Sunday, September 26, 2010

ಎರಡು - ಮಾತು

ದೀಕ್ಷೆ

ಹನಿ ಹನಿಸಿದಾಗ ಮಡು
ತುಂಬಿ ಬಂದಾಗ ನೆಡು
ಗಿಡ ಬಳ್ಳಿ ಹಸಿರಾಗಲಿ ಕಾಡು
 ತೊಡು ದೀಕ್ಷೆ, ಬಿಡು ನಿರೀಕ್ಷೆ

ನೀನು, ನಿನ್ನವರಿಗಿದು ಪರೀಕ್ಷೆ

ಚಲಿಸಿ ಬಿಡದೆಭುವಿ ತನ್ನಾಕಕ್ಷೆ



ಇಲ್ಲಗಾವಲು ಹಸಿರು ಬರೀ ಸೀಳು

ಗೋಮಾಳವಿಲ್ಲ ಆಗಿ ಎಲ್ಲ ಗೋಳು

ಹೊಗೆ ಪ್ರದೂಷಣೆ ಹಾಳು ಹಾಳು


ನೀರಿಲ್ಲ ಎಲ್ಲೆಡೆ ನೀರ್-ಮಲ

ಪ್ರಾಣವಾಯು ಆಗಿ ವಿಷಾನಿಲ

ತಲ-ಜಲ-ಚರ ಒದ್ದಾಡಿ ವಿಲವಿಲ


ಸೂರ್ಯ ಶಕ್ತಿ

ಕೂಡಿಟ್ಟರೆ ಹನಿ

ಆಗುವುದು ಖನಿ

ಒಂದೊಂದೇ ದನಿ

ಕೊಳ್ಳಲಿ ಮಾರ್ದನಿ

ಮನೆಯಾಗಿ ಮೊದಲು

ಬೀದಿ ಮಾಡಿ ನಕಲು

ಎಲ್ಲ ಒಂದಾಗಿ ಮಾಡಲು

ಉಕ್ಕಿಹರಿವುದು ಹೊನಲು

ವಿವೇಚಿಸಿ ಉಪಯೋಗಿಸಲು

ನಿಸರ್ಗದತ್ತ ಸೂರ್ಯನ ಬಿಸಿಲು

Friday, September 17, 2010

ಸಸ್ಯವನದಲ್ಲಿ ಬ್ಲಾಗೋತ್ಸವ












ಸಸ್ಯವನದ ಸೊಬಗಿನಲ್ಲಿ ಬ್ಲಾಗಿಗರ ಬಳಗದಲ್ಲಿ

ಅರ್ಕಾವತಿ ಹರಿಯುವಲ್ಲಿ ಸಸ್ಯಗಳ ನೆಟ್ಟೆವಲ್ಲಿ
ಈಶ್ವರರ ಸಾಂಗತ್ಯದಲ್ಲಿ ಸಸ್ಯವನದ ತಂಪಿನಲ್ಲಿ
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ..
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ
ಪಕ್ಕುಮಾಮನ ಸಾರಥ್ಯದಲ್ಲಿ ಶಿವುಛಾಯಾಲೋಕದಲ್ಲಿ
ಪರಾಂಜಪೆ ದೇಸಾಯರ ಗಂಭೀರ ಚರ್ಚೆಗಳಲಿ
ಈಶ್ವರರ ಸಸ್ಯಜ್ಞಾನ ಹುಡುಗರ ಹುಡುಕಾಟದಲಿ
ಬ್ಲಾಗತ್ಸವ ನಮ್ಮ ಬ್ಲಾಗೋತ್ಸವ
ಅನಿರಾಘು ನವೀನ್ ಶಿಪ್ರ ಗುರುಮಹೇಶಸುಗುಣರೊಂದಿಗೆ
ದಿಲ್ಪ್ರಗತಿ ವಸುದೇಶ ವಿದ್ಯಾ ಆಶಶೀಶ್ ಪ್ರಶಾಂತ ವೈದ್ಯ
ಚೇತು ನಂಜುಂಡ್ ಒಡನಾಟದಲ್ಲಿ ಜಲನಯನದ ಉಪವಾಸದಲ್ಲಿ
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ