Sunday, December 22, 2013

ನಿಂಗಿ-ಭಂಗಿ

(Source:Rashichaturvedi.blogspot.com)
ನಿಂಗಿ-ಭಂಗಿ
ಹರಿವಾಣ ಹೊತ್ತವ್ಳೆ
ನೀರನ್ನ ತತ್ತಾವ್ಳೆ
ನಿಂಗಿ ಬೋ ರಿಮಿ ರಿಮಿ
ಉದ್ದಕ್ಕೆ ಹಾವ್ನಂಗೆ
ಓಲಾಡೋ ಜಡ್ಯಾಗೆ
ತಾಳ ಆಕಿದ್ರೆ ತಕ ಧಿಮಿ
ವೈನಾಗೆ ನಡುವೈತೆ
ಬಳ್ಯಂಗೆ ಬಳ್ಕೈತೆ
ಕೊಡ ಕುಂತ್ರೆ ಏನ್ಪರಿ
ನಡ್ಯೋದು ಕುಲ್ಕುತ್ತಾ
ರಸಗುಲ್ಲಾ ಕಲ್ಕಾತ್ತಾ
ಕಾಡ್ತಾಳೆ ಕನ್ಸಾಗೆ ಪರಿ ಪರಿ
ತಲೆ ಮ್ಯಾಲೊಂದು
ಮತ್ತೆ ಕಂಕ್ಳಾಗೊಂದು
ನವಿಲೂನು ಕಲಿತೈತೆ ನಡ್ಗೆ
ನಿಂಗೀಯ ಚಲುವೀಗೆ
ಮೋಡಕೂ ಯಾಮೋಹ
ಕೆಳಗಿಳಿದು ಕಣ್ಣಾಯ್ತು ತಂಪ್ಗೆ

Thursday, October 24, 2013

ಯೌವನ



ಮತ್ತೊಂದು ಕರವೋಕೆ ಗೀತೆ, ಚಿತ್ರ: ವಖ್ತ್,

ಗಾಯಕ: ಮನ್ನಾ ಡೆ

ಯೌವನ

ಓ ನನ್ನ ಮನದನ್ನೆ

ಅರಿವಿಲ್ಲ ನಿನಗೆ ಚನ್ನೆ

ನೀನಿನ್ನೂ ತರುಣಿಯು ನಾ ತರುಣನಾಗಿಹೇ..

ಕೇಳಿ ನೋಡು ಜೀವವನೇ ಕೊಟ್ಟು ಬಿಡುವೆನೇ..

                        II ಓ ನನ್ನ ಮನದನ್ನೇ II


ಈ ಶೋಕಿ ವೈಯಾರ ಗೆಳತಿಯೇ..ss

ನಿನ್ನಲ್ಲಿಯೇ ಬೇರೆಲ್ಲಿದೇ.. II2II

ಮನವನ್ನೇ ಕದಿಯೋ ಕಲೆಯದು

ನಿನದಲ್ಲದೇ ಬೇರಾರದು..

ಓ ನಿನ್ನ..ಓ ನಿನ್ನ ಕಣ್ಣಲೇ ಕಂಡೆ ನಾ ಮೂಜಗ.. II2II

                        II ಓ ನನ್ನ ಮನದನ್ನೇ II


ಸಿಹಿ ನುಡಿಯನೆರಡು ಗೆಳತಿಯೇ

ನಸುನಕ್ಕು ನೀ ನುಡಿದರೆ.. II2II

ಎದೆ ಆಳದಲ್ಲಿ ಬಡಿತಹೆಚ್ಚಿಸಿ

ನಶೆಯೇರಿಸಿ ಕುಣಿಸುವೆ..

ಓ ಸಖಿ..ಓ ಸಖಿ ಇಂದಿಗೂ ನಾನಿನ್ನ ಪ್ರಿಯ ಸಖ


                        II ಓ ನನ್ನ ಮನದನ್ನೇ II

Wednesday, September 11, 2013

ಗೋಂದಲ ಎಲ್ಲಿ? ಏಕೆ??

ಸ್ನೇಹಿತರೇ ಬಹಳ ದಿನಗಳ ನಂತರ ಭಾವ-ಮಂಥನದಲಿ ಮಂಥನ ಮಾಡುವ ಇಂಧನ ಕೊಟ್ಟ ಬದರಿ ಪಲವಳ್ಳಿಗೆ ಆಭಾರ ವ್ಯಕ್ತಪಡಿಸುತ್ತಾ..ಕೆಲ ಸಾಲುಗಳು...ಈ ದಿನದ ನಮ್ಮ ಗೋಂದಲಮಯ (ಗೊಂದಲಕ್ಕೆ ಅಂಟಿಕೊಂಡ ಎನ್ನುವ ಪ್ರಯೋಗ) ಸಮಾಜದ ಪರಿಸ್ಥಿತಿಯನ್ನು ಕವನಿಸಿದ್ದೇನೆ.....

ಗೋಂದಲ ಎಲ್ಲಿ? ಏಕೆ??

ಕಥೆಯಾಳದ ಕಮರಿಯಲ್ಲಿ ಮುಳುಗಿ
ಕಳೆದು ಹೋಗುವುದು ಪಾತ್ರದ ವ್ಯಥೆ
ಶಾಯಿಯ ಬಣ್ಣ ಬಿಳಿ ಹಾಳೆಯನಾಳಿ
ಎಲ್ಲರೂ ಹಾಯಿ, ಬಡವಗೆ ಮಾತ್ರ ವ್ಯಥೆ

ಕಾರಿರುವರಿಗೆ ಪೆಟ್ರೋಲ್ ಚಿಂತೆಯೇ
ತಿಂದು ಚಲ್ಲಾಡುವಗೆ ಗ್ಯಾಸ್ ಭಯವೇ
ಕಟ್ಟಿಗೆಗೆ ಕಾಡಿಲ್ಲ ಉರಿಸಲೂ ಸೀಮೆಣ್ಣೆ
ಗುಡಿಸಿಲ ಬವಣೆ ಮಹಲಿಗಿಲ್ಲ ಕರುಣೆ

ಮುಖವಾಡ ಕಾಣುವುವು ಕಾಳಜಿತೋರಿ
ಸುಖವಾದ ಅವರದು ಬೇಯ್ಸಿ ಕೊಳ್ಳಲು
ಇವರಿಗವರನು ಅವರಿಗಿವರನು ಬಳಸಿ
ಕೆಲ ಮಂದಿಗೆ ಇದುವೇ ದಿನದ ದಿನಸಿ

ಗಾಂಧಿ ಹೆಸರಲಿ ಖಾದಿ ತೊಟ್ಟವರು
ನ್ಯಾಯವಾದ ಕರಿಕೋಟ ಉಟ್ಟವರು
ಗೃಹ ರಕ್ಷಕನೂ ಆಗಿಬಿಟ್ಟರೆ ಭಕ್ಷಕ ಹೀಗೆ
ಸಾಮಾನ್ಯನು ಬಾಳುವುದಾದರೂ ಹೇಗೆ?

ರಾಮ ತಾನೂ ಕಾಣದಾದ ರಾಮ ರಾಜ್ಯ
ಸೀತೆಗೂ ಬವಣೆ ಆಗಲಿಲ್ಲವೇ ಆವಳೂ ತ್ಯಾಜ್ಯ?
ಗಾಂಧಿ ಕೊಟ್ಟ ಮಂತ್ರ ಆಳುವವಗೆ ಅಂದು
ಶ್ರೀರಕ್ಷೆ ಆಗಿದೆ ಗೋಳು ಹುಯ್ಯಲು ಇಂದು

Wednesday, July 17, 2013

ಹಾಯ್ಕು-ಕಾಯ್ಕು (ಜೀವ ಪರಿಸರ)


ಕತ್ತಲು, ಅಂಧಃಕಾರ ಬೇಸರವಿಲ್ಲ ಗೂಗೆ ಬಾವಲಿಗೆ
ಜೀವನವೇ ನಡೆ ಹರಿತ್ತು ಎಲೆಗೆ, ಸೂರ್ಯ ಬೇಕಿಲ್ಲ ಅಣಬೆಗೆ ಹಂಗಿಲ್ಲ
ಪರಿಸರ, ಜೀವಜಾಲ, ಕುತ್ತು, ಆಪತ್ತು, ಆಹಾರ, ಬಲಿ

ಜಲ, ಬಿಲ, ನೆಲ, ಹೊಲ, ಬೀಜಕೆ ಸಾಕು
ವಿಶಾಲ ಆಕಾಶ, ಗಹನ ಸಾಗರ ಮೋಡ ಆದರೆ ಹನಿ ತುಣುಕು
ಪಸೆಗೆ, ಕಿಸೆಗೆ, ಹೂಹಣ್ಣು ಬಳ್ಳಿಗೆ ಬೇಕು

ಮರಿ, ತಾಯಿ ದಿಟ ಅಪ್ಪ ಶಾಶ್ವತ ಅಲ್ಲ
ಜಲದಿ(ಧಿ), ಹೊಲದಿ, ಕಾಡು ಮೇಡು ನಾಡು ಬೇರೇನು
ನಿಸರ್ಗ ನಿಯಮ ಹಾರಿದರೂ ಸಾಕು ಪರಾಗ


ಮೊಟ್ಟೆ ರೇತ್ರ ಹೊರ ಒಳ ಗರ್ಭ ನೀರಲ್ಲಿ
ಅವತಾರ ವಿಷ್ಣುವಿಗೆ ಜಗಕೆ ಜೀವಜಾಲ ಕೊಂಡಿ ಪರಿಚಯ
ಮೀನಾಯ್ತು ಎಲ್ಲಾ ಜಾಲದ ಬಿಡದ ಬಾಲ

Wednesday, July 3, 2013

ಸೋಲು-ಗೆಲುವು

 
Picture: From Internet
 
 
ಸೋಲು-ಗೆಲುವು
ಸೋಲಿನಲ್ಲೂ ಸುಖ ಸಿಗುವುದೆಂದು
ತಿಳಿದಂದಿನಿಂದ ನನ್ನವಳೊಡನೆ
ಸೋಲುವುದು.. ಈಗೀಗ ನನಗೆ
ಚಟವಾಗಿ ಬಿಟ್ಟಿದೆ....
ಗೆದ್ದರೂ ಸೋತಷ್ಟೇ ಸುಖವೆಂದು
ತಿಳಿದವಳು ನನ್ನೊಂದಿಗೆ ಗೆದ್ದೇ
ಗೆಲುವೆನೆನ್ನುವ ಅವಳದು ಈಗೀಗ
ಹಟವಾಗಿಬಿಟ್ಟಿದೆ........
ನನ್ನ ಮೇಲವಳ ಅವಳಮೇಲೆನ್ನ
ಎತ್ತಿಕಟ್ಟಿ, ಪುಸಲಾಯಿಸಿ ಕೆಣಕಿ
ನಮ್ಮಾಟ ವಿನೋದ ಮಗಳಿಗೀಗ
ದಿಟವಾಗಿಬಿಟ್ಟಿದೆ.......

Sunday, May 19, 2013

ಮೇರೆ ಸನಮ್ - ಪ್ರೀತಿಯ ಋತು


ಚಿತ್ರ: ಮೇರೆ ಸನಮ್ (1961), ಗಾಯಕರು- ಮೊಹಮ್ಮದ್ ರಫಿ, ಸಂಗೀತ- ಓ ಪಿ ನಯ್ಯರ್
ಹಾಡು: ಹಂದಂ ಮೇರೆ..ಮಾನ್ ಭೀ ಜಾವೋ...ಕೆಹನಾ ಮೇರೆ ಪ್ಯಾರ್ ಕಾ....
ಕನ್ನಡ ಭಾವಾನುವಾದ: ಡಾ. ಆಜಾದ್ ಐ ಎಸ್.


ಪ್ರೀತಿಯ ಋತು

ಓ..ಸಖಿಯೇ ಹೀಗೇ, ಅಪ್ಪಿಕೋ ಒಮ್ಮೆ
ನನ್ನಯ ಮನಸಿನ ಮಾತಿದು
ಅರೆ..ನವಿರು ನವಿರು ನಗು ತುಟಿಯಲ್ಲಿ
ನಿನ್ನಯ ಮನಸಿನ ಮಾತದು
          II ಓ ಸಖಿಯೇ ಹೀಗೇ ಅಪ್ಪಿಕೋ ಒಮ್ಮೆII ..ಪ.
ಆಯ್...ಪ್ರೇಮ ಪ್ರೀತಿಯ ಈ ಋತು
ಇರದು ಎಂದೆಂದೂ
ಮನಸಲಿ ಮುದದ ಭಾವವು
ಬರದು ಹಾಗೆಂದೂ.. II 2 II
ಖರೇ..ಇದು ಎಂದಿಗೂ, ನಿನ್ನಾಣೆ ಇಂದಿಗೂ...
ಮುಂಗುರುಳಾ ಹೀಗೇ ಸರಿಸಿದರೆ, ನಯನದಿ ಆಸೆ ಇಣುಕುವುದು
          II ಓ ಸಖಿಯೇ ಹೀಗೇ ಅಪ್ಪಿಕೋ ಒಮ್ಮೆII ..ಪ.
ನಿನ್ನಯ ಮುಖದ ಹೂನಗೆ
ಮಾಸದೆ ಇರಲೆಂದೂ
ಕನಸಲಿ ದಿನವೂ ಕಾಣಿಸಿ
ನೆನಪಿರು ಎಂದೆಂದೂ..II2II
ಖರೇ..ಇದು ಎಂದಿಗೂ, ನಿನ್ನಾಣೆ ಇಂದಿಗೂ...
ಕರುಣಿಸು ನಿನ್ನ ದರುಶನವಾ, ಸಾರ್ಥಕ ಆಗಲಿ ಜೀವನವೂ
          II ಓ ಸಖಿಯೇ ಹೀಗೇ ಅಪ್ಪಿಕೋ ಒಮ್ಮೆII ..ಪ.

Saturday, March 9, 2013

ಪುರುಷ ದಿನಾಚರಣೆ


ಪುರುಷ ದಿನಾಚರಣೆ

ಮಹಿಳಾ ಮಣಿಗಳೇ, ಪುರುಷ ಹಕ್ಕು ಬಾಧ್ಯತೆಗಳ ಸಂರಕ್ಷಣಾ ದಿನವಾದ ಇಂದು - ಮಹಿಳೆಯರೆಲ್ಲಾ ಒಂದು ಗೂಡಿ ಅಬಲರಾದ, ಸಮಾಜದ ಹೀಗಳೆಯುವಿಕೆಗೆ ತುತ್ತಾಗಿರುವ ಪುರುಷರ ಹಿತಕೋರಿ ಅವರ ಹಕ್ಕು ಬಾಧ್ಯತೆಗಳ ಸಂರಕ್ಷಣೆಗೆ ನಮ್ಮ ತನು ಮನ ಧನಗಳಿಂದ ಸಹಕಾರ ಪ್ರೋತ್ಸಾಹ ನೀಡುವ ಘೋಷಣೆಗಳ ಪುನರುಚ್ಛಾರದ ದಿನ. ಸಂಯುಕ್ತ ರಾಷ್ಟ್ರಗಳ ಒಕ್ಕೂಟ ಈ ದಿನವನ್ನು ಮಹಿಳೆಯರಿಂದ ಪೀಡಿತ, ಶೋಷಿತ ಪುರುಷರ, ಉಡುಗುತ್ತಿರುವ ದನಿಯನ್ನು ಸಶಕ್ತಗೊಳಿಸಲು ೧೯೭೧ ರಲ್ಲಿ ಮಾರ್ಚ್ ೧೦ ನ್ನು ವಿಶ್ವ ಪುರುಷ ದಿನವೆಂದು ಘೋಷಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. “ಪುರುಷಂ ನ ಸ್ವಾತಂತ್ರ್ಯಂ ಅರ್ಹತಿ” ಎನ್ನುವ ನಮ್ಮ ವೇದಗಳ ಘೋಷಣೆಗಳನ್ನು ಪುನಃ ಪರಿಶೀಲಿಸುವ ಕೆಲಸ ಪುರುಷ ಹಿತಕೋರುವ ಮಹಿಳಾಮಣಿಗಳಾದ ನಾವು ಮಾಡಬೇಕಿದೆ. ಈ ದಿನದ ಸಮಾರಂಭಲ್ಲಿ ಕೆಲವು ವಿಶೇಷ ಸಾಧಕ ಪುರುಷರನ್ನು ಸತ್ಕರಿಸುವ ಕಾರ್ಯಕ್ರಮದ ಜೊತೆಗೆ ಅಪೂರ್ವ ಸಾಹಸ ತೋರಿ ಒಬ್ಬ ಅಮಾಯಕ ಸಾಫ್ಟ್ ವೇರ್ ಅಭಿಯಂತರನನ್ನು ರಕ್ಷಿಸಿ ಪುಂಡ ಹುಡುಗಿಯರಿಂದ ಪಾರುಮಾಡಿಸಿ ಅವನ ಮಾನ-ಪ್ರಾಣ ಕಾಪಾಡಿದ ಶ್ರೀ ವೀರಪ್ಪ ಅವರನ್ನು ಸನ್ಮಾನಿಸುವ ದಿನ. ಈ ದಿನದ ಮುಖ್ಯ ಅತಿಥಿಗಳಾಗಿ ಮಹಿಳಾ ಅತಿರೇಕಗಳ ಹೋರಾಟಕ್ಕೇ ತನ್ನ ಜೀವನವನ್ನು ಮುಡುಪಾಗಿಟ್ಟಿರುವ ಡಾ. ಶೀಲವಂತ್ ರವರು ಆಗಮಿಸಿದ್ದಾರೆ. ಮಹಿಳೆಯರೇ ತುಂಬಿರುವ ಇವರ ಕಾರ್ಯಕ್ಷೇತ್ರವಾದ ಆರೋಗ್ಯ ಲಾಖೆಯಲ್ಲಿ ಏಕೈಕ ವೀರಾಗ್ರಣಿಯಂತೆ ತಮ್ಮ ಮತ್ತು ಗಂಡು ಜಾತಿಯ ಮೇಲಿನ ಅತ್ಯಾಚಾರಗಳನ್ನು ತಡೆವ ಹೋರಾಟಗಾರನಾಗಿ ಇವರು ಹೆಸರು ಮಾಡಿದ್ದಾರೆ. ಈ ಸಭೆಯ ಅಧ್ಯಕ್ಷತೆಯನ್ನು ಮಾನ್ಯೆ ಆರೋಗ್ಯ ಸಚಿವೆಯಾದ ಶ್ರೀಮತಿ ಡಾ. ಶತಪುರುಷ ಕಲ್ಯಾಣಿ ದೇವಿ ವಹಿಸಿಕೊಂಡಿದ್ದಾರೆ. ಅಲ್ಲದೇ, ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಅರ್ಹರಾದ ಧೀರ ಪುರುಷರು, ವಿಶೇಷ ಸನ್ಮಾನಕ್ಕೆ ಹಕ್ಕುದಾರರಾದ ಶ್ರೀ ವೀರಪ್ಪ ಉಪಸ್ಥಿತರಿದ್ದಾರೆ. ಈ ಎಲ್ಲರಿಗೂ ಆದರದ ಸುಸ್ವಾಗತ. ಈಗ ವಿಶೇಷ ಸನ್ಮಾನಿತ ಶ್ರೀ ವೀರಪ್ಪ ನಮ್ಮನ್ನುದ್ದೇಶಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳಬೇಕೆಂದು ಕೋರುತ್ತೇನೆ.
ಮಾನ್ಯೆ ಅಧ್ಯಕ್ಷಿಣಿ ದೇವಿಯವರೇ, ಪುರುಷರೆಲ್ಲಾ ಹೆಮ್ಮೆ ಪಡುವ ಸಾಧನೆಯ ಕೆಲಸದಲ್ಲಿ ತೊಡಗಿಸಿಕೊಂಡ ಪುರುಷರ ಮೇಲಿನ ಸ್ತ್ರೀ ಅತ್ಯಾಚಾರವನ್ನು ತಡೆಯುವ ಪಣತೊಟ್ಟ ಡಾ. ಶೀಲವಂತ್ ರವರೇ ನನ್ನ ಶೋಷಿತ ಪುರುಷ ಬಾಂಧವರೆ, ಸ್ತ್ರೀ ಸ್ನೇಹಿತೆಯರೇ.
ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಧು ಮತ್ತು ಪ್ರಾಮಾಣಿಕ ಸಾಫ್ಟ್ ವೇರ್ ಅಭಿಯಂತರನೊಬ್ಬ ಕೆಲಸಕ್ಕೆ ತೆರಳುವಾಗ ಕಾರಿನಲ್ಲಿ ಹಟಾತ್ತನೆ ಎರಗಿದ ಪುಂಡಾಟದ ಹುಡುಗಿಯರ ಗುಂಪೊಂದು ಆತನನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಅಸ್ತ್ರೀಯ ವಿಧದದಲ್ಲಿ ಮಾನಹರಣದ ಪ್ರಯತ್ನ ಮಾಡಿದ್ದಾರೆ. ಆತನ ಬಟ್ಟೆ ಬಿಚ್ಚಿ ವಿಧ ವಿಧ ಚಿತ್ರಹಿಂಸೆ ಕೊಟ್ಟಿದ್ದರು. ಪುರುಷ ಹಾಸ್ಟಲ್ ನಲ್ಲಿ ಕಾವಲಿನಲ್ಲಿದ್ದ ನಾನು ಆಗಷ್ಟೇ ಹತ್ತಿರದ ನಮ್ಮ ಕ್ವಾರ್ಟರ್ಸ್ನ ಗೆ ಹೋಗಿದ್ದೆ. ಪೋಲೀಸ್ ಉನ್ನತ ಅಧಿಕಾರಿಣಿಯಾಗಿರುವ ನನ್ನ ಹೆಂಡತಿ ಕಮೀಶನರ್ ದಿಟ್ಟಮ್ಮನಿಗೆ ಊಟ ಬಡಿಸಿ ಮುಸುರೆ ಪಾತ್ರೆ ತೊಳೆದಿಡುವಾಗ ಯಾರೋ ಪೀಡಿತ ಪುರುಷನ ಚೀತ್ಕಾರ ಕೇಳಿದಂತಾಗಿ ಯಾವುದಕ್ಕೂ ಇರಲಿ ಎಂದು ಖಾರದ ಪುಡಿ ಡಬ್ಬಿಯನ್ನು ಪ್ಯಾಂಟ್ ಜೋಬಿಗೆ ಹಾಕಿಕೊಂಡೆ. ಹತ್ತಿರದ ಮಾವಿನ ತೋಪಿನಿಂದ ಕೂಗಾಟ ಕೇಳಿಬರುತ್ತಿತ್ತು. ಅನಾಹುತವಾಗುವುದಕ್ಕೆ ಮುಂಚೆ ಅಲ್ಲಿಗೆ ತಲುಪಿದ್ದೆ, ಪುಡಿಯನ್ನು ಎರಚಿ ಅಲ್ಲೇ ಬಿದ್ದಿದ್ದ ಮಾವಿನ ಮರದ ರೆಂಬೆಗಳಿಂದ ಹುಡುಗಿಯರೊಂದಿಗೆ ಹೋರಾಡಿ ಆ ಅಭಿಯಂತರನನ್ನು ರಕ್ಷಿಸಲುಪ್ರಯತ್ನಿಸಿದೆ. ನನ್ನ ಓವರ್ ಕೋಟನ್ನು ಅವನ ಮೈಮುಚ್ಚಲು ಕೊಟ್ಟೆ. ಊಟ ಬಡಿಸಿ ಕಾಣೆಯಾದ ನನ್ನನ್ನು ಹುಡಿಕಿಕೊಂಡು ಸರಿಯಾದ ಸಮಯಕ್ಕೆ ಅಲ್ಲಿಗೆ ಬಂದ ನನ್ನ ಕಮೀಶನರ್ ಹೆಂಡತಿ ಆ ಪುಂಡ ಅತ್ಯಾಚಾರಿ ಹುಡುಗಿಯರನ್ನು ಹಿಡಿಯುವಲ್ಲಿ ಸಹಕರಿಸಿದಳು. ಈ ದಿನ ಮಹಿಳಾ ಸಂಘಟನೆಗಳು ನನ್ನನ್ನು ಸನ್ಮಾನಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ......”
“ಅಪ್ಪಾ...ಅಪ್ಪಾ.... ಆಫೀಸಿಗೆ ಟೈಂ ಆಗ್ತಿದೆ..ಹೋಗಲ್ವಾ...?? ಅಮ್ಮ ಅಡುಗೆ ಮನೆಯಿಂದ ಐದಾರು ಸಲ ಎಬ್ಬಿಸು ನಿನ್ನ ಅಪ್ಪನ್ನ ಅಂತ ಹೇಳಿದ್ಲು....ಅಪ್ಪಾ...ssss
ಕಣ್ಣುಜ್ಜುತ್ತಾ ಎದ್ದ ನನಗೆ.... ಮಹಿಳಾದಿನದ ಕಾರ್ಯಕ್ರಮ ನೋಡಿಬಂದು.. ಅಕಸ್ಮಾತ್ ದೇವರು ಗಂಡಿನ ಶಕ್ತಿ ಹೆಣ್ಣಿಗೆ, ಹೆಣ್ಣಿನ ಶಕ್ತಿ ಗಂಡಿಗೆ ಅದಲು ಬದಲು ಮಾಡಿದ್ರೆ..??? ಹೇಗೆ???? ಎಂದು ಯೋಚಿಸಿ ಮಲಗಿದ್ದರ ಪರಿಣಾಮವಾಗಿ ಇಲ್ಲಿವರೆಗೆ ಕಂಡದ್ದು ಕನಸು ಎಂದು ತಿಳಿಯುವುದಕ್ಕೆ ತಡವಾಗಲಿಲ್ಲ.

Friday, February 1, 2013

ಹಳ್ಳಿ-ಒಂದು ನೆನಪು

Foto: From web site

ಮನೆಯ ತುಂಬ ಚಿಂವ್ಗುಟ್ಟೋ ಗುಬ್ಬಿ
ಬರಲು ಬಾಲ್ಯದ ನೆನಪು ಬಾಚಿ ತಬ್ಬಿ
ಮರೆತಿಲ್ಲ ಗುಬ್ಬಕ್ಕ ಅಲ್ಲಿ ಹರಡಿದ ಕಾಳು
ಈಗ ಕಾಳೆಲ್ಲಿ ಆಗಿದೆ ನೀರಿಗೂ ಗೋಳು

ಹೊಲದ ತುಂಬ ಬೆಳೆದ  ಪಚ್ಚ ಪಯಿರು
ಅಲ್ಲವೇ ಇದುವೇ ಜೀವವೆಲ್ಲಕೆ ಉಸಿರು?
ಬೆಳೆದನ್ನದಾತನ ಕಾಯಕ ಹಾಲು ಮೊಸರು
ಇಳೆಯಗಲ ಹಸಿರುಟ್ಟು ತುಂಬಿತ್ತು ಬಸಿರು

ಗದ್ದೆ ತೋಟದ ಬದುಗಳಲ್ಲಿತ್ತು ಬದುಕು
ಇಲಿ ಹಾವು ಮುಂಗುಸಿ ಹದ್ದಿಗೂ ಸರಕು
ಕೆರೆಯಂಗಳ ತೊರೆಹಳ್ಳ ಕೋಡಿ ಕುಂಟೆ
ಹಾಗಿದ್ದ ದಿನಗಳವು ಮರೆಯುವುದು ಉಂಟೆ?

ಬಿಡದೆ ವಾರವಿಡೀ ಸುರಿದ ಧೋ ಮಳೆ
ಕೊಡದೆ ರೈತಗೂ ಎಡೆ ಹೊಲವೆಲ್ಲ ಕಳೆ
ಹೊರಟು ಎಂಕ, ಮಂಕ ಸುಬ್ಬಿ ಗೇಯ್ಮೆಗೆ
ಕಳೆಕಿತ್ತು ಬಿತ್ತು, ಪೈರು ನಾಟಿ ಕೊಯ್ಲಿಗೆ

ಬೆಳೆ ಬಂಗಾರ ಎಲ್ಲೆಡೆ ಭತ್ತ, ರಾಗಿ ಕಬ್ಬು
ಹೊಲಕಿಳಿದರೆ ಮೇವು, ಎಳ್ಳು ಅವರೆ ಗಬ್ಬು
ಇತಿಕವರೆ ವಗ್ಗರಣೆ ಸಾರು ಅಮ್ಮನ ಸಡಗರ
ಮುದ್ದೆ ಉಣ್ಣಲು ಬಿಗಿದು ಕಟ್ಟಿದ ಅಪ್ಪ ಧೋತರ