Sunday, December 25, 2011

ಚಿತ್ರ: ದಿಗ್ವಾಸ್ ಹೆಗಡೆ

ಸಾವಿಗೇಕೆ ಆಹ್ವಾನ
ಬೆಳ್ಮುಗಿಲ ಬೆಳಕಲ್ಲಿ
ಕಿರಣದಾವರಣ ಹೀಗೇ
ಇಣುಕಿದ ಪರಿಯೇನು?
ಹರಿದಾವರಣ ಕಿರಿದಾಗೆ
ಕಿರಣವಿರದು ರಣಬಿಸಿಲು
ಹರಿತಿಗೂ ಸಿಗದು ಉಸಿರು

ನೆಲ ಜಲಕೆ ಹಾ-ತೊರೆದು
ಕೆರೆಯಂಗಳ ಬಾಯ್ಬಿರಿದು
ಬಿಲ ಬಿಟ್ಟು ಹೊರ ಬಂದಾವು
ಇಲಿಯ ಬೆಂಬತ್ತಿ ಹಸಿದ ಹಾವು
ಮರ ಕಡಿದು, ನೆಲ ಬಗೆದು
ಬರಮಾಡಿಕೊಳ್ಳಬೇಡಿ ಸಾವು

Friday, December 16, 2011



ಛಾಯಾ ಚಿತ್ರ: ರಂಜಿತಾ ಹೆಗಡೆ


ಉದಯರವಿ
ಉದಯಿಸಿಹ ರವಿಯ ನೋಡು ಹೇಗೆ ಕೆಂಪು ಮೂಡಿದೆ
ಗಗನದಾಚೆ ಪೂರ್ವಾಂಗಣದಿ ಕೆಂಪು ನೀರು ಚಲ್ಲಿದೆ
ಕಿರಣ ಹರಡಿ ಬಾನಂಗಳದಲಿ ಹೊಂಬಣ್ಣವ ಸುರಿಸಿದೆ
ಕಲಕಲರವದಿ ಹರಿವನದಿ ದೇಗುಲ ಘಂಟೆ ಮೊಳಗಿದೆ

ಮೋಡವೆರಡೋ ಮೂರೋ ಧೈರ್ಯತುಂಬಿ ನಿಂತಿವೆ
ಒಡಲಾಳದಿ ಹನಿಗಳೆರಡ ಬಸಿರ ಬಯಕೆ ಹೊಂದಿವೆ
ಬೆಳಗಿನ ತಣ್ಣನೆಯ ಗಾಳಿ ತಾಗಿ ಮೋಡ ಭಾರವಾಗಿವೆ
ಹೀಗೇ ಹಲವು ಕೂಡಿ ಒಮ್ಮೆ ಭೂಮಿತುಂಬಾ ಹನಿಸಿವೆ

ಹನಿಯ ಕುಡಿದ ಮಣ್ಣು ತಾನೂ ಬೀಜ ಫಲಕೆ ಕಾದಿದೆ
ಬೀಜ ಬಿರಿದು ಮೊಳಕೆಯೊಡೆದು ಸಸಿತಲೆಯ ಎತ್ತಿದೆ
ಸಸಿಯೂ ಸವಿದು ನೀರಧಾರೆ ಬೆಳೆದು ಹೆಮ್ಮರವಾಗಿದೆ
ಮರಗಳೆಷ್ಟೋ ಭೂಮಿಗಪ್ಪಿ ಹಸಿರ ಹೊದಿಕೆಯಾಗಿದೆ

ಬೇಡ ಮನುಜ ಭೂಮಿ ಕಣಜ ಬಗೆದು ಖನಿಜದ ಆಸೆಗೆ
ಮಣ್ಣ ಕೊರೆತ ಮರಕೆ ಹೊಡೆತ ಬೀಳುವುವೆಲ್ಲ ಭೂಮಿಗೆ
ಹರಿವನದಿ ಕೊರೆವ ಬದಿ ನೆರೆಹಾವಳಿ ಸತತ ಬದುಕಿಗೆ
ಮೋಡಮಾಯ ಕಾಡುಮಾಯ ಸುಡಲು ಸೂರ್ಯಬೇಗೆ   

Wednesday, December 7, 2011








ಛಾಯಾ ಚಿತ್ರ:  ಪ್ರಕಾಶ್ ಹೆಗ್ಡೆ

ಜೀವನದಿ

ಹುಟ್ಟುಹಾಕಲು ಬೇಕು
ಗುಟ್ಟು ಅರಿಯಲು ಬೇಕು
ಇಲ್ಲವಿದು ಸುಲಭ ಹಾದಿ
ಮೆಟ್ಟಿ ಉಬ್ಬರಿಸೋ ಅಲೆ
ಜೀವ ಬಿಗಿಗೊಳಿಸೋ ಸೆಲೆ
ಏರಲೆಂದು ಬಯಸಿ ಗಾದಿ

ಬಿಟ್ಟು ತೀರದ ಬದುಕು
ಕಟ್ಟು ಬಾಳಿನ ಸರಕು
ನೀರ ಸೋಸುವುದೂ ಕಲೆ
ಜಲನಯನದ ಸೊಬಗು
ರುದ್ರ ಶರಧಿಯೂ ಮೆರಗು
ಹಾಯಿ-ಹಡಗು ಮೀನಬಲೆ

ಸುಳಿಗಳಿಲ್ಲದೇ ಎಲ್ಲಿದೆ ಜಲಧಿ
ಅಗಣಿತ ಗುಣ ಜಲಪರಿಧಿ
ಗಣಿ-ತೈಲ ಮುತ್ತು ಹುಟ್ಟುವುದಿಲ್ಲಿ
ನೆಲದಿ ಹರಿದಾಡಿರೆ ಸಿಹಿ
ಸಿಹಿಕೂಡಿ ಉಪ್ಪಿನಾಮೋಹಿ
ಸಾವಿನಲ್ಲೂ ದಿಟ ಬದುಕಿಹುದಿಲ್ಲಿ

Wednesday, November 9, 2011

ರಾ-ವಣ್ ಮತ್ತು Make-A

ರಾ-ವಣ್ ಮತ್ತು Make-A 

ನಾನ್ ಕಣೋ... ಮೇ.ಮೇ..ಮೇ..ಮೇಕೆ
ಅಂದ್ರೆ ನೀನ್ ಮಾಡಿದ್ದೇನು? Make-A? 
ಎಲ್ಲಾ ವಿಲನ್ಗಳೇ ಹೀರೋಗ್ಳಾಗ್ಬಿಟ್ರೆ
ರಾಮನ ಹೆಸರು ಹೋಗಿ..ರಾ-ವಣ್ ಏ? 

ನನ್ ಕಿವಿ ಮೂಗು ನಾಲ್ಗೆ ಜೂಲನ್ನೂ ಬಿಡ್ಲಿಲ್ಲ 
ಎಲ್ಲಾ ತೂತು, ಲೋಲಾಕು ಹೇರ್ ಸ್ಟೈಲು 
ಕಣ್ ಕಂಡ್ರೂ ಕುರ್ಡ, ಏರ್ಸಿ ಕಣ್ಗೆ ಕೂಲಿಂಗು
 ಒಳ್ಗೆಷ್ಟೋ ನೋವು, ತೋರಿಸ್ಕೊಳ್ಳೋದು ಸ್ಮೈಲು 

ಮೇಕೆಗೆ ಯಾಕೆ ಬೇಕು? ಕೇಳಿದ್ನೇ ನಾನೀ ಶೋಕು? 
ನಂಗೆ ಹಿಂಸೆ ಆಗುತ್ತೋ ಅಂದ್ರೆ ಕೇಳೋ ಮನಸೆಲ್ಲಿ? 
ಮಾಡ್ತೀಯಾ ಏನೇನೋ, ಬೇಕಲ್ವಾ ನಿಂಗೂ ಬ್ರೇಕು? 
ಯಾವ ಪ್ರಾಣೀನ ತಾನೇ ಬಿಡ್ತೀರಾ ಇತಿಯೆಲ್ಲಿ ಮಿತಿಯೆಲ್ಲಿ?

Monday, October 31, 2011

ನಮ್ಲೋಕ


ಚಿತ್ರ: ದಿಗ್ವಾಸ್ ಹೆಗಡೆ



ನಮ್ಲೋಕ

ಕಣ್ಣ ಮುಚ್ಚಿ ಕುಂತಿನಿ
ಯಾಕೋ ಆಮ್ಯಾಲೆ ಹೇಳ್ತೀನಿ
ಆಡಾಕ್ಬಂದ್ರೆ ನಂನ್ಗುಟ್ಟು
ನಾ ನಿನ್ಜೊತೆ ಹಂಚ್ಕಾತೀನಿ

ಅಪ್ಪಾ ಕೊಟ್ಟ ಐದ್ರುಪಾಯ್
ಕೊಂಡ್ಕೊಳ್ಳಾಕೆ ಕಳ್ಳೆಕಾಯ್
ಇಬ್ರೂ ಕುಂತ್ಕಂಡ್ ತಿನ್ನಾಣಾ
ತಿನ್ನೋದ್ಚಂದ ಪುಟ್ಪುಟ್ಬಾಯ್

ಕಣ್ಣಾಮುಚ್ಚೆ ಕಾಡೆ ಗೂಡೆ
ಅವ್ಳೂ ಬಂದ್ಲು ಆಡಾಕ್ನೋಡೇ
ಪುಟ್ಲಂಗ ಆಕೊಂಡ್ ಪುಟ್ನಂಜಿ
ಅಮ್ಮ ಕೊಡ್ತಾಳೆ ಸೀರುಂಡೆ

ಸಂಜೆಗಂಟ ಆಡೋಣಾ
ಜಗ್ಲಿ ಅತ್ಕೊಂಡ್ ಕೂರೋಣಾ
ಕುಂಟಾಬಿಲ್ಲೆ ಚೌಕಾಬಾರಾ
ನಮ್ನಮ್ ಮನೀಗೋಗೋಣಾ

ಮಕ್ಳೂ ನಾವ್ ನಮ್ದೇ ಲೋಕ
ಕಪ್ಟ ವಂಚ್ನೆ ಇದ್ಯಾವ್ಲೋಕ
ಅವ್ರಿಗ್ ನಾನು ನನ್ಗೆ ಅವ್ರು
ಕಲಿಯಾಕ್ನಿಮ್ಗೆ ಬ್ಯಾರೆ ಬೇಕಾ?

Tuesday, October 25, 2011

ಔರ್- ಕಹೇಂ- ಆಪ್ ಸುನೋ


 ऎक् कहानी

किसी नॆ कहा लॆ लॊ ऎह् दौलत् ऎह् शॊह्रत्
भलॆ ही छीन् लो मुझ् सॆ मेरी ऎह् जवानी
अरॆ भाय् कौन् कंबख्त् लेगा तुम्हारी जवानी
हम खुद् हैरान् है...क्यू नहीं कोयी कॆह्ता
मै बीता कल् नहीं बस्  वह् थी ऎक् कहानि

ಎಕ್ ಕಹಾನೀ

ಕಿಸೀ ನೆ ಕಹಾ ಲೆ ಲೊ ಎಹ್ ದೌಲತ್ ಎಹ್ ಶೊಹ್ರತ್
ಭಲೆ ಹೀ ಛೀನ್ ಲೋ ಮುಝ್ ಸೆ ಮೇರೀ ಎಹ್ ಜವಾನೀ,
ಅರೆ ಭಾಯ್ ಕೌನ್ ಕಂಬಖ್ತ್ ಲೇಗಾ ತುಮ್ಹಾರೀ ಜವಾನೀ?
ಹಂ ಖುದ್ ಹೈರಾನ್ ಹೈಂ...ಕ್ಯೂ ನಹೀಂ ಕೋಯೀ ಕೆಹ್ತಾ
ಮೈ ಬೀತಾ ಕಲ್ ನಹೀಂ, ಬಸ್  ವಹ್ ಥೀ ಎಕ್ ಕಹಾನಿ

पागल
हम पागल थे उस्के पीछे इस कदर
खाना पीना भी छूटा हो गये बेखबर
आखिर एक दिन जनाज़ा हमारा निकला
उस्के पीछॆ दॊस्त दुश्मन सारा जहां निकला
मगर वह न निकली जिस्के लिये मेरा जनाज़ा निकला

ಪಾಗಲ್
ಹಮ್ ಪಾಗಲ್ ಥೇ ಉಸ್ಕೇ ಪೀಛೇ ಇಸ್ ಕದರ್
ಖಾನಾ ಪೀನಾ ಭೀ ಛೂಟಾ ಹೋ ಗಯೇ ಬೇಖಬರ್
ಆಖಿರ್ ಏಕ ದಿನ್ ಜನಾಜ಼ಾ ಹಮಾರಾ ನಿಕಲಾ
ಉಸ್ಕೇ ಪೀಛೆ ದೊಸ್ತ್ ದುಶ್ಮನ್ ಸಾರಾ ಜಹಾಂ ನಿಕಲಾ
ಮಗರ್ ವಹ್ ನ ನಿಕಲೀ ಜಿಸ್ಕೇ ಲಿಯೇ ಮೇರಾ ಜನಾಜ಼ಾ ನಿಕಲಾ

तोड्- मोड्
जॊड् चुकॆ दिल् तुम्सॆ..
हिम्मत् हो तॊ तोड् कॆ देखो....
मोड् चुकॆ राह् जीनॆ की...
हिम्मत् हो तॊ साथ् छोड् कॆ दॆखो

ತೋಡ್-ಮೋಡ್
ಜೊಡ್ ಚುಕೆ ದಿಲ್ ತುಮ್ಸೆ..
ಹಿಮ್ಮತ್ ಹೋ ತೊ ತೋಡ್ ಕೆ ದೇಖೋ....
ಮೋಡ್ ಚುಕೆ ರಾಹ್ ಜೀನೆ ಕೀ...
ಹಿಮ್ಮತ್ ಹೋ ತೊ ಸಾಥ್ ಛೋಡ್ ಕೆ ದೆಖೋ

Friday, October 14, 2011

ಪಾರೂ..ಹೋಗೋಣ್ವಾ ರೈಡ್ ಒಂದ್ಚೂರು....???.

 ಚಿತ್ರ ಕೃಪೆ: http://www.facebook.com/dharamjagran

ಬಸ್ವನ್ ಮ್ಯಾಲೆ ಕುಂತೂ ಕುಂತೂ ಬೋರಾಗೈತೆ
ಬೆನ್ಕ ಆ ಪಿಳ್ಳಾರಿ ಎಗ್ಣದ್ ಮ್ಯಾಲೆ ..
ನಿನೂ ಉಲಿ, ಸಿಮ್ಮ ಅಂತ ಬ್ಯಾಸ್ರ ಮಾಡ್ಕಂಡಿದ್ದೀಯಾ
ಬಾ ಆತ್ತಾಗೆ ..ಪಾರೂ ಓಗ್ಬರ್ಮಾ ಒಂದ್ ರೌಂಡು..

ಆ ಬಸ್ವ ತಿಂದೂ ತಿಂದೂ ಲದ್ದಿ ಆಕ್ತಾನೆ
ಇವ್ನ ಎಗ್ಣ..ಊನಿ ಕಾಣ್ದೇಟ್ಗೇ ಇವ್ನ ಬೀಳ್ಸಿ ಓಡೋಗ್ತದೆ..
ಇನ್ನ ನಿನ್ನ ಉಲಿ ಸಿಮ್ಗೋಳು..ದುಬಾರಿ ಆಗವೆ
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ಈ ಡಮ್ರು, ಈ ಬೂದಿ, ಎಣ್ಗೋಳ್..ಆಮ್ಯಾಕೆ ಗೋಳು..
ಅಲ್ಲಿ ಪೂಜೆ ಇಲ್ಲಿ ಪೂಜೆ..ಅಗ್ರ ಪೂಜೆ ..ಗಣೇಸ್ನ ಗೋಳು
ಸಕ್ತಿ, ಓಂಕಾಳಿ, ಆ ಓಮ, ಈ ಯಗ್ನ,,,ನಿನ್ ಬಾಳು..
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ಪೋಲಿಸಪ್ಪ್ ಇಡ್ದಿರೋ ಬೈಕಂತೆ ಇದು ..ಓಗ್ಬಾ ಸಿವಾ ಅಂದ...
ಅದ್ರ ಯಜಮಾನನ್ತಾವ್ ಇವ್ನ್ಯಾರೋ ಕದ್ದಂದಂತೆ..
ಅದೇನೋ ..ಪೆಟ್ರೋಲು ಅನ್ನೋದು    ಟ್ಯಾಂಕು ತುಂಬೈತಂತೆ..
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ನಮ್ಕೆಂಪೇಗೌಡ್ರೂರು ಬೋ ಬೆಳ್ದೈದಂತೆ ಉದ್ದಗ್ಲಕ್ಕೆ
ಕನ್ನಡ ಕಮ್ಮಿ ಎನ್ನಡ. ಎವಿಡಾ ಎಕ್ಕಡ ಜಾಸ್ತಿ ಅಂತೆ
ಫೋರಮ್ಮು, ಮಾಲು, ಐಟಿ, ಬಿಟಿ, ಕಾಲ್ಸೆಂಟ್ರಂತೆ
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ನನ್ನ ಇರೂಪಾಕ್ಸ ಅಂತಿದ್ದ ಪ್ರದೇಸ್ದಾಗೆ ಗಣಿ- ಧೂಳೆದ್ದೈತಂತೆ
ಭೂಮಿನ ಪರ್ದೇಸಕ್ಕೆ ಮಾರಿ ಧಣಿಗಳಾಗಿ ಜನ ಕುಂತೌವ್ರಂತೆ
ಅನ್ನ ಕೊಡೋ ರೈತರ್ಗೆ ಆಕಿ ಪಂಗ್ನಾಮ ಎಮ್ಮೆನ್ಸಿ ಬತ್ತೈತಂತೆ
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ಸಿವಾ ಸಿವಾ ಅಂತಾನೆ ಬುಡಕ್ಕೇ ತತ್ತಾರೆ.. ಇವರ್ವಿಸ್ಯ ತಿಳ್ಕಾಬೇಕು
ಗಣೇಶನ್ಹೆಸರಾಗೆ ದುಡ್ಡು, ಕೆರೆ ಕೊಳ್ಳ ಇಶ ಆಗೋ ಬಣ್ಣ ತುಂಬ್ತಾರಂತೆ
ಮಾಟ ಮಂತ್ರ..ಸಕ್ತಿ ತಾಯ್ತಾ, ಮಾರಿಗೆ ಕುರಿ ಕೋಳಿ ಬಲಿಕೊಡ್ತಾರಂತೆ
ಇದ್ಯಲ್ಲಾವೇ ಸರಿ ಮಾಡಾಕೆ ನಾವೇ ಪ್ರತ್ಯಕ್ಸ ನೋಡ್ಮಾ ಅದೇನಿದ್ದಾದು
ಅದಕ್ಮುಂಚೆ, ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

Monday, October 10, 2011

ನಂಗೊತ್ತಿಲ್ಲ ಮಗು.....



ನಿಜವಾಗ್ಲೂ ಗೊತ್ತಿಲ್ಲ ಮಗು
ಅಪ್ಪಾ...
ಏನ್ಮಗಾ..
ಸೂರ್ಯ ಬೆಳಕ್ಕೊಡ್ತಾನಲ್ವಾ?
ಹೌದ್ಕಣ್ಮಗಾ..ಲಕ್ಷಾಂತರ ವರ್ಷಗಳಿಂದ
ಮತ್ತೆ ಕತ್ತಲಾಗ್ತದೆ?
ಅದು ಭೂಮಿ ತಿರ್ಗೋದ್ರಿಂದ
ಮತ್ತೆ ಸರ್ಕಾರಾನೂ ತಿರುಗ್ತದಾ?
ಅದ್ಯಾಕ್ಮಗಾ ಅಂಗ್ ಕೇಳೀಯಾ?
ಮತ್ತೆ ಬೆಂಗ್ಳೂರ್ಗೆ ಒಂದ್ಗಂಟೆ ಕತ್ಲಂತೆ
ಬ್ಯಾರೆ ಪಟ್ನಕ್ಕೆ ಎರ್ಡೋ ಮೂರೋ ಅಂತೆ
ನಮ್ ಅಳ್ಳಿನಾಗೆ ಏನಿಲ್ಲಂದ್ರೂ ಆರ್ಗಂಟೆನಂತೆ..
ಇದ್ಯಾಕಪ್ಪಾ? ಇಂಗೇ??
ನಂಗೊತ್ತಿಲ್ಮಗಾ

ಅಪ್ಪಾ...
ಇನ್ನೇನ್ಲಾ ಮಗಾ?
ಕಲ್ಲಿದ್ಲಿರೋದು ಆಂದ್ರದೊಳ್ಗೇನಾ?
ಇಲ್ಲ ಮಗ ಬ್ಯಾರೆ ಕಡೆನೂ ಸಿಗ್ತೈತೆ..
ಮತ್ತೆ ಕರೆಂಟು ಉತ್ಪಾದ್ನೇಗೆ ಅದೊಂದೇಯಾ ಮಾರ್ಗ?
ಇಲ್ಕಣ್ಮಗಾ ಇನ್ನೂ ಅವೆ ಮಾರ್ಗ
ಇದನ್ನ ಸರ್ಕಾರಕ್ಕೆ ತಿಳ್ಸಿಕೊಡೂರು ಇಲ್ವಾ? ಅಂಗಾರೆ...
ನಿಜವಾಗ್ಲೂ ಈ ಇಸ್ಯ ನಂಗೊತ್ತಿಲ್ಲ ಮಗು

Wednesday, October 5, 2011

ಗೆಳೆಯ ಶಿವುರವರ ಸೊಗಸಾದ ಛಾಯಾಚಿತ್ರಕ್ಕೆ ನನ್ನ ಕವನ


ನಿಸರ್ಗದ ನಿಯಮ

ಹಕ್ಕಿನಾನು ಪತಂಗ ನೀನು

ಸಿಕ್ಕಿ ಬಿದ್ದಾಯ್ತು, ಹೆಕ್ಕಿ ಹಿಡಿದಾಯ್ತು

ಎಲ್ಲಿಗೆ ಹೋಗ್ತೀಯಾ ತಪ್ಪಿಸ್ಕೊಂಡು?

ಗೂಡು ಕಟ್ಟಿಯಾಯ್ತು

ಮಾಡು ಗಟ್ಟಿಯಾಯ್ತು

ಮೊಟ್ಟೆಯೊಡೆದೈತೆ ಮರಿಯಾಗೈತೆ

ಹಸ್ದಿವೆ ಕೂಸ್ಗಳು ಅವಕ್ಕೇನ್ಕೊಡ್ಲಿ?

ಖುಷಿಯಾಗಿಟ್ಟಿದ್ದೆ ಹತ್ಮೊಟ್ಟೆ

ಎರಡ್ಸೇರಿದ್ವು ಪಾಪಿ ನಾಗಣ್ಣನ್ಹೊಟ್ಟೆ

ಒಡೆದು ಹೊರ್ಬಂದಿದ್ದು ಆರು

ಗೂಬೆ ಗಿಡ್ಗನ್ ಪಾಲ್ಗೆ ಮೂರು

ಬಿಡ್ಲಾ ನಿನ್ನ ? ನಂದೂ ಒಡೆದೈತೆ ಸಹನೆ ಕಟ್ಟೆ

ನಂಗೂ ಮನ್ಸಿಲ್ಲ ನಿನ್ನ ಕೊಲ್ಲೋಕೆ

ರಂಗು ರಂಗಿನ ಪತಂಗ ನೋಡೋಕೆ

ನಿಂಗೂ ಹಕ್ಕೈತೆ ನಿನ್ ಮಕ್ಳ ಜೊತೆ ಬಾಳೋಕೆ

ಮುಗದೈತಲ್ಲ ನಿನ್ಕರ್ತವ್ಯ ಪರಿಸರ್ದಾಗೆ

ಬಿಟ್ಟೆ ಎಲೆಮೇಲೆ ಮುತ್ತಿನಂಥಾ ಸವ್ರಾರು ಮೊಟ್ಟೆ

ನನ್ಕತೆನೂ ಮುಗೀತದೆ ನೋಡಿದ್ರೆ ಮಾರ್ಜಾಲ

ಅದರ್ಕೈಲಿ ತಪ್ಪಿಸ್ಕೊಂಡ್ರೆ ಆಗ್ತೀನಿ ನರಿ ಪಾಲ

ಈ ನಿಸರ್ಗದ್ನಿಯ್ಮಾನೇ ಹಿಂಗೆ ಅವೂ ಸಿಕ್ಬೀಳ್ತವೆ

ಹಾಸಿದ್ರೆ ಬೇಟೆಗಾರ ಮಾಯಾಜಾಲ

ಅವನೂ ಉಳಿಯೊಲ್ಲ ಕಾಣದ್ರೋಗ, ಸುನಾಮಿ ಕೈಗೆ ಸಿಕ್ರೆ

ಇದೆಲ್ಲಾ ನಿಯಮಾ ಸೂತ್ರದಾರನ್ನಾಟ್ಕದ್ದು

ಖುಷಿ ಪಡು ಆಯ್ತು ನಿನ್ ಜನ್ಮಾನೂ ಸಾರ್ಥಕ

ಧನ್ಯ ನೀನು ಅಹಾರಾಗ್ತಿದ್ದೀಯಾ ಸೇರಿ ಯಾರ್ದೋ ಹೊಟ್ಟೆ.

Thursday, September 29, 2011

ಮನುವಚನ್ -ಚಿತ್ರಕ್ಕೆ ನನ್ನ ಕವನ

(ಚಿತ್ರ: ಮನುವಚನ್ ನ ಛಾಯಾಗ್ರಹಣ ಕೌಶಲ್ಯ)
ಇದರಿಂದ ಹುಟ್ಟಿದ ಹಸಿರುಳಿಸೆನುವ ಕಾಳಜಿಯ ಕವನ

ಎಲೆಮೇಲೆಳೆಹನಿ
ಎಲೆಯಮೇಲೆಳೆಹನಿ...
ಮಳೆಕರಗಿ ಹನಿಸಿತೇ?
ಇಲ್ಲಾ ಎಲೆಬೆವರಿತೇ..?
ಉಸಿರ್ಕಟ್ಟಿ ಪ್ರದೂಷಣೆಗೆ
ಬೇರ-ಬೇರ್ಕೊಂಡ ಬವಣೆಗೆ
ಕಾಂಡಕೆ ಬಿದ್ದ ಕೊಡಲಿಗೆ..??
ಇಲ್ಲಾ.. ಪಾರ್ಕನೂ ನುಂಗುವ
ಹಸಿರ್ಹಾಸುಗೆಗೂ ಲಗ್ಗೆ
ಎಗ್ಗು-ನೆಗ್ಗಿಲ್ಲದ ಭೂಕಬಳಿಕೆಗೆ..
ಭೂಗರ್ಭವನೂ ಬಗೆವವಗೆ
ಹೆದರಿ ಚಿಗುರೆಯಾಗಿ
ಚಿಗುರೊಡೆಯದಾಗುವ
ಮತ್ತೆಲೆ ಬಾರದೋ ಎನುವ
ಭಯಕೆ..ನಭಕೆ ತಲೆಯೆತ್ತಿ
ಬೇಡುತಾ ಅಳುತಿದೆಯೇ..??
ಕಣ್ಣ ಹನಿಸುವ ಹನಿಯ
ಕನಿಕರಿಸೆನುವ ದನಿಯೇ..??
ಹಸಿರಳಿದರೆ ಉಸಿರುಳಿಯದು
ಬೇಡ ಭಯ ಎಲೆ ಎಲೆಯೇ
ನೀನು, ಮನುಕುಲಕಿರುವ
ಅಳಿವುಳಿವಿನ ಏಕೈಕ ಸೆಲೆಯೇ.

Monday, September 12, 2011

ಬುಂಡೆ ಕ್ಯಾತೆ



ಏನ್ಲಾ ಬುಂಡೆ ನಾಗ ಎಸ್ರು ಎಸ್ರುವಾಸಿ ಆಗ್ತಾ ಐತೆ?
ಬೋ ಪೈನಾಗಿ ಬೆಳ್ದಿದ್ವು ಕೂದ್ಲು ಆವಾಗ
ಎಗರ್ಸ್ಕೊಂಡ್ ಓಡಾಡಿದ್ದು..ಜುಟ್ ಬಿಟ್ ಜೂಲ್ನಾಗ ಆಗಿದ್ದು..
ವೈನಾಗಿ ತಲೆಬಾಚಿ ಜೀನ್ಸ್ ಆಕಿ ಅರೆ-ರಾಮ ಅರೆ-ಕಿಸ್ನ ಆಗಿದ್ದು
ಬೆಲ್ ಬಾಟಮ್ ಈಟಗ್ಲ ಆಕಿ ಪುಕ್ಸಟ್ಟೆ ರಸ್ತೆ ಎಲ್ಲಾ ಗುಡ್ಸಿದ್ದು..!!!
ಎಲ್ ಲ್ಲಾ ಓಯ್ತು ಎಲ್ಲಾನೂವೆ...??

ಕೆರ್ಯಾಗಿನ್ನೀರ್ಮುಗ್ದು ಕುರ್ಚುಲ್ಬೆಳ್ಯೋಂಗೆ
ಅಲ್ಲಲ್ಲಿ ಒಂದೊಂದೇ ಚಿಗ್ರಕ್ಕೊಂಡ್ ಕುಂತಂಗೆ
ಗರ್ಕೆ ಮಾತ್ರ ಇತ್ಲಾಗ್ ವೈನಾಗ್ಬೆಳ್ದಂಗೆ
ತ್ವಾಟ ಎಲ್ಲಾ ಖಾಲಿ ಮಾಡ್ಕಂಡ್ಕೂತಿದ್ದೀಯಾ

ಓಗ್ಲಿ ಅತ್ಲಾಗೆ ಅಂದ್ರೆ..ಲಾನ್ ಮಿಸೀನು ಆಕಿ ಬೋಡ್ಸಿದ್ದ್ಯಾಕ್ಲಾ??
ಬಂಜ್ರು ಎದ್ದು ಕುಂತದೆ, ನೆತ್ತಿಮ್ಯಾಗೆ ಬೆಳೀಯೊಲ್ದು ಅಂತಾ
ಮೂರೋನಾಲ್ಕೋ ತಿಣಕಾಡ್ತಾ ಇದ್ದದು..
ಬಣ್ಣ ಗಿನ್ಣ ಅಚ್ಚಿದ್ಯೇನ್ಲಾ ಬೆಳ್ಳಗಾಗಿಲ್ಲ??

ಟೋಪೀನಾದ್ರೂ ಆಕ್ಕೊಂಡ್ ಓಡಾಡು..
ಕತ್ಲಾಗ್ ಮಕ್ಳು-ಎಂಗಸ್ರು ನೋಡಿದ್ರೆ ಎದ್ರ್ಕೊಂಡಾರು
ಅಲ್ಕಲ್ಲಾ ಯಾವನ್ಲಾ ಪೋಟಾ ತಗ್ದವನು..??
ಮಕಾ ಕಾಣಂಗಲ್ವಾ ತೆಗ್ಯಾದು..??

ಒಬ್ರು ಗುಂಡ ಎಂಕ ಅಂತಾರೆ; ಇನ್ನೊಬ್ರು ಗಾಬ್ರಿ ಬಸ್ಯ ಅಂತಾರೆ
ಅಲ್ಲೊಬ್ರು ಸಿಡ್ಕ ಸಿದ್ದ ಅಂದ್ರೆ; ಇಲ್ಲೊಬ್ರು ಡೌಟೇ ಬ್ಯಾಡ ಇದು
ನಮ್ಮಟ್ಟೀ ಕೋಳಿಕಳ್ಳ ಕರಿಯಾ ಅಂತಾರೆ
ಆಮೇಲೊಬ್ರು ಎಲ್ಡು ಸುಳಿಯವೆ....ಇದು ಸುಬ್ಬಾನೇ ಅಂತಾರೆ.
ಎಲ್ಲಾ ಬುಟ್ಟ್ ಪೂರ್ತಾ ಮನ್ಸನ್ ಪೋಟೋ ಆಕೇ ಬುಡು..
ನಂಗೊತೋ ನೀನ್ಬುಂಡೆ ನಾಗ ಅಂತಾ....!!!


Wednesday, July 13, 2011


ನಿನಗೊಂದು ಪ್ರಶ್ನೆ


ಕೊಲ್ಲುವ ನಿನಗೆ ಕೊಲೆಯೇ ಧರ್ಮ
ಮಾನವ ಜೀವಕೆಲ್ಲಿದೆ ನಿನ್ನಲಿ ಬೆಲೆ?
ಹೆತ್ತ ಕರುಳನ್ನೇ ಕಿತ್ತು ತಿನುವವ ನೀನು
ಮಹಾತ್ಮರ ಮಾತಿಗೆಲ್ಲಿದೆ ನೆಲೆ?

ಮನಸು ಮೌನವಾಗಿ ರೋದಿಸುತಿದೆ..
ತಿಳಿಯದಾಗಿದೆ ಹರಿವ ರಕ್ತ ಬೆರೆತಿದೆ
ನಿನ್ನವನದ್ದೋ ನಿನಗಾಗದವನದ್ದೋ
ಜೀವ ಭಯಕೆ ತಪ್ಪಿ ಓಡಿದವನದ್ದೋ?

ಏನೂ ಅರಿಯದ ಕಂದಮ್ಮನ ಅಳು
ಅಮ್ಮನ ರಕ್ತವ, ಅಣ್ಣನ ದೇಹವ
ತನ್ನವರ ಕಳಕೊಂಡವರ ಗೋಳು
ಅರಿವೇ ಇಲ್ಲವೇ ನಿನಗೆ ನೋವ ಭಾವ?

ಇದು ಅಲ್ಲ ಧರ್ಮ ಯಾರೂ ಹೇಳಲಿಲ್ಲ
ಪ್ರವರ್ತಕ ನೊಂದರಿಯ ವಿಚಾರಿಸಿದನಲ್ಲ
ಯಾರಿಂದ ಪ್ರೇರಿತ ಯಾರು ನಿನ್ನ ಗುರು?
ಕೊಲ್ವೆಯಾ ನಿನ್ನ ಕಂದನ ತಂದರೆ ಎದುರು?

Thursday, July 7, 2011

ಪುಟ್ಟಿಯ ವಿಸ್ಮಯ

(ಚಿತ್ರ ಕೃಪೆ: ಶ್ರೀ ಆನಂದ್ ಮತ್ತು ಶ್ರೀಮತಿ ಸೌದಾಮಿನಿ)

ಪುಟ್ಟಿಯ ವಿಸ್ಮಯ

ಓ..ಓ...ಅಲ್ನೋಡೇ ಅಮ್ಮಾ... ಅಬ್ಬಾ...!!!
ಎಂತಾ ಸಾಲು..!! ಕೆಂಪಗೆ ಒಂದರ ಹಿಂದೊಂದು
ನಾವು ಪ್ರೇಯರ್ ಗೆ ಸ್ಕೂಲಲ್ಲಿ ಹೋಗೋ ಹಂಗೆ
ಸಕ್ರೆ ತುಂಡು ಹಿಡ್ಕಂಡು..ಎಂತ ಡಿಸಿಪ್ಲಿನ್ನು ಅಲ್ಲಾ...??

ಆಮೇಲೆ...ಅಲ್ಲಿ ನೋಡು ಚಿಕ್ಕ ಮರಿ ಕಷ್ಟಪಡ್ತಿದೆ..
ಅರೆ,,,ಬಂತು..ಅದರ ಅಣ್ಣ ಅನ್ಸುತ್ತೆ..ಹೆಲ್ಪ್ ಮಾಡೋಕೆ
ಹಹಹ ಅಲ್ಲಿ..ಅಲ್ಲಿ..ಓ...ಈಗ ಕುಶಿ ಮರಿಗೆ ಕಾಣುತ್ತೆ
ಹಿಂದೆ..ಅಯ್ಯೋ ಗಡವ ಬತ್ತಿದೆ..ಅಯ್ಯೋ ..
ಡ್ಯಾಶ್ ಆಯ್ತು ..ಇಲ್ಲ ಇಲ್ಲ...ಪಕ್ಕ ಹೋಯ್ತು...

ಅಮ್ಮ ಅದು ಯಾರು...?? ದೊಡ್ಡದು..
ಅಪ್ಪನ್ ಥರ ಡುಮ್ಮ..ಮರಿನ ಮೇಲೆ ಎತ್ಕೊಂಡ್ತು
ಹೋಗ್ತಾ ಇದೆ,,,ಹಹಹ ನನ್ನ ಅಪ್ಪ ಎತ್ಕೊಳ್ಳೋ ಥರಾ...
ಎಲ್ಲಾ ಅದಕ್ಕೆ ದಾರಿ ಬಿಡ್ತಾ ಇವೆ...ಅದು ..ರಾಜಾನಾ..??

ಓ..ಓ..ಅಲ್ಲಿ ನೋಡೇ ಅಮ್ಮಾ... ಕ್ವೀನು...
ನಂಗೊತ್ತು..ನಿನ್ ತರಾ ಕ್ಯೂಟು...ರೆಡ್ಡು..
ಅರೆ ..ರಾಜಾನೂ ದಾರಿ ಬಿಡ್ತು ಅದಕ್ಕೆ...
ಎಂಥಾ ಡೌಲು..ಅಲ್ಲಾ...?? ಕುಶಿ ಆಯ್ತು
ಹೌದೂ.. ಅಮ್ಮಾ ..ಎಲ್ಲಿಗೋಗ್ತಿದೆ ಇರುವೆ ಸಾಲು???

Friday, June 24, 2011

ಮತ್ತೊಂದು ಮುಂಗಾರು

(ಮಿತ್ರ ಪ್ರಕಾಶನ: ಛಾಯಾ ಚಿತ್ತಾರ ಬ್ಲಾಗಿಂದ)

ದೂರ ಗಗನದಂಚಿನಲಿ ಬೆಳ್ಳಿ ಚಿನ್ನ
ಲೇಪನವಾದಂತೆ ಮೇಘಕ್ಕೆ ಬಳಿದ ಬಣ್ಣ
ರವಿಕಿರಣಕೂ ದುರ್ಭರವಾಗುತಿದೆ
ಹಲ ಬಣ್ಣಗಳ ಮೋಡ ಕಪ್ಪಾಗುತಿದೆ
ತೇಲ ತೇಲುತ ಹೆಚ್ಚಿದಂತೆ ಭಾರ
ಭೂಮಿಗಿಳಿಯಲು ಸಾಗದ ಸಾರ....

ಮೇಘ ಕಪ್ಪಾಗುವುದನೋಡುವಾಸೆ
ಕಪ್ಪು ಸೂರಮೇಲೆ ಕರಗಿಸುವಾಸೆ
ಕರಗಿದ ಸೆಲೆಯಡಿ ತೊಯ್ಯುವಾಸೆ
ತೊಯ್ದ ಸುಖದಲಿ ಇನಿಯನ ತೋಳಿನಾಸೆ
ತೋಳ ಬಂಧನದಲಿ ಎಲ್ಲ ಮರೆತು
ಮತ್ತೆ ಮೇಘಕಾಣುವ ಕನಸಲಿ ಕರಗುವಾಸೆ.....

ಬಿರಿದ ಭೂಮಿಯ ಕಣ್ಬಿಟ್ಟ ನೋಟ
ಬೀಳ್ಬಿಟ್ಟ ಹೊಲ ಹಾತೊರೆವ ತೋಟ
ಕೆಲವೆಡೆ ಬಿದ್ದವು ಹನಿದಂತೆ ಹನಿ
ನಿರಾಸೆಯಲಿ ಮುನಿದಂತೆ ದನಿ
ಕಡೆಗೂ ಮುಖದಲಿ ಕಂಡಿತ್ತು ಹರ್ಷ
ಕಪ್ಪಾದ ಮೇಘ ಧರೆಗಿಳಿಯಿತು ವರ್ಷ

Tuesday, June 21, 2011

(ಕೃಪೆ: ಪ್ರಕಾಶ್ ಹೆಗ್ಡೆ - ಬ್ಲಾಗ್ ಛಾಯಾಚಿತ್ತಾರದಿಂದ)

ನಿರೀಕ್ಷೆ


ಕಾದು ಕಾದು ಕಾತರತೆ ಸತ್ತಿದೆ
ಕುಳಿತಿದ್ದೆ ಬೆಳಕಲಿ ದೀಪ ಬತ್ತಿದೆ
ನಿನಗೇನು? ನಿನಗಿನ್ನೂ ಹೊತ್ತಿದೆ..
ನಾ ಬೆಳಕಿಂದ ಕತ್ತಲೆಡೆಗೆ ಜಾರಿದೆ

ಮೇಲಿಂದ ಬರಲು ಏನಡ್ಡಿ ?
ನನ್ನರ್ಥಮಾಡಿಕೋ ಏ ದಡ್ಡಿ
ನಂಬಿ ಕುಳಿತಿರುವೆ ನಿನ್ನನೇ...
ಮುಳುಗುವವಗೆ ಆಸರೆ ಹುಲ್ಲು ಕಡ್ಡಿ

ಮಹಡಿಯಿದು ನಿನ್ನದು
ಗಡಿಯದುವೇ ನನ್ನದು
ಕೈಬಿಡಬೇಡವೆಂದವಳು...
ಕೈಕೊಡುವುದು ಸಲ್ಲದು

ಅಂಗಳದಿ ಬೆಳಕು ಮಾಯವಾಗುವ ಮುನ್ನ
ತಿಂಗಳದು ಕರಗಿ ಕತ್ತಲಾಗುವ ಮುನ್ನ
ಕಂಗಳಲಿ ತುಂಬಿಕೊಳ್ಳಲುಬಹುದೇ?..
ನಿನ್ನಂದ ಚಂದವಿದು ಕರಗುವಾ ಮುನ್ನ

Thursday, June 2, 2011

ಎರಡು ಚಿತ್ರ ಕವನಗಳು (ಪ್ರಕಾಶು, ಪಾಲಾ)

ಚಿತ್ರ: ಪ್ರಕಾಶ್ (ಛಾಯಾಕನ್ನಡಿ)


ಧೂಪ್-ಛಾಂವ್

ಉಜಾಲೋಂಕೆ ಅಂಧೇರೆ
ಮನ್ಕಿ ಗೆಹರಾಯಿಯೋಂಮೆ
ಕೆಹತಾ ಹೈ ದಿಲ್ ಹೌಲೆ ಹೌಲೆ

ದಿನ್ ಢಲಾ ಶಾಮ್ ಹುಯೀ
ಇಂತಜಾರ್ ಮೆಂ ರಾಧಾ ಜಪೆ
ಶ್ಯಾಮ್ ಕಾ ನಾಮ್ ಹೌಲೆ ಹೌಲೆ

ದುನಿಯಾಂ ಕೆ ಲಿಯೆ ಭಲೆ ಹೋ ಅಂಧೇರೆ
ಮನ್ ಮಂದಿರ್ ಕೆ ಅಂಧೇರೋಂಮೆ ಭೀ ಜಲೆ
ಭಾವನಾವೋಂಕಾ ದಿಯಾ ಹೌಲೆ ಹೌಲೆ

ಜೋ ಉಜಾಲೋಂಮೆ ದಿಖೆ ಒಹ್
ಅಕ್ಸರ್ ಹೋತಾ ಹೈ ಆಂಖ್ ಕಾ ದೋಖಾ
ಧೋಕೆ ಭೀ ಹೋತೇಹೈಂ ಉಜಾಲೋಂ ಮೆ ಹೌಲೆ ಹೌಲೆ


ಚಿತ್ರ: ಪಾಲಾ (PaLa)

ಸವಾಲು

ವಾಹ್ರೆ ನನ್ನ ಇರುವೆ ನೀ ಕಾಲು ಕೆದಕುತಿರುವೆ..
ಕೆದಕು ಅಲ್ಲಾ ಮುದುಕನಾನು ಕೆಂಚು ಕೋತಿ ಇರುವೆ..
ಬಾರೋ ನನ್ನ ಮೀಸೆ ನೋಡು ಇರುವೆ ಮಾಮ...//೨// ವಾಹ್ರೆ ನನ್ನ ಇರುವೆ//

ಸಾಮನಾ

ಮೈಂ ತೇರೆ ಸಾಮನೆ
ತೂ ಮೇರೆ ಸಾಮನೆ
ಹಮ್ ಐಸೆ ಹೀ ಪ್ಯಾರ್ ಕರೆಂ

ಜೋ ಮುಝೇ ತೂ ಮಿಲ್ ಗಯಾ
ಮೈ ತೇರಿ ಹೀ ಹೋ ಗಯೀ
ಬಸ್ ಐಸೆ ಹೀ ಪ್ಯಾರ್ ಕರೇಂ


ನನ್ನು ದೋಚುಕೊಂಡುವಟೇ

ನನ್ನು ದೋಚುಕೊಂಡುವಟೇ
ಚೀಮಲ ದೊರಸಾನಿ
ಕನ್ನುಲ್ಲೋ ನುವ್ವೇ ಲೇ
ಎಲ್ಲಪ್ಪಡೂ ಸ್ವಾಮೀ...
ಎಲ್ಲಪ್ಪಡೂ ಸ್ವಾಮೀ..sss
// ನನ್ನು ದೋಚುಕೊಂಡು//



Friday, May 20, 2011

ಅವ್ವವ್ವ ನೀ ಬ್ಯಾಡವ್ವ

(ಚಿತ್ರ ಕೃಪೆ: ನೆನಪಿನ ಸಾಲು ಬ್ಲಾಗೊಡೆಯ ಪ್ರವೀಣ್)

ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ಗದ್ದಿ ತಾಕ್ಕೆ
ಮನ್ಯಾಗ್ ಇದ್ಬಿಡು
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?

ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ಒಲೀತಾಕ್ಕೆ
ಇದ್ದು ಬಿಡ್ ದೇವ್ರ ಮನ್ಯಾಗ್
ಜಪ ದ್ಯಾನ ಮಾಡ್ಕಂಡ್
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?

ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ನೀ ಹೊಳೀ ದಂಡ್ಯಾಕ್ಕೆ
ಬಟ್ಟೆ ಬರೆ ಒಗೀಬ್ಯಾಡ
ನಡ ಇಡ್ಕ್ಂಡೀತು ಮುಪ್ನಾಗೆ
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?

ಅವ್ವವ್ವ ಎಲ್ಲಾಕ್ಕೂ ಹೂಂ
ಆದ್ರೆ ನಿನ್ನುತ್ತರ..!!!
ಏಳ್ಬಿಡು ಅಮ್ಮಯ್ಯಂಗೆ
ತೆಗ್ದಿಡು ನನ್ ತಾಟ್ ನಾನ್ ಸತ್ಮ್ಯಾಕ್ಕೆ
ಯಾಕಂದ್ರೆ..ಈಟ್ ಮಾತ್ರಾನೂ
ಆಕಾಣಿಲ್ಲ ಪುಟ್ನೆಂಡ್ತಿ
ಮುದ್ದೆ-ಸಾರು ನಿನ್ತಾಟ್ಗೆ...?

Wednesday, April 6, 2011

ಚಿತ್ರ ಕೃಪೆ: ಮಿತ್ರ ಪ್ರಕಾಶನ ಬ್ಲಾಗ್ (ಛಾಯಾ ಚಿತ್ತಾರ)

ಮೇಘವಾಗಲು ಸಾರ್ಥಕ ಇಳೆಗೆ

ಮೇಘಕೊಂದು ಆಗಲಿದೆ ಮೇಘದ ಸವಾಲು
ಕಪ್ಪು ಮೋಡ ಕೇಳಿತು ಬಿಳಿಮೋಡದ ಅಹವಾಲು
ನೀನು ತುಂಬಿಕೊಂಡು ಕಪ್ಪು ನಾನು ಬರಿದೇ
ಓಲಾಡುತಿರುವೆ ಹಗುರಾಗಿ ಒಂದೆಡೆ ನಿಲ್ಲದೇ

ನೀನಿಲ್ಲೋ ಅಲ್ಲೋ ಎಲ್ಲೋ ಒಂದೆಡೆ ಸುರಿವೆ
ನಾ ಹೀಗೇ ಗಾಳಿಹೋದೆಡೆ ನಿಲ್ಲದೇ ಅಲಿವೆ
ಹೇಳಿ ಬಿಡು ಬಿಟ್ಟು ಕೊಡು ಗುಟ್ಟನಿಂದು ನನಗೆ
ನಾನೂ ನಿನ್ನಂತೆ ಹೇಗಾಗಲಿ ಸಾರ್ಥಕ ಇಳೆಗೆ

ಮನದುಗುಡ ಬಿಚ್ಚಿ ಕಪ್ಪು ಹೇಳಿತು, ಬಿಳಿಯಾ
ಅಯ್ಯೋ ತುಂಬಿದೆ ಕಲ್ಮಶ ನನ್ನಲಿ ಗೆಳೆಯಾ
ಮನುಜ ಬಲು ಲಾಲಸಿ ಬಿಡಲಿಲ್ಲ ನನ್ನನೂ
ಬಿಳುಪಾಗಿರುವೆ ಹಾಗೇ ಇರು ಬಿಡವೊಲ್ಲ ನಿನ್ನನೂ

ನನಗೊಮ್ಮೆ ಹೋಗಬೇಕಿದೆ ನೆಲಕೆ ಕೆಳಗೆ
ಹನಿಯಾಗಿ ತುಂತುರಿಸಿ ಹನಿಸಿ ಅನ್ನಬೆಳೆಗೆ
ಕಪ್ಪಾದರೂ ಪರವಿಲ್ಲ ಹರಿದು ಸೇರಿ ಜಲಾಶಯ
ಬಿಸಿಗೆ ಧಗೆಗೆ ತಣಿಸಿ ಆವಿಯಾದರೂ ಇಲ್ಲ ಭಯ

ನಿಸರ್ಗ ನಿಯಮವಿದು ದಾಳಗಳು ನಾನು ನೀನು
ಹೂವೆಂದು ಮುಟ್ಟದೇ ಮಧುಹೀರದೇ ಜೇನು?
ಸೊಳ್ಳೆಯ ಕಪ್ಪೆ ಅದನು ಹಾವು ಮೇಲಿಲ್ಲವೇ ಹದ್ದು?
ಜೀವಿಗಳು, ಬಾಳುವುದು ನಿಯಮ ಅವಕಿಲ್ಲವೇ ಜಿದ್ದು?