Friday, October 1, 2010

ಗೊತ್ತಿಲ್ಲ ಮಗು

ಅಪ್ಪಾ



ಏನು ಮಗು?


ದೇವನಹಳ್ಳಿ ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಯ್ತು ಅಲ್ವಪ್ಪಾ?


ಹೌದು ಮಗು ನಾಡಿಗೆ ಒಳ್ಳೆ ವಿಮಾನ ನಿಲ್ದಾಣ ಸಿಕ್ತು


ಅದಲ್ಲಪ್ಪಾ..ಕೋಟ್ಯಾಂತರ ಸಿಕ್ಕ ರೈತ


ನಾಲ್ಕೈದೇ ವರ್ಷದಲ್ಲಿ ಬೀದಿಗೆ ಬಂದಾಂತ...


ಗೊತ್ತಿಲ್ಲ ಮಗು






ಅಪ್ಪಾ


ಹೇಳು.ಏನು?


ಮತ್ತೆ ಇನ್ನಷ್ಟು ದೇವನಹಳ್ಳಿ ದೊಡ್ಡಬಳ್ಳಾಪುರದ ರೈತರು


ಸರ್ಕಾರದ ಭೂ ಸ್ವಾಧೀನಕ್ಕೆ ಒಪ್ತಾ ಇಲ್ವಂತಲ್ಲಪ್ಪ


ಹೌದು ಕಣೋ ನೀನೇ ಹೇಳಿದ್ಯಲ್ಲ, ಬೇರೆ ಗೇಯ್ಮೆ ಗೊತ್ತಿಲ್ದೇ


ಹಣ ಖರ್ಚು ಮಾಡಿ ಬೀದಿಗೆ ಬರೋದು ಬೇಡಾಂತ..


ಅಲ್ಲಪ್ಪಾ..ಅವರ ಹೆಸರಲ್ಲಿದ್ದ ಜಮೀನು


ಮಂತ್ರಿಗಳು ದೋಚ್ಕಂಡವ್ರಂತೆ...?


ನಂಗೊತ್ತಿಲ್ಲ ಮಗು...






ಅಪ್ಪಾ..


ಇನ್ನೂ ಏನೋ ನಿಂದು...?


ಈ ಸರ್ತಿ ದಸರಾಕ್ಕೆ ಕರ್ಕೊಂಡು ಹೋಗ್ತೀಯಾ?


ಆಗಲಿ ಕಣೋ ನಿಮ್ಮಣ್ಣಂಗೆ ಹೇಳು


ರೈಲಲ್ಲಿ ಎಲ್ಲರಿಗೆ ಟಿಕೇಟ್ ಮಾಡ್ಸು ಅಂತ.


ಊಂ ನನಗೆ ಬೇಡ,, ನಮ್ಮ ಮುಖ್ಯಮಂತ್ರಿಗಳು


ಹೊಸ ವಿಮಾನ ನಿಲ್ದಾಣ ಮಾಡಿದ್ದಾರೆ, ವಿಮಾನದಲ್ಲೇ ಹೋಗ್ಬೇಕು


ಆಯ್ತಪ್ಪಾ..ನೀನು ನಿನ್ನಣ್ಣ ಇಬ್ಬರೇ ಹೋಗಿ ಬನ್ನಿ..


ಅಂದ ಹಾಗೆ ಅಲ್ಲೂ ಮಿನಿಸ್ಟ್ರ ಸಂಬಂಧೀಕರು


ಜಮೀನು ಕೊಂಡ್ಕೊಂಡಿದ್ದಾರಂತೆ...


ಲೋ ತರ್ಲೆ...


ನಂಗೊತ್ತಿಲ್ಲ ಕಣೋ...