Thursday, July 30, 2009

ಒಂದು ಪ್ರಯತ್ನ




ಸ್ನೇಹಿತ/ತೆಯ ರೇ,
ರೂಪश्री ತಮ್ಮ ಬ್ಲಾಗ್ ನಲ್ಲಿ shape ಕವನಗಳ ಬಗ್ಗೆ ಬರೆದಿದ್ದು ಇನ್ನೂ ನಿಮ್ಮ ಸ್ಮೃತಿಯಲ್ಲಿ ಹಚ್ಚಗಿರಬೇಕು ಅದರ ಬೆಚ್ಚನೆ ನೆನಪು ಮತ್ತೆ ಹಚ್ಚ-ಲು ನನ್ನ ಬಾಲಿಶ ಪ್ರಯತ್ನ ಇಲ್ಲಿದೆ. ನೋಡಿ ನಿಮ್ಮ ಅನಿಸಿಕೆಯನ್ನು ದಯಮಾಡಿ ಹಾಗೇ...ಸುಮ್ಮನೆ...ಬರೆದುಬಿಡಿ...

Tuesday, July 21, 2009

ಗಂಗೆ ನಿನಗೆ ಕೋಟಿ ನಮನ
















ಗಂಗೆ ನಿನಗೆ ಕೋಟಿ ನಮನ
ನಿನ್ನ ಗಾಯನ ಸುಧೆ
ನಾಡೇಕೆ ಹೆಮ್ಮೆ
ಪಡುವುದು ವಸುಧೆ
ರುಚಿ-ಅಭಿರುಚಿ ಮೆಲ್ಲು
ಸಂಗೀತ ನಿನ್ನದು ಸೂಜಿಗಲ್ಲು
ಗಂಗೂ ನೀ ಹಾಡೆ ತೆರೆದ ಬಾಯಿ
ಶಾಂತ ಗಂಗೆ ನಡೆದಂತೆ ಹಾಯಿ
ಭೀಮಸೇನ-ಗಂಗೂ ಗಾಯನ
ಮಲ್ಲಿಕಾರ್ಜುನ ಕನ್ನಡಿಗರ ಮನನ
ಗಂಗೆ ಇಲ್ಲದಿರೆ ಇಹದಲಿ ಏನು?
ಗಾನಗಂಗೆ ಚಿರಂತನ ಅಲ್ಲವೇನು?
ನಿನ್ನ ದಾರಿ ನಮಗೆ ಮಾರ್ಗದರ್ಶನ
ಇಹತ್ಯಜಿಸಿದ ಚೇತನ ನಿನಗೆ ಕೋಟಿ ನಮನ





Sunday, July 19, 2009

ಫೋಟೋ












ಫೋಟೋ ಫೋಟೋ ....ಫೋಟೋಗಳು,
ಸ್ನೇಹಿತರೇ,
ನನಗೆ ಈ ಪೋಸ್ಟ್ ಗೆ ಪ್ರೇರಣೆ, ಶಿವು, ಮಲ್ಲಿಕಾರ್ಜುನ್, ಗುರು, ರೂಪಶ್ರೀ, ಮುಂತಾದ ಫೋಟೋ-ಪ್ರೇಮಿ ಅತಿರಥರು ಎಂದರೆ ಅತಿಶಯೋಕ್ತಿ ಏನಲ್ಲ. ಆದ್ರೆ ನನ್ನದು ಬರೀ ಎರವಲು ಪೋಸ್ಟ್..ಅವರಂತೆ ನಾನು ಚಿತ್ರಗ್ರಾಹಿಯಲ್ಲ. ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಾಯಿತು ಈ ಅದ್ಭುತ ಫೋಟೋಗಳನ್ನು...ಅದಕ್ಕೆ ಹಾಕಿದೆ ಬ್ಲಾಗ್ ಗೆ. ಇದರ ಮೂಲ ನಮ್ಮ ಕುವೈತ್ ಕನ್ನಡ ಕೂಟದ ಪ್ರೆಸಿಡೆಂಟರಾದ ನಕ್ರೆ ಸತೀಶ್ ಚಂದ್ರ ಶೆಟ್ಟರ ಮೈಲ್.

ಈ ಫೋಟೋಗಳು ಅಮೇರಿಕೆಯಲ್ಲಿ ನಡೆದ ಮರಳಿನಮೇಲೆ-ಕಲೆ ಸ್ಪರ್ಧೆಯಲ್ಲಿ ಕ್ಲಿಕ್ಕಿಸಿದವಿಗಳು

Monday, July 13, 2009

ಮೀನು


ಜಲಸಂಕುಲದಲಿ
ವಿಕಸನ ಸಂಕೋಲೆ
ಅದಮ್ಯ ಕೊಂಡಿಯಲಿ
ಮಿಂದು ಬಂದುದು ಮೀನು.

ಜಲಜನನ
ಜಲನಯನ
ಜಲಜೀವನ
ಜಲಜಾಕ್ಷಿ ಮೀನು.

ಸುತ್ತಿಬರುತಲಿ
ತತ್ತಿಯಿಡಿತಲಿ
ಬಿತ್ತಿ ವಂಶವ
ಜಲಮಹತು ಮೀನು.

ಬೆನ್ನು ಮೂಳೆಯ
ಬೆನ್ನು ಹಿಡಿದರೆ
ನರ ಬೇರುತೋರುವ
ಜಲೋಗಾಮಿ ಮೀನು.

ಕೊಳವಿರಲಿ
ಕೆರೆಬರಲಿ
ನದಿ ಸೇರಿ
ಸಾಗಿ ಸಾಗರ
ಎಲ್ಲ-ಸಲ್ಲ ಮೀನು.

ನಿನ್ನೆಯ ಹಾದು ಬಂದಬೀದಿ,
ನಾಳೆಗೆ ತೋರು ಬರುವರಿಗೆ ಹಾದಿ
ಕಲಕಿರಾಡಿಯಿರೆ ನೀರು
ಅದತೊರೆದು ಬೇರೆಡೆ ಸೇರು
ಸರಾಗ ಗಮನ ನಯವ ಕಲಿ
ವಿರಾಗ ಬಿಡು ಮೀನಂತೆ ನಲಿ
ದಾಹ, ಹರಿದುಸಿರು ಮರೆಯದಿರು ನೀರು
ರಾಡಿಮಾಡದಿರು ಕುಡಿವುದು ಬೇರು
ಜಲನಯನಕೆ ಜಲವೇ ಜೀವ,
ತರುವುದು ಮನುಕಲಕೆ ತಪ್ಪಿನಡೆದರೆ ಸಾವ.