Thursday, February 25, 2010

ಛಲ-ಬಲ

ಬಿಡೆ ಎನ್ನುತಿದೆ

ಬೆಂಬಿಡದೆ ಬರುತಿದೆ

ಕೆಂಡಕೈಲಿ ಹಿಡಿದು

ಚೆಂಡಾಡುವ ಛಲ

ಉಂಡು ಗುಂಡಾಗುವ ಬಲ

ಷರತ್ತು ಇರಬೇಕು

ಎದೆಗಾರಿಕೆ ಬೆಳೆಸಿಕೋಬೇಕು

ಕಂಡು ಪತಂಗವ

ಬೆಂದಬೂದಿಯಿಂದೆದ್ದು

ಚಿಮ್ಮುವ ಫೀನಿಕ್ಸಿನ ಗುದ್ದು

ಉಸಿರುನಿಲ್ಲುವತನಕ

ಉಸಿರಾಡಲಡ್ಡಿಯೇನು?

ಬರಲಿ ಅದು ನಿನ್ನ ಹಿಂದೆ

ಬೀಳಬೇಡ ಅದರಬೆನ್ನ ಹಿಂದೆ

ತಪ್ಪಲ್ಲ ..ಒಪ್ಪುವೆ

ಮಾಡಿದರೂ ಮೋಸವ

ಮಾಡಬೇಡ ಸಹವಾಸವ

ಕಲಿ ಸವಾಲೆಸೆವುದ

ಬದುಕ ಬದುಕುವುದಕಲಿ

ಸಾವ ಮೆಟ್ಟುದೇ ಸವಿ

ಸಾವ ಮೆಟ್ಟುವುದಾ ಸವಿ

23 comments:

  1. ಚೆನ್ನಾಗಿದೆ ಕವನ...ಆಜಾದ ಭ ಯ್ಯ ...

    ಛಲ ಬೇಕು ಬದುಕಲು

    ಗುರಿಯನ್ನು ತಲುಪಲು

    ಬದುಕಿಗೊಂದು ಅರ್ಥ ಕೊಡಲು.....:))

    ReplyDelete
  2. ಮನದ ಮಾತಿನ ತಂಗಿಗೆ ಧನ್ಯವಾದ..ಪ್ರತಿಕ್ರಿಯೆಗೆ... ಪ್ರಕಾಶ ನಾನು ಜೀವನದ ಎರಡುಮುಖಗಳ ಪರಿಚಯ ಮಾಡುವ ಪ್ರಯತ್ನ ಮಾಡಿದ್ದೇವೆ...

    ReplyDelete
  3. ಜೀವಿತದ ವ್ಯವಸ್ತೆಯನ್ನ ಕವನದಲ್ಲಿ ಹೇಳುವ ಪ್ರಯತ್ನ ಚೆನ್ನಾಗಿದೆ ಭೈಯ್ಯ :)

    ReplyDelete
  4. ರಂಜು, ಇಬ್ರೂ ಮಾತನಾಡಿಕೊಂಡು ಪ್ರತಿಕ್ರಿಯೆಹಾಕಿದಿರೋ ಹೇಗೆ...ಧನ್ಯವಾದ...ಒಂದು ಪ್ರಯತ್ನ..ಹತಾಷೆ ಬೇಡ ಎನ್ನೋದಕ್ಕೆ....

    ReplyDelete
  5. ಕವನದ ಆಶಯಕ್ಕೆ ತಕ್ಕುದಾದ meter ಇರುವದು ಈ ಕವನಕ್ಕೆ ಸೊಗಸು ನೀಡಿದೆ.
    ತೆರೆಯ ಮೇಲೆ ತೆರೆ ಎದ್ದಂತೆ, ಕವನದ ಸಾಲುಗಳು ಏಳುತ್ತ ಹೋಗಿವೆ. ಸುಂದರವಾದ ಕವನ.

    ReplyDelete
  6. ಸೀತಾರಾಮ್ ಸರ್, ಧನಾತ್ಮಕ ಭಾವನೆಗಳಿಗೆ ಹೆಚ್ಚುಒತ್ತು ನಮ್ಮಲ್ಲಿನ ಋಣಾತ್ಮಕ ಗುಣಗಳಿಗೆ ಸ್ವಲ್ಪ ಹಿಂದೇಟು ಎನ್ನುವುದನ್ನು ನಂಬಿರುವವ ನಾನು. ಧನ್ಯವಾದ ನಿಮ್ಮ ಮಾತಿಗೆ

    ReplyDelete
  7. ಸುನಾಥ್ ಸರ್, ತಮ್ಮಲ್ಲಿದ್ದ ಅಲ್ಪ ಆರೋಗ್ಯ ಸಂಬಂಧಿ ತೊಂದರೆಗೆ ತಮ್ಮನ್ನೇ ಅರ್ಪಿಸಿಬಿಟ್ಟ ನನ್ನ ದೊಡ್ಡಪ್ಪನ ನೆನೆಪಾಗಿ ಈ ಕವನ ಹೊಮ್ಮಿದ್ದು...ಅವರಲ್ಲಿ ಸಾವು ಬರುವವರೆಗೆ ಬದುಕಬೇಕೆಂಬ ಛಲ ಇರಲಿಲ್ಲ..ಅದನ್ನೇ ಹುಡುಕಹೊರಟಿದ್ದು ....ಅವರ ಸಾವಿಗೆ ಕಾರಣ ಎಂದೇ ನನ್ನ ನಂಬಿಕೆ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  8. ಛಲ ಇಲ್ಲದಿರೆ ಗುರಿ ಎಲ್ಲಿಯದು
    ಒಳ್ಳೆಯ ಕವನ ಸರ್

    ReplyDelete
  9. ಗುರು, ನಿಮ್ಮ ಮಾತು ನಿಜ ಛಲವೇ ಬಲ..ಗುರಿ ಮುಟ್ಟಲು ಸಾಧಿಸಲು...ಅಲ್ಲವೇ..? ಧನ್ಯವಾದ.

    ReplyDelete
  10. 'ಜಲನಯನ' ಅವ್ರೆ..,

    ....ಗೆಲ್ಲೋನಿಗೆ ಬೇಕು ಹಠ.. ಮಾತು ನೆನಪಾಯ್ತು.

    Blog is Updated:http://manasinamane.blogspot.com

    ReplyDelete
  11. ಏನಾಗುತ್ತು ಆಗ್ಲಿ ನೋಡೊಣ ಅಂತ ಹೊರಟು ಬಿಡುವ ಹಾಗೆ ಮಾಡುತ್ತದೆ ಕವನ, ಇದ್ದಷ್ಟು ದಿನ ಹಾಯಾಗಿದ್ದುಬಿಡಬೇಕಲ್ಪಾ...
    ಹಾಗೇ ನಿಮ್ಮ ಕಾಲ್-ಏಜು ಮಿನಿಕವನ ಬಹಳ ಇಷ್ಟ ಆಯ್ತು, ಬರೀತಾ ಇರಿ... ಚೆನ್ನಾಗಿದೆ.

    ReplyDelete
  12. ಥ್ಯಾಂಕು ಪ್ರಭುಜೀ...ಮತ್ತೆ ನನ್ನ ಜಲನಯನಾನ ಸ್ವಲ್ಪ ನೋಡಿ ಬನ್ನೀಪ್ಪಾ...ನಿಮಗೊಂದು ವಿಷಯ ಇದೆ ಅದ್ರಲ್ಲಿ.....

    ReplyDelete
  13. ಆಜಾದ್ ಸರ್,
    ತಂಬಾ positive energy ಕೊಡುವ ಕವನಕ್ಕೆ ಧನ್ಯವಾದ......

    ReplyDelete
  14. Thanks Dinakar....for a change in english...hahaha

    ReplyDelete
  15. hi..

    thnx for the comment,,

    I am browsing ur blog..Its excellent..

    I got a lesson from this song...."try & try again " will succeed.Am I right,,,,

    Regards

    ReplyDelete
  16. Nice one sir...ತಪ್ಪಲ್ಲ ..ಒಪ್ಪುವೆ

    ಮಾಡಿದರೂ ಮೋಸವ

    ಮಾಡಬೇಡ ಸಹವಾಸವ

    ಕಲಿ ಸವಾಲೆಸೆವುದ

    ಬದುಕ ಬದುಕುವುದಕಲಿ

    e saalugalu tumbaa hidisidavu...

    ReplyDelete
  17. superb lines :) :)tumba chennagide sir :)

    ReplyDelete
  18. ಚೆ೦ದದ ಕವನ..
    ಇಷ್ಟವಾಯಿತು :)

    ReplyDelete
  19. ಶೆಟ್ಟಿಯವರೇ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...ನನ್ನ ಜಲನಯನದತ್ತಲೂ ಕಣ್ಣು ಹಾಯಿಸಿ...ನಮ್ಮ ಬ್ಲಾಗ್ ಸ್ನೇಹಿತರ ಒಮ್ದು ಸಮ್ಮಿಲನದ ಯೋಚನೆಯನ್ನು ಪ್ರಸ್ತುತಪಡಿಸಿದ್ದೀನಿ..ನೋಡಿ...

    ReplyDelete
  20. ಅಶೋಕ್ ಧನ್ಯವಾದರೀ..ನಿಮ್ಮ ಪ್ರೋತ್ಸಾಹಕ್ಕೆ ಮತ್ತು ನಿಮ್ಮ ಪ್ರತಿಕ್ರಿಯೆಗೆ..

    ReplyDelete
  21. ಮಂಜುಶ್ವೇತೆಗೆ ಧನ್ಯವಾದ....ಪ್ರತಿಕ್ರಿಯೆಗೆ...

    ReplyDelete
  22. ಸುಶ್ಮಾ ಸಿಂಧು...ನನ್ನ ಗೂಡಿಗೆ ಬಮ್ದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.....

    ReplyDelete