Wednesday, December 22, 2010

ಅಯ್ನೋರೆ ಸ್ವಲ್ಪ ಎಚ್ರ
(ಬಾಬೂಜಿ ಧೀರೆ ಚಲ್ನಾ...ಶೈಲಿ/ಧಾಟಿ)


ಅಯ್ನೋರೆ ಸ್ವಲ್ಪ ಎಚ್ರ
ಲವ್ವಲೀ ಸ್ವಲ್ಪ ಹುಷಾರು
ಹಾಂ....ಇಲ್ಲಿ ಮೋಸಾನೇ ..
ಇಲ್ಲಿ ಮೋಸಾನೇ ನಡೀತೈತಂತೆ// ಅಯ್ನೋರೆ ಸ್ವಲ್ಪ//

ನೀವು ಬಿದ್ದಾಯ್ತು ಹುಡ್ಗೀರ ಹಿಂದೆ...
ಯಾಕೆ ಕಾಣ್ತಿಲ್ಲ ಸರಿ ದಾರಿ ಮುಂದೆ..
ಇದು ಅಯ್ನೋರ್ದು ಮೊದಲನೇ ಹೆಜ್ಜೆ
ಪ್ರತಿ ಹುಡ್ಗಿಯೂ ನಿಮ್ ಕಣ್ಗೆ ರಂಭೆ
ಹಾಂ ಇಲ್ಲಿ ಮೋಸಾನೇ ..
ಇಲ್ಲಿ ಮೋಸಾನೇ ನಡೀತೈತಂತೆ//ಅಯ್ನೋರೆ ಸ್ವಲ್ಪ//

ಇದು ಹುಡ್ಗೀರು ಅಡ್ಡಾಡೋ ಜಾಗ
ಇದೆ ಅಯ್ನೋರ್ಗೂ ಕ್ಲಿಕ್ ಆಗೋ ಯೋಗ
ಬಲು ಯೋಚಿಸಿ ಮಾಡಿ ನಿರ್ಧಾರ
ಇಲ್ಲಾಂದ್ರೆ ಹಾಕ್ತಾಳೆ ಅವ್ಳೇ ಮೂಗ್ದಾರ...
ಹಾಂ...ಇಲ್ಲಿ ಮೋಸಾನೆ ..
ಇಲ್ಲಿ ಮೋಸಾನೇ ನಡೀತೈತಂತೆ//ಅಯ್ನೋರೆ ಸ್ವಲ್ಪ//

ಇಲ್ಲಿ ಏಮಾರ್ಸೋರ್ದೇ ಒಂದು ಧಂಧೆ
ಏಮಾರ್ದೇ ಇದ್ರೇ ಗೆಲ್ವು ನಿಮ್ದೇ
ನಿಮ್ಮ ಬುದ್ಧಿಗೆ ನೀವೇ ಸರದಾರ
ಇಲ್ಲಾಂದ್ರೆ ಆಗುತ್ತೆ ಜೀವ್ನಾನೇ ಭಾರ
ಹಾಂ...ಇಲ್ಲಿ ಮೋಸಾನೆ ..
ಇಲ್ಲಿ ಮೋಸಾನೇ ನಡೀತೈತಂತೆ//ಅಯ್ನೋರೆ ಸ್ವಲ್ಪ//





Wednesday, November 3, 2010

ಕಣ್ಣಿರುವ ಕುರುಡರು

ಕಣ್ಣಿಲ್ಲ ಕುರುಡನಾನು,


ಒಳಿತು ಕೆಡಕುಗಳನರಿಯೆ


ಕೈಯಲ್ಲಿ ಹಿಡಿದು ಲಾಂಧ್ರ


ಬುದ್ಧಿವಂತರ ಕಾಡಿಗೆ ಬಂದಿರುವೆ


ನಕ್ಕವರೆಷ್ಟೋ ಮಂದಿ


ಕಣ್ಣು ಮೊದಲೇ ಇಲ್ಲ


ಬುದ್ಧಿಯೂ ಕಳಕೊಂಡನಲ್ಲ..!!


ಕೇಳಿದ ಬುದ್ಧಿವಂತಗೆ ನನ್ನ


ನಮ್ರ ಉತ್ತರ....


ಕುರುಡ ನಾನು ಕಣ್ಣಿಲ್ಲ ಗೊತ್ತು


ಕಣ್ಣಿದ್ದೂ ಕುರುಡರು ನೀವು


ಲಾಂಧ್ರವ ಕಂಡೂ ಕೇಳುವಿರಿ


ಕೈಯಲ್ಲಿರುವುದೇನೆಂದು...


ನನಗಂತೂ ಇದರಿಂದಿಲ್ಲ ಉಪಯೋಗ


ತಂದೆ ಜೊತೆಯಲಿ


ಕಣ್ಣಿರುವ ಕುರುಡರಿಗೆ


ನಾನು ಬರುವುದು ಕಾಣಲೆಂದು.


ದೀಪ ಬೆಳಗುವುದೇ ಇದಕೆ


ನೋಡಿ ನಡೆಯಲೆಂದು


ನಯ ವಿನಯ ಎಚ್ಚರಿಕೆಗೆಂದು

Friday, October 1, 2010

ಗೊತ್ತಿಲ್ಲ ಮಗು

ಅಪ್ಪಾ



ಏನು ಮಗು?


ದೇವನಹಳ್ಳಿ ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಯ್ತು ಅಲ್ವಪ್ಪಾ?


ಹೌದು ಮಗು ನಾಡಿಗೆ ಒಳ್ಳೆ ವಿಮಾನ ನಿಲ್ದಾಣ ಸಿಕ್ತು


ಅದಲ್ಲಪ್ಪಾ..ಕೋಟ್ಯಾಂತರ ಸಿಕ್ಕ ರೈತ


ನಾಲ್ಕೈದೇ ವರ್ಷದಲ್ಲಿ ಬೀದಿಗೆ ಬಂದಾಂತ...


ಗೊತ್ತಿಲ್ಲ ಮಗು






ಅಪ್ಪಾ


ಹೇಳು.ಏನು?


ಮತ್ತೆ ಇನ್ನಷ್ಟು ದೇವನಹಳ್ಳಿ ದೊಡ್ಡಬಳ್ಳಾಪುರದ ರೈತರು


ಸರ್ಕಾರದ ಭೂ ಸ್ವಾಧೀನಕ್ಕೆ ಒಪ್ತಾ ಇಲ್ವಂತಲ್ಲಪ್ಪ


ಹೌದು ಕಣೋ ನೀನೇ ಹೇಳಿದ್ಯಲ್ಲ, ಬೇರೆ ಗೇಯ್ಮೆ ಗೊತ್ತಿಲ್ದೇ


ಹಣ ಖರ್ಚು ಮಾಡಿ ಬೀದಿಗೆ ಬರೋದು ಬೇಡಾಂತ..


ಅಲ್ಲಪ್ಪಾ..ಅವರ ಹೆಸರಲ್ಲಿದ್ದ ಜಮೀನು


ಮಂತ್ರಿಗಳು ದೋಚ್ಕಂಡವ್ರಂತೆ...?


ನಂಗೊತ್ತಿಲ್ಲ ಮಗು...






ಅಪ್ಪಾ..


ಇನ್ನೂ ಏನೋ ನಿಂದು...?


ಈ ಸರ್ತಿ ದಸರಾಕ್ಕೆ ಕರ್ಕೊಂಡು ಹೋಗ್ತೀಯಾ?


ಆಗಲಿ ಕಣೋ ನಿಮ್ಮಣ್ಣಂಗೆ ಹೇಳು


ರೈಲಲ್ಲಿ ಎಲ್ಲರಿಗೆ ಟಿಕೇಟ್ ಮಾಡ್ಸು ಅಂತ.


ಊಂ ನನಗೆ ಬೇಡ,, ನಮ್ಮ ಮುಖ್ಯಮಂತ್ರಿಗಳು


ಹೊಸ ವಿಮಾನ ನಿಲ್ದಾಣ ಮಾಡಿದ್ದಾರೆ, ವಿಮಾನದಲ್ಲೇ ಹೋಗ್ಬೇಕು


ಆಯ್ತಪ್ಪಾ..ನೀನು ನಿನ್ನಣ್ಣ ಇಬ್ಬರೇ ಹೋಗಿ ಬನ್ನಿ..


ಅಂದ ಹಾಗೆ ಅಲ್ಲೂ ಮಿನಿಸ್ಟ್ರ ಸಂಬಂಧೀಕರು


ಜಮೀನು ಕೊಂಡ್ಕೊಂಡಿದ್ದಾರಂತೆ...


ಲೋ ತರ್ಲೆ...


ನಂಗೊತ್ತಿಲ್ಲ ಕಣೋ...

Sunday, September 26, 2010

ಎರಡು - ಮಾತು

ದೀಕ್ಷೆ

ಹನಿ ಹನಿಸಿದಾಗ ಮಡು
ತುಂಬಿ ಬಂದಾಗ ನೆಡು
ಗಿಡ ಬಳ್ಳಿ ಹಸಿರಾಗಲಿ ಕಾಡು
 ತೊಡು ದೀಕ್ಷೆ, ಬಿಡು ನಿರೀಕ್ಷೆ

ನೀನು, ನಿನ್ನವರಿಗಿದು ಪರೀಕ್ಷೆ

ಚಲಿಸಿ ಬಿಡದೆಭುವಿ ತನ್ನಾಕಕ್ಷೆ



ಇಲ್ಲಗಾವಲು ಹಸಿರು ಬರೀ ಸೀಳು

ಗೋಮಾಳವಿಲ್ಲ ಆಗಿ ಎಲ್ಲ ಗೋಳು

ಹೊಗೆ ಪ್ರದೂಷಣೆ ಹಾಳು ಹಾಳು


ನೀರಿಲ್ಲ ಎಲ್ಲೆಡೆ ನೀರ್-ಮಲ

ಪ್ರಾಣವಾಯು ಆಗಿ ವಿಷಾನಿಲ

ತಲ-ಜಲ-ಚರ ಒದ್ದಾಡಿ ವಿಲವಿಲ


ಸೂರ್ಯ ಶಕ್ತಿ

ಕೂಡಿಟ್ಟರೆ ಹನಿ

ಆಗುವುದು ಖನಿ

ಒಂದೊಂದೇ ದನಿ

ಕೊಳ್ಳಲಿ ಮಾರ್ದನಿ

ಮನೆಯಾಗಿ ಮೊದಲು

ಬೀದಿ ಮಾಡಿ ನಕಲು

ಎಲ್ಲ ಒಂದಾಗಿ ಮಾಡಲು

ಉಕ್ಕಿಹರಿವುದು ಹೊನಲು

ವಿವೇಚಿಸಿ ಉಪಯೋಗಿಸಲು

ನಿಸರ್ಗದತ್ತ ಸೂರ್ಯನ ಬಿಸಿಲು

Friday, September 17, 2010

ಸಸ್ಯವನದಲ್ಲಿ ಬ್ಲಾಗೋತ್ಸವ












ಸಸ್ಯವನದ ಸೊಬಗಿನಲ್ಲಿ ಬ್ಲಾಗಿಗರ ಬಳಗದಲ್ಲಿ

ಅರ್ಕಾವತಿ ಹರಿಯುವಲ್ಲಿ ಸಸ್ಯಗಳ ನೆಟ್ಟೆವಲ್ಲಿ
ಈಶ್ವರರ ಸಾಂಗತ್ಯದಲ್ಲಿ ಸಸ್ಯವನದ ತಂಪಿನಲ್ಲಿ
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ..
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ
ಪಕ್ಕುಮಾಮನ ಸಾರಥ್ಯದಲ್ಲಿ ಶಿವುಛಾಯಾಲೋಕದಲ್ಲಿ
ಪರಾಂಜಪೆ ದೇಸಾಯರ ಗಂಭೀರ ಚರ್ಚೆಗಳಲಿ
ಈಶ್ವರರ ಸಸ್ಯಜ್ಞಾನ ಹುಡುಗರ ಹುಡುಕಾಟದಲಿ
ಬ್ಲಾಗತ್ಸವ ನಮ್ಮ ಬ್ಲಾಗೋತ್ಸವ
ಅನಿರಾಘು ನವೀನ್ ಶಿಪ್ರ ಗುರುಮಹೇಶಸುಗುಣರೊಂದಿಗೆ
ದಿಲ್ಪ್ರಗತಿ ವಸುದೇಶ ವಿದ್ಯಾ ಆಶಶೀಶ್ ಪ್ರಶಾಂತ ವೈದ್ಯ
ಚೇತು ನಂಜುಂಡ್ ಒಡನಾಟದಲ್ಲಿ ಜಲನಯನದ ಉಪವಾಸದಲ್ಲಿ
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ

Thursday, August 5, 2010

ಮತ್ತೆ ಕೆಲವು ನ್ಯಾನೋಗಳು.......

Why ಯಾರೀ?



ಬಲು ಜೋರು ಬಾಲೆ ಎರಡು ಜಡೆ ಹೂಮಾಲೆ
ಜಿಂಕೆಯಂತೆ ಜಿಗಿದವಳು ಓಹ್ ! ಓಲಾಡೋ ಓಲೆ

 

ಕಣ್ಣಿನಲಿ ತುಂಟತನ ಅದರೂ ಇಲ್ಲ ಮೊಂಡುತನ
ಹೆಣ್ಣಿನಂದ ತುಂಬಿದ ಗಲ್ಲ ಅಲ್ಲಿಗಲ್ಲಿಗೆ ಚೆಲ್ಲುತನ

ಬೆಳೆದು ಬಲುವೈಯಾರಿ ಸಿಂಗರಿಸೆ ಸಿಂಗಾರಿ
ಛೇಡಿಸೆ ಹುಸಿಗೋಪ ಕೆನ್ನೆಗೆ ಚಲ್ಲಿದಂತೆ ಕೇಸರಿ

ಹಳ್ಳಿಹಾದಿ ಅಜ್ಜಿ ಮನೆ ಬಾವಿನೀರಿಗೆ ಬಂದ ವೈಯಾರಿ
ಬಳುಕು ನಡು, ನೀಳ ಜಡೆ, ನೀರು ಹೋಗುತ್ತಿದೆ ಸೋರಿ

ಅವಳಾ ನೋಟ ಹೊನ್ನ ಮೈಬಣ್ಣ ಎಲ್ಲರ ಗೆಲ್ಲುವಾಸೆ
ಮುದಿ ಗೌಡ ಜಗುಲಿ ಮೇಲೆ, ನೋಡಿ ಕುಣಿಯಿತು ಮೀಸೆ

ಕೇಳಿದ್ರೆ ಹೇಳ್ತಾನೆ ಮುಪ್ಪಾದ್ರೂ ಹುಳಿಯಲ್ವೇ ಹುಣಿಸೆ
ಇದ ಕೇಳಿ ಗೌಡ್ತಿ ತಂದು ತೋರ್ಸಿದ್ಲು ಹಳೆ ಪೊರಕೆ ವರಸೆ

Sunday, August 1, 2010

ಸ್ನೇಹಿತ


(ಸ್ನೇಹಿತರ ದಿನದಂದು ನನ್ನ ಬಾಲ್ಯದ ಗೆಳೆಯನ ನೆನಪಲ್ಲಿ)

ಅವನಲ್ಲಿ ನಾನಿಲ್ಲಿ ಆದರೂ ನಮ್ಮಲ್ಲಿಲ್ಲ ದೂರ


ಅವನಿದ್ದ ನನ್ನ ಜೊತೆ ಇದ್ದಾಗಲೂ ನಾನು ಪೋರ



ಮಾಸ್ತರು ಹಾಜರಿಗೆ ಅವನದಾಯ್ತು ಜವಾಬು

ಎಂದೋ ಸತ್ತಿದ್ದ ನನ್ನ ತಾತ ಸತ್ತ ಎಂದ ಸಬೂಬು



ಸ್ಕೂಲಿಂದ ಬರುವಾಗ ತೋಪಿಗೆ ನುಗ್ಗಿದ್ದು ಮಾವಿಗೆ

ಮಾಲಿ ಬಂದಾಗ ನನ್ನ ಬದಲಿಗೆ ತಾನೇ ಸಿಕ್ಕಿದ್ದ ಪೆಟ್ಟಿಗೆ



ತುಂಟಾಟಮಾಡಿ ಸಿಕ್ಕಿಬಿದ್ದೆ, ಬೆತ್ತ ಬಿತ್ತು ಛಟೀರ್-ಕೈಗೆ

ಅಯ್ಯೋ ಎಂದಿದ್ದ ಗೆಳೆಯ ಬಿದ್ದಂತೆ ಏಟು ತನ್ನ ಮೈಗೆ



ಹತ್ತರಲ್ಲಿ ಪ್ರಥಮ ದರ್ಜೆ ಸಿಕ್ಕಿದ್ರೂ ಪೆಚ್ಚಾಗಿ ಬಂದ್ರೆ - ನಾನು

ಊರಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದ ತಾನೇ ಗೆದ್ದಂತೆ ಅವನು

Tuesday, July 20, 2010

ಮಗುವಿರಬೇಕು

ಪ್ರತಿ ಮನದಲಿ ಒಂದು ಮಗುವಿರಬೇಕು



ಮನ ಕಲಕು, ಮೆಲುಕು ಪಲುಕುತಿರಬೇಕು


ನಗು ಒಳಿತಿಗೆ ಕೆಡಕಿಗೂ ಉಕ್ಕುತಿರಬೇಕು


ಅದ ಅರಿತಂತಿದ್ದೂ ಮರೆಯುವಂತಿರಬೇಕು



ಅಪ್ಪ ಅಮ್ಮಗೆ ಚುಮ್ಮ ಕೊಡುತಿರಬೇಕು


ಬೆಳೆದರೂ ಬಲಿತರೂ ತುಂಬೊಲವಿರಬೇಕು


ಅಣ್ಣನಾದರೂ ತಮ್ಮ ಅಕ್ಕನಾದರೂ ತಂಗಿ


ಎಲ್ಲಬಲ್ಲವನಾದರೂ ಅರಿಯದಂತಿರಬೇಕು



ತುಂಬು ಮನದ ನಿರ್ಮಲ ಮಗುವಿನ ನಗುವಿರಬೇಕು


ಸಹಾಯ ಬೇಡದೆಯೂ ಎಲ್ಲರಿಗೆ ಸಿಗುತಿರಬೇಕು


ತನ್ನಳಲ ಬಿಸಿಲಲ್ಲಿಟ್ಟುಸುಟ್ಟು ನೆಚ್ಚಿದವರಿಗೆ ನೆಳಲ


ಬಿಳಲು ಬಿಟ್ಟು ತಂಪನೆರೆವ ಹರಡಿದಾಲದಂತಿರಬೇಕು



ಕರೆಯದೇ ಬರುವ ಆಪತ್ತಿಕಾದವನಂತಿರಬೇಕು


ಮರೆಯದೇ ನೆನೆವ, ಕೊಟ್ಟದ್ದ ಮರೆತಂತಿರಬೇಕು


ಉರಿವ ಧೂಪ, ತೇಯ್ವ ಸುಗಂಧದಂತಿರಬೇಕು


ಇರಬೇಕು, ಇರಬೇಕು ಪ್ರತಿ ಮನದಲ್ಲೂ ಮಿಡಿವ


ಮುಗ್ಧ, ತುಂಬು ನಗುವಿನ ಮಗುವಿರಬೇಕು.

Saturday, June 5, 2010

ಏಕೆ ?ತಿಳಿಯದಾಗಿದೆ

ಮಳೆ ಬಂದು ನಿಂತ ಮೇಲೆ ಎಲ್ಲ ತಣ್ಣಗಾಗಿದೆ...



ಮರವೂ ಇಲ್ಲ ಹನಿಯೂ ಇಲ್ಲ ಎಲ್ಲಾ ಬೋಳಾಗಿದೆ...


ಬಿದ್ದ ಹನಿಗೆ ಗುದ್ದು ತಿಂದ ಮಣ್ಣು ಅಲುಗಾಡಿದೆ


ಶುಭ್ರ ಹರಿವನದಿ ಬೆಟ್ಟದಿಂದ ಬಗ್ಗಡ ಹೊತ್ತು ಹೊರಟಿದೆ




ದಾರಿಯಲ್ಲಿ ಸಿಕ್ಕಿಬಿದ್ದೆ ಹನಿಬಿತ್ತು ತಲೆಯಮೇಲೆ


ತಣ್ಣನೆಯ ಅನುಭವ ಇಲ್ಲ ಬರಬಹುದೇ ಖಾಯಿಲೆ


ಗಾಳಿಯಲ್ಲಿ ತೇಲುತಿದ್ದ ಧೂಳು ಕ್ರಿಮಿ ಇತ್ತುಮೊದಲೆ


ನಮ್ಮ ಗೋರಿ ನಾವೇ ತೋಡಿ ಅತ್ತು ಕರೆವ ಮೊದಲೇ




ಪರಿಸರ ನೋಡಲಿಲ್ಲ ಹುಚ್ಚು, ಬರೀ ಸರ-ವೇ ಕಂಡಿತಲ್ಲ


ಡಾಂಬರು ಹಚ್ಚಲು ಮರವ ಉರುಳಿಸಿ ಹಣ್ಣ ಬಯಸು ಸಲ್ಲ


ಹಾದಿ ಬದಿಲಿ ಬಾಯಾರಿ ಬರಲು ನೀರು ಬೇಡ ನೆರಳೂ ಇಲ್ಲ


ಆಳುದ್ದ ಬಾವಿ ಬಲು ನೀರು, ಈಗ ತೋಡಿ ಬರೀ ಬೆವರೇ ಎಲ್ಲಾ


ಪಾತಾಳ ಸೇರೆ ಬಾವಿ ಬೋರು, ನೀರಿಲ್ಲ ಮಗುವೇ ಬಿದ್ದಿತಲ್ಲಾ




ಕಾಡ ಕಡಿದು ಹಲ-ಹಲಗೆ ಮಾಡಿ, ಬೇಟೆಯಾಡಿ ಕೊಂದೆವು


ಹುತ್ತ ಹೊಡೆದು ಹಾವ ಸಿಗಿದು ಚೀಲಮಾಡಿ ಬೆಲ್ಟು ಮಾಡಿಕೊಂಡೆವು


ಹೊಲದಲಿ ಹೆಗ್ಗಣ ಪಿಡುಗಿಗೆ ಸುಲಭವೆಂದು ಪಾಶಾಣ ಹಾಕಿ ಕೊಂದೆವು


ಸೊಳ್ಳೆ ನೊಣ ಕ್ರಿಮಿ ಕೀಟಕೆ ಎಂಡೋಸಲ್ಫಾನ್ ಡಿ.ಡಿ.ಟಿ ತಂದೆವು


ಕಲುಷಿತ ಹುಲ್ಲು, ಗೋವಿನ ಹಾಲು, ತಾಯ ಮೊಲೆಗೂ ಕೊಟ್ಟೆವು




ಇದ್ದುದರಲ್ಲಿ ತೃಪ್ತಿಪಡುವ ಮನಸೇಕೆ ಇಲ್ಲದಾಗಿದೆ ?


ಜಾತಿ ಮತ, ಹಣ-ಅಧಿಕಾರದಾಸೆ ಏಕೆ ಪ್ರಧಾನವಾಗಿದೆ?


ನನ್ನಜನ, ನನ್ನ ಮನೆ, ನನ್ನಮಕ್ಕಳು ಕೊನೆಗೆ ನಾನೇ ಏಕಾಗಿದೆ?


ತಾನೇ ಎಂದು ಮೆರೆದವರು ಮಣ್ಣಾದರೆಂದು ಏಕೆ ತಿಳಿಯದಾಗಿದೆ?

Sunday, May 16, 2010

ಮತ್ತೆ-ಕೆಲವು ಚುಟುಕು-ಗುಟುಕು

ಮುತ್ತು-ಮತ್ತು

ಕೊಟ್ಟರೆ

ಮುತ್ತು

ಬರುವುದು

ಮತ್ತು



ರಸ-ವಿರಸ
ಸಮರಸ

ಆದರೆ..ಗಂಡ-ಹೆಂಡತಿ

ಬರೀ ವಿರಸ

ಆದರೆ..ಪ್ರಾಣ ಹಿಂಡುತೀ



ಬದಲಾವಣೆ

ನಮ್ಮನೆ ನಾಯಿ ಬೆಕ್ಕು

ಈ ಮಧ್ಯೆ ಕಚ್ಚಾಡ್ತಿಲ್ಲ

ಕೇಳ್ದೇ..ಯಾಕೋ ಗೊತ್ತಾಗ್ತಿಲ್ಲ

ನನ್ನವಳು ಹೇಳಿದ್ಲು

ಡೈಲಿ ಟೀವೀಲಿ ನೋಡ್ತಾವಲ್ಲ
ವಿಧಾನ-ಸಂಸತ್ ಸಮಾಚಾರಾನೆಲ್ಲ

Friday, April 30, 2010

Something ಡಿಫರೆಂಟು

Something ಡಿಫರೆಂಟು


ಕತ್ತೆ, ಕಿರುಬ, ಹಂದಿ,


ರಣಹದ್ದು, ಕಾಗೆ, ರೋಗಿ,


ನರಿ, ಗೂಬೆ, ಗೋಸುಂಬೆ


ಮಾಸ್ತರು ಹೇಳಿದರು ಮಕ್ಕಳನ್ನು ಕೇಳುತ್ತಾ


ಈ ಎಲ್ಲ ಗುಣಕೆ ಹೊಂದುವ ಒಂದು


ಪ್ರಾಣಿಯ ಹೆಸರು ಹೇಳಿ,


ಮಕ್ಕಳೆಲ್ಲ ಕೂಗಿ ಹೇಳಿದರು


‘ರಾಜಕಾರಣಿ‘





ಡುಂಡಿ ನೀವ್ ನನ್ ಸೀನಿಯರ್


ವಿ.ವಿ.ಲಿ ನಾನ್ ನಿಮ್ ಜೂನಿಯರ್


ನೀವ್ ಬರೆದ್ರಿ ಎಲ್ಲ ಅಂದ್ರು


ಚುಟುಕ ಅಂದ್ರೆ ಡುಂಡಿ


ನಾನ್ ಬರೆದ್ರೆ ಓದೋರಿಲ್ಲ


ಹೇಳ್ತಾರೆ ಹಾಳ್ಮಾಡ್ಬ್ಯಾಡ ಪೇಪರ್


ದಂಡಿ



ಹುಡುಗೀದು


ಹೋಗುತ್ತೆ ಮುಂದಕ್ಕೆ


ಆಂಟೀದು


ನಿಂತಲ್ಲೇ ನಿಲ್ಲುತ್ತೆ


ವಯಸ್ಸು



ಅವನು ಆಗ್ಲಿಲ್ಲವೇ


ಅಂತ ಪರದಾಟ


ಇವನು ಯಾಕಾದ್ರೂ


ಮಾಡ್ಕೊಂಡೆನೋ


ಒದ್ದಾಟ....


ಮದುವೆ




ಯೋಗಾಯೋಗ


ಭೋಗಾಭಾಗ


ಸದಾನಂದ


ನಿತ್ಯಾನಂದ




ಹೊಟ್ಟೇಲಿ ಹೊತ್ತೆ


ಕನಸನ್ನ ಕಟ್ಟಿ


ಎದೆಯಾಮೃತ


ಕೈತುತ್ತ ಕೊಟ್ಟೆ


ಬೆಳೆದೆ ನಾ ಸುಖದಲಿ ಓಲಾಡಿ


ಮುತ್ತಿಗಾಗಿ ನಿನ್ನ


ಬೆಂಕಿಯ ಬೇಯ್ಗೆಗಿಟ್ಟೆ ಕಾಡಿ


ಆದರೂ ನಕ್ಕು ಹರಸಿದೆ


ಹರಿಸಿ ಮಮತೆಯಾ ಕೋಡಿ


ಏಕೆಂದರೆ ನೀನನ್ನ


ಅಮ್ಮ


ಬಿರಿದ ನೆಲಕೆ ಬೇಕು..


ನಾ ನೊಂದರೆ ಅಮ್ಮನ


ಕಣ್ಣಲಿ ತುಳುಕುವುದು..


ಪ್ರಿಯಕರ ತನ್ನ ಪ್ರಿಯೆಗೀಗ


ಮನತುಂಬಿ ಕರೆವುದು..


ಹನಿ

Saturday, March 13, 2010

हिंदि में कुछ ऐसे ही

ಮೂಹ್ ಬೋಲೀ-ಬೆಹೆನ್

ಎಹ್ ಲಡಕಿ ಹೈ ಆತೀ ಹೈ ಅಕ್ಸರ್ ಶಾಯದ್ ನಹೀಂ ಅಜಬ್
ಪಲ್ ಭರ್ ಮೆ ಪತಾ ನಹೀ ಕ್ಯೋಂ ಹೋ ಜಾತೀ ಹೈ ಗಾಯಬ್

ಇಸ್ಕಾ ಆನಾ ಲಗ್ನೆ ಲಗಾ ಹೈ ಹೋತಾ ಬರಾಬರ್ ನ ಆನಾ

ಹೈ ಶಾದೀ ಕೀ ತಯಾರಿ ಔರ್ ಹೈ ಬೆಚಾರೀಕೋ ಪಿಯಾ ಘರ್ ಜಾನಾ
ಕಹಾಂಕೆ ರಿಶ್ತೆ, ಕಿಧರ್ ಕೆ ನಾತೆಂ, ಓ ಥೀ ಅಜನಬೀ ಬನೇ ಐಸೇ ಭೀ ನಾತೇ
ಮೂಹ್ ಬೋಲೀ ಬೆಹನಾ ಛೋಡ್ ಬಾಬುಲ್ ಕೆ ಘರ್ ಚಲೀ ಹೈ ಸಸುರಾಲ್

ಪಿಯಾ ಭುಲಾ ರಹೆ ಹೈಂ ಉಸ್ಕೆ ಬಾಬುಲ್ ಕೀ ಬಾತೇಂ



ಓ ಥೀ-ನೆಟ್ ಪರ್

ಹೋ ಗಯೀ ಐಸೇಹೀ ಮುಲಾಖಾತ್ ಉಸ್ ಸೆ- ಕ್ಯಾ ಲಡ್ಕೀ ಥೀ

ನೆಟ್ ಪರ್

ಕೈಸೆ ಹೋ, ಕಹಾಂ ಹೋ ಲಗೇ ಪೂಛ್ ನೆ ಹಮ್ ಬೋಲ್ ಉಠೀ …ಭಯ್ಯಾ

ಝಟ್ ಕರ್

ಹೋತೀ ಬಾತೇಂ ಇಧರ್ ಕೆ ಉಧರ್ ಕೆ ಆತೀ ಥೀ ಅಕ್ಸರ್ ಒಹ್

ನೆಟ್ ಪರ್

ಅಪ್ನೀ ಬಚ್ಪನ್ ಕೀ ಓ ಸುನಾತೀ ಮೈ ಕರ್ತಾ ಮೆರೆ ಕಾಲೆಜ್ ಕೀ

ಬಾತೇಂ ಅಕ್ಸರ್

ಐಸಾ ಭೀ ಮೌಕಾ ನ ಆಯಾ ಮಿಲ್ ನೇ ಕಾ ಆಮ್ನೆ-ಸಾಮ್ನೆ, ಪರ್ ಬಾತೇಂ

ಬರಾಬರ್ ನೆಟ್ ಪರ್

ಗುಜರ್ ಗಯೆ ಐಸೆ ಹೀ ಪಾಂಚ್ -ಸಾತ್ ಸಾಲ್, ಓ ಥೀ
ಮೂಹ್ ಬೋಲೀ ಬೆಹನಾ
"ಗುಲ್ ಬದರ್"


ಬ್ಲಾಗಿಯೋಂ ಕೀ ಮೀಟಿಂಗ್ ಥೀ ಮೈಂ ಭೀ ಪಹೂಂಚಾ, ಹೋಗಯೀ ಥೀ

ಬಹುತ್ ದೇರ್

ಸಾಲ್ ಕೆ ಸಬ್ಸೆ ಮಶ್ ಹೂರ್ ಬ್ಲಾಗಿ ಕೋ ಬುಲಾಯಾಗಯಾ

ಸ್ಟೇಜ್ ಪರ್

ಬುರ್ಖಾ ಪಹನೆ ಲಡಕೀ "ಗುಲ್ ಬದರ್" ಹಟಾಯಿ ಚಹರೆ ಸೆ ಪರದಾ

-ಹೋಶ್ ಮೇರೆ ಉಡ್ ಗಯೇ..ದೇಖ್ ಕರ್ ಉಸ್ಕೋ-

ಅರೆ ಒಹ್ ಥೀ ಮೇರಿ ಜಿಂದಗೀ ಕಿ

ಹಮ್-ಸಫರ್

Thursday, February 25, 2010

ಛಲ-ಬಲ

ಬಿಡೆ ಎನ್ನುತಿದೆ

ಬೆಂಬಿಡದೆ ಬರುತಿದೆ

ಕೆಂಡಕೈಲಿ ಹಿಡಿದು

ಚೆಂಡಾಡುವ ಛಲ

ಉಂಡು ಗುಂಡಾಗುವ ಬಲ

ಷರತ್ತು ಇರಬೇಕು

ಎದೆಗಾರಿಕೆ ಬೆಳೆಸಿಕೋಬೇಕು

ಕಂಡು ಪತಂಗವ

ಬೆಂದಬೂದಿಯಿಂದೆದ್ದು

ಚಿಮ್ಮುವ ಫೀನಿಕ್ಸಿನ ಗುದ್ದು

ಉಸಿರುನಿಲ್ಲುವತನಕ

ಉಸಿರಾಡಲಡ್ಡಿಯೇನು?

ಬರಲಿ ಅದು ನಿನ್ನ ಹಿಂದೆ

ಬೀಳಬೇಡ ಅದರಬೆನ್ನ ಹಿಂದೆ

ತಪ್ಪಲ್ಲ ..ಒಪ್ಪುವೆ

ಮಾಡಿದರೂ ಮೋಸವ

ಮಾಡಬೇಡ ಸಹವಾಸವ

ಕಲಿ ಸವಾಲೆಸೆವುದ

ಬದುಕ ಬದುಕುವುದಕಲಿ

ಸಾವ ಮೆಟ್ಟುದೇ ಸವಿ

ಸಾವ ಮೆಟ್ಟುವುದಾ ಸವಿ

Saturday, February 20, 2010

ಇನ್ನೊಂದು-ಮೂರು..ಹಾಗೇ...

ಕಾಲ್-ಏಜು


ನನಗಾಯ್ತು ಯುವೇಜು
ಜೊತೆಗೆ ನೀನ್ಬಂದೆ ಬಾಜು
ಎಲ್ಲ ಸೇರಿದ್ದು ಅಲ್ಲಿ
ಅದುವೇ ನಮ್ಮ ಕಾಲ್-ಏಜು


ಮನೆಯವರಿಗೆ ಸುಳ್ಳು
ಕಲಿಯೋದಕ್ಕೆ ಕಲ್ಲು
ಕೆಲವರು ಸೇರೋದೆ ಇಲ್ಲಿ
ಮಾಡೋಕೆ ಗುಲ್ಲು


ಕಲಿತವ ಉಳೀತಾನೆ
ಇಲ್ಲದವ ಅಲೀತಾನೆ
ಅವ ಆಗ್ತಾನಲ್ಲೇ ಪ್ರೊಫೆಸರು
ಇವ ಬರೋರ್ಗೆಲ್ಲಾ ಸೀನಿಯರು


No ಮಿಲನ್
ಅವಳಪ್ಪನಾದ ನಮ್ಮಿಬ್ಬರ ಮಧ್ಯೆ
ವಿಲನ್
ಅದಕೇ ಬಹಳದಿನ ಆದ್ರೂ ಆಗುತ್ತಿಲ್ಲ
ಮಿಲನ್




Un-ರೀಚಬಲ್ಲು
ಕ್ಲಿಂಟನ್ನು ಮಾವ
ಲ್ಯಾಡನ್ನು ಭಾವ
ಲಾಲು ಅವ್ರಪ್ಪ
ಶನಿ, ರಾಹು, ಕೇತು
ಎಲ್ಲಾ ಇದ್ದಕಡೆ
ನಾನು ಹ್ಯಾಗೆ ಹೋಗಲಪ್ಪ

Saturday, February 13, 2010

ಇದು ಎಂಥಾ ಜಾಲವಯ್ಯ


ಎಂಥಾ ಜಾಲವಯ್ಯ...
ಇದು ಎಂಥ ಅಂತರ್ಜಾಲವಯ್ಯ
ಹೊಸ ವಿಷಯ ತಿಳಿಸಿ
ಹೊಸ ಆಸೆ ಹುಟ್ಸೋ
ಮಾಯಾಜಾಲವಯ್ಯ

ನೆಟ್ಟಲ್ಲಿ ಬಿದ್ದು ಒದ್ದಾಡುವ
ಹುಡ್ಗಿ ಹಿಂದೆ ಹುಡ್ಗ ಓಡಾಡುವ
ಬುದ್ಧಿ ಇಲ್ದೇ ಬರಿದಾಗುವ
ನಿದ್ದೆ ಕೆಟ್ಟು ಮಂಕಾಗುವ
ಒಂದೇ ಹುಚ್ಚನಂತೆ ಅಲೆವಾ....
ಇದು..ಎಂಥಾ ಜಾಲವಯ್ಯ....

ಕ್ಲಾಸು ತಪ್ಸಿ ಬಂಕ್ ಹೊಡೆಯುವ
ನೆಟ್ ಕೆಫೆಯ ಎದೆಗೆ ಹಣ ಸುರಿಯುವ
ಡೌನ್ ಆದ್ರೆ ತಾನೂ ಡೌನ್ ಆಗುವಾ
ಆನ್ ಲೈನು ಬಂದ್ರೆ ಚೀರಾಡುವಾ
ಹಣವಿಲ್ಲದಿದ್ರೆ ಪರದಾಡುವಾ....
ಇದು ಎಂಥಾ ಜಾಲವಯ್ಯ......

Friday, February 5, 2010

ಹಾಗೇ ಇನ್ನೊಂದೆರ್ಡು ಡೋಸ್

ಆಗಿದ್ದರೆ ಭೇಟಿ
ಆಗಿದ್ದರೆ ಒಂದುವೇಳೆ ಭೇಟಿ
ನಮಗಿರುತಿರಲಿಲ್ಲ ಸಾಟಿ
ಲೈಲಾ ಮಜನೂ ಸಲೀಂ ಅನಾರ್
ಪ್ರೇಮಪುಸ್ತಕ ಸೇರ್ತಿದ್ವು ಗಟಾರ್

ಲವ್ ಸ್ಟೋರಿ
ವೈನಾಗಿದ್ದ ನಮ್ಮ ಲವ್ ಸ್ಟೋರೀಲಿ
ಅಗ್ಬಾರ್ದಿತ್ತು ಖಳನಾಯಕ ನಿಮ್ಮಪ್ಪ
ಮೀಟಾಗ್ತಿರ್ಲಿಲ್ಲ ಹೀಗೆ ಬೇರೆ-ಬೇರೆ ದಾರೀಲಿ
ಆಗ್ತಿದ್ದೆ ಅಮ್ಮನ್ಗೆ ಸೊಸೆ ಮಾವ ನಮ್ಮಪ್ಪ


ಮಿಲ್ಟ್ರಿ-ಚೌಲ್ಟ್ರಿ
ಗುಂಡ ಹೋದ ಸೇರಲು ಮಿಲ್ಟ್ರಿಗೆ
ಗುಂಡಿ ಅಟ್ಕಾಯಿಸ್ಕೊಂಡ್ಲು ರಸ್ತೇಲಿ
ಕಣ್ಣಿಗೆ-ಕಣ್ಣು ಸೇರಿದ್ವು,
ಮನಸುಗಳೆರಡೂ ಒಂದಾದ್ವು
ಮದ್ವೆ ಅಗ್ತಾವ್ರೆ ಬಂದ್ಬಿಡಿ ಚೌಲ್ಟ್ರಿಗೆ


ಸೂರ್ಯ ಗ್ರಹಣ
ಗುಂಡ ಹೋದ ಇಂಟರ್ ವ್ಯೂಹಕ್ಕೆ
ಬಿದ್ದ ಪುಂಖಾನುಪುಂಖ ಪ್ರಶ್ನೆ ಜಾಲಕ್ಕೆ
ಕೇಳಿದ್ರು, ಧರತಿ-ಸೂರ್ಯನ ಮಧ್ಯೆ
ಚಂದ್ರ ಬಂದರೆ ಏನಾಗುತ್ತೆ ಗುಂಡ..?
ಥಟ್ ಅಂತ ಕೊಟ್ಟ ಉತ್ರ ಗುಂಡ
ಆಗೋದೇನು..? ಚಂದ್ರನ್ನ ಧರತಿ
ಮದ್ವೆ ಆಗ್ತಾಳೆ, ಸೂರ್ಯಂಗೆ
ಗ್ರಹಣ ವಕ್ರಸ್ತೈತೆ....

Wednesday, January 20, 2010

ಎರಡು ಕವನಗಳು - ಚಿಂತನೆಗೆ

ನಾಳೆ ಚಿಂತೆ ಬಿಡು
ಭವಿತಕೆ ಹೇಳಿಬಿಡು
ಚಿಂತೆ ಮಾಡದಿರು
ಸೂತ್ರವಾಗಲಿದು ಎಂದೂ
ಮರೆತುಬಿಡು
ನೋಡದಿರು
ಕನ್ನಡಿಯನ್ನೆಂದೂ
ತೊರೆದುಬಿಡು
ನಿಟ್ಟುಸಿರು
ಕಾಡಬೇಡೆಂದು
ನಿಂತು ನಟ್ಟ ನಡು
ನಾಳೆ ಎನ್ನದಿರು
ಸುಖಪಡುವೆ ಎಂದೆಂದೂ

ಪ್ರಳಯ
ಎಲ್ಲಿ ಪ್ರಳಯ?
ಎಲ್ಲ ಸುಳ್ಳಯ್ಯ
ಆಕರ್ಷಿಸಲೊಂದು ನೆಪ
೨೦೧೨, ಓಡದಿದ್ದರೆ
ಪಾಪರ್ ಆಗುವರೇ ಪಾಪ!!
ಕೊಚ್ಚಿ ಹೋದವು ಊರು
ಕಳಚಿ ತಲೆಮೇಲಿನ ಸೂರು
ಅನ್ನ-ವಸ್ತ್ರವಿಲ್ಲದ ಪರದಾಟ
ಅವರ ಕೇಳಿ ಏನೆಂದು ವಿಧಿಯಾಟ
ಮನೆಮಂದಿಯೆಲ್ಲಾ ಕೊಚ್ಚಿಹೋದರೆ
ತೋರದೇ ಒಂದೂ ಉಪಾಯ
ಅಳಿಸಿ ಹೋದರೆ ಮನೆತನದ ಹೆಸರೇ
ಅದೇ ಅಲ್ಲವೇ ಅವರಿಗೆ ಪ್ರಳಯ..?
ಅಲ್ಲಿ ಅನ್ನ-ಸೂರಿಗೆ ಚೀರಾಟ
ಇಲ್ಲಿ ಪದವಿ-ಛೇರಿಗೆ ಜಗ್ಗಾಟ
ತಮ್ಮವರ ಅಗಲಿ ಕೋಡಿ ಕಣ್ಣೀರು
ಇಲ್ಲಿ ಮೊಸಳೆ ಕಣ್ಣಲಿ ಹುಸಿನೀರು
ನೆರೆಗೆ ಹೋದವರು ಕೆಲವರು
ಬರಿದೇ ಸತ್ತವರು ಹಲವರು
ಪದವಿ-ಅಧಿಕಾರದಾಸೆಯ ನಮ್ಮವರು
ಅನ್ನ-ನೀರುಬಿಡಿ,
ಮಾನವತೆಯನೇ ಮರೆತರು

Wednesday, January 13, 2010

ಸಂಕ್ರಾಂತಿ - ತ್ರಿವರ್ಣಕ್ರಾಂತಿ



ಹಸಿರುಸಿರಾಡುವ ಹೊಲ ಗದ್ದೆ
ಉಸಿರಾಗಿದ್ದವು, ರೈತನೆಂದ ಗೆದ್ದೆ
ಕೊಳ್ಳುವುದು ಭಾರ, ಮಾರು ಅಗ್ಗ
ಸಾಲಹೊರೆ, ರೈತನ ಕೊರಳಿಗೆ ಹಗ್ಗ
ಬರಲಿ ಅನ್ನದಾತನ ಅನುಕೂಲದ ದಿನ
ತೀರಲಿ ಸಾಲ,ಹಸಿರಾಗಿ ಹೊಲ ಅನುದಿನ
ಬರಲಿ ಸಂಕ್ರಾಂತಿ ಮನೆಗೆ, ಗದ್ದೆಗೆ
ಊರಿಗೆ, ನಾಡಿಗೆ, ರೈತನಿಗೆ ಗದ್ದುಗೆ
ಆಗಲಿ ತ್ರಿವರ್ಣ ಕ್ರಾಂತಿ, ಹಸಿರು ಶಾಂತಿ
ಶ್ವೇತ ಹೈನಿಗೆ, ಮೀನಿಗೆ ನೀಲಕ್ರಾಂತಿ
ಬಾನಲಿ ಹಾರಾಡಿ ತ್ರಿವರ್ಣ ಪಟಪಟ
ತ್ಯಾಗ, ಶೌರ್ಯಕ್ಕಾಗಲಿ ಕೇಸರಿ ದಿಟ
ಸಮೃದ್ಧಿ, ಸಸ್ಯಸಿರಿ ಆಗಲಿ ಹಸಿರು
ಶಾಂತಿಗೆ ಬಿಳಿ, ಮುನ್ನಡೆಗೆ ಚಕ್ರವೇ ಉಸಿರು
ಸಂಭ್ರಮವಾಗಲಿ ಒಂದೆಡೆ ಅನ್ನದಾತನಿಗೆ
ತರಲಿ ಎಳ್ಳು-ಬೆಲ್ಲದ ಸಂಕ್ರಾಂತಿ
ಯೋಧನ ಶೌರ್ಯ, ಮೇಧಾವಿಗಳ ನಾಡಿಗೆ
ನಮಿಸಿ ವಿಶ್ವ ಆಗಲಿ ತ್ರಿವರ್ಣ ಕ್ರಾಂತಿ