಚಿತ್ರಣ. ಪದ ಲಾಲಿತ್ಯದೊಡನೆ ಪ್ರಾಸದ ಹೂರಣ.
    ಅಭಿನ೦ದನೆಗಳು.

    ಅನ೦ತ್

    ReplyDelete
  15. sir nimage "prasa kavi "antha birudnnu kodabeku ...thumbha chennagagi prasa baritha , artha thumbida kavana bereyutthiri...

    ReplyDelete
  16. ಸುಂದರ ಚಿತ್ರಕ್ಕೆ ಚೆಂದದ ಕವನ. ಚೆನ್ನಾಗಿದೆ ಬಯ್ಯಾ :)

    ReplyDelete
  17. ಧನ್ಯವಾದ ಪ್ರಕಾಶೂ....

    ReplyDelete
  18. ಅನಂತ್ ಸರ್.. ಪ್ರಸಾದ ನಿಮ್ಮ ಪ್ರತಿಕ್ರಿಯೆ ನಮಗೆ..ಧನ್ಯವಾದ

    ReplyDelete
  19. ನೀವು ಕೊಟ್ಟರೇನೇ ಚಂದವದುವೇ
    ಹುಡುಗ ಹುಡುಗಿಗೆ ಆದಂತೆ ಮದುವೆ
    ನಿಮ್ಮ ಅಭಿಮಾನವೆಂದರೆ ಇದುವೇ..

    ಧನ್ಯವಾದ ಆಶಾವ್ರೆ...

    ReplyDelete
  20. ಮನಸೇ ಹೀಗೆ ಒಳ್ಳೆಯದನ್ನೆಲ್ಲಾ ಇಷ್ಟಪಡುತ್ತೆ, ಹಾರೈಸುತ್ತೆ .. ಸಿಗಲೆಂದು ಬಯಸುತ್ತೆ... ಧನ್ಯವಾದ ಬೆಹನಾ...

    ReplyDelete
  21. ಪರ್ಯಾವರಣದ ಕಾಳಜಿಯ ಕವನ ಅದ್ಭುತ

    ReplyDelete
  22. ಧನ್ಯವಾದ ಸೀತಾರಾಂ ಸರ್... ಪರಿಸರಕ್ಕೆ ನಮ್ಮ ಕೊಡುಗೆ ಸೊನ್ನೆಯೆನ್ನಬಹುದು ಅಲ್ವಾ...??

    ReplyDelete