ಅಪ್ಪಾ
ಏನು ಮಗು?
ತೆರಿಗೆ ಹೆಚ್ಚು ವಸೂಲಿ ಆಯ್ತು ಅಂತ
ಬಿ.ಬಿ.ಎಂ.ಪಿ. ನೌಕರರಿಗೆ ಔತಣ ಏರ್ಪಡಿಸಿದ್ದರಲ್ಲಾ..?
ಹೌದು ಮಗು, encourage ಮಾಡೋಕೆ..
ಮತ್ತೆ ನಿರಂತರ ಹೆಚ್ಚು ಕೃಷಿ ಉತ್ಪನ್ನಗಳನ್ನು ಕೊಡೋ
ರೈತನಿಗೆ ಯಾಕೆ ..ಊಟ ಬೇಡ
ಸರಿಯಾಗಿ ವಿದ್ಯುತ್ ಪೂರೈಸ್ತಾಯಿಲ್ಲ ಸರ್ಕಾರ..?
ಗೊತ್ತಿಲ್ಲ ಮಗು.
ಅಪ್ಪಾ
ಏನುಮಗು?
ಮೈಸೂರ್ ಸಿಲ್ಕುಸೀರೆ ದುಬಾರಿಯಂತೆ?
ಹೌದು ಮಗು
ಮತ್ತೆ ಸರ್ಕಾರ ಮೂರು ಸಾವಿರಕ್ಕೆ
ಬಡವರಿಗೇ ಏಟುಕೋ ಸೀರೆ ಮಾಡ್ತಾರಂತೆ
ಹೌದು ಮಗು
ಚುನಾವಣೆ ಸಮ್ಯದಲ್ಲಿ ದಾಳಿಮಾಡಿ
ಜಪ್ತುಮಾಡಿದ ಸೀರೆ ಇವು ಅಂತಾರಲ್ಲಾ..
ಗೊತ್ತಿಲ್ಲ ಮಗು.
ಅಪ್ಪಾ
ಏನುಮಗು?
ಶಿವಮೊಗ್ಗದಲ್ಲಿ ಕೃಷಿ ವಿ,ವಿ, ಸ್ಥಾಪಿಸ್ತಾರಂತೆ?
ಹೌದು ಮಗು
ಮತ್ತೆ ರೈತನಿಗೆ ಕೃಷಿಗೆ ಇನ್ನೂ ಹೆಚ್ಚು
ಜಮೀನು ಸಿಗುತ್ತಾ?
ಗೊತ್ತಿಲ್ಲ ಮಗು
Sunday, May 31, 2009
Thursday, May 28, 2009
Sunday, May 24, 2009
ಗೊತ್ತಿಲ್ಲ ಮಗು
ಅಪ್ಪಾ
ಏನು ಮಗು?
ಬಿನ್ ಲ್ಯಾಡನ್ನು ನಂ ಮಾವ
ಬಿಲ್ ಕ್ಲಿಂಟನ್ನು ನಂ ಬಾವ ಅಂತ ಹಾಡಿದೆಯಲ್ವಾ?
ಹೌದು ಮಗು
ಮತ್ತೆ ಇವರಿಬ್ಬರೂ ಕ್ಲೋಸ್ ರಿಲಟಿವ್ಸ್ ಅಂತಾಯ್ತಲ್ಲ?
ಹಾಗೇ ಅಂದ್ಕೋ...
ಮತ್ತೆ ನಮ್ಮಪ್ಪ ಲಾಲೂ ಅಂತಾನೂ ಇದೆ..!!!
ಇವರು ಮೂವರೂ ಸಂಬಂಧಿಕರಾಗ್ಲಿಲ್ವಾ?
ನಂಗೊತ್ತಿಲ್ಲ ಮಗು.
ಅಪ್ಪಾ..
ಹೇಳು ಮಗು..
ಬೆಂಗ್ಳೂರ್ ರೋಡುಗಳು ಮಳೆಯಿಂದ
ಹಳ್ಳ ಕೊಳ್ಳಗಳಾಗಿವೆಯಂತೆ..
ಹೌದು ಮಗು..ವಾಹನ ಏನು ಜನ ನಡೆದಾಡೋದೂ
ಅಪಾಯಕಾರಿ ಅಗ್ಬಿಟ್ಟಿದೆ
ಮತ್ತೆ ,,ಮಳೆ ಬರೋವರ್ಗೂ ರಿಪೇರಿ ಮಾಡೊಲ್ಲ
ಅಲ್ವಾ ಅಪ್ಪ,,?
ಹೌದು ಮಗು...
ಮಳೆ, ಸರ್ಕಾರ ನುಂಗಣ್ಣಗಳಿಗೆ ಒಳ್ಳೆ ಚಾನ್ಸು
ಅಂತ ಪೇಪರ್ನಲ್ಲಿ ಬರ್ದಿದ್ದಾರಲ್ಲಾ, ಯಾಕಪ್ಪಾ..?
ನಂಗೊತ್ತಿಲ್ಲ ಮಗು.
ಅಪ್ಪಾ..
ಏನು ಮಗು..?
ಕನ್ನಡದ ಗಾಯಕ ಪ್ರತಿಭೆಗಳಿದ್ರೂ
ಹಿಂದೀ ಗಾಯಕರನ್ನು ಕನ್ನಡಕ್ಕೆ ಯಾಕೆ ತರ್ತಾರೆ..?
ಅವರ ಹಾಡು ಜನಪ್ರಿಯ ಆಗಿದೆ ಅಂತ
...ಮತ್ತೆ ಬೋಲ್ಡ್ ಆಗಿ ಅಭಿನಯಿಸೋ
ಪರಭಾಷಾ ತಾರೆಯರನ್ನೂ ತರ್ತಾರಲ್ಲಾ..?
ಹೌದು ಮಗು..
ಅಷ್ಟು ‘ಬೋಲ್ಡ್‘ ಆಗಿ ಕನ್ನಡದ ಹುಡ್ಗೀರು
ಮಾಡೋಲ್ಲ ಆಂತಾನೇ..?
ನಂಗೊತ್ತಿಲ್ಲ ಮಗು.
ಅಪ್ಪಾ..
ಸ್ಲಂ ಅಂದ್ರೆ ಏನಪ್ಪಾ...??
ಬೆಂಗ್ಳೂರು ಹಳೇ ಮದ್ರಾಸು ರೋಡಿನಪಕ್ಕ
ಗುಡ್ಲು ಕಟ್ಕೊಂಡು ಇದ್ದಾರಲ್ಲಾ
ಕೊಳೆಗೇರಿ ಅಂತಾರಲ್ಲಾ ಅದು...
ಕೊಳೇಗೇರಿ ನಾಯಿಗೆ ಆಸ್ಕರ್ ಪ್ರಶಸ್ತಿ
ಕೊಟ್ಟರಂತೆ...??
ಹೌದು ಮಗು..
ಮತ್ತೆ ನಮ್ಮ ಗಬ್ಬು ನಾರೋದನ್ನ
ನಾವೇ ಜಗತ್ತಿಗೆ ತೋರ್ಸಿದ್ದಕ್ಕಾ ..ಪ್ರಶಸ್ತಿ?
ನಂಗೊತ್ತಿಲ್ಲ ಮಗು.
ಏನು ಮಗು?
ಬಿನ್ ಲ್ಯಾಡನ್ನು ನಂ ಮಾವ
ಬಿಲ್ ಕ್ಲಿಂಟನ್ನು ನಂ ಬಾವ ಅಂತ ಹಾಡಿದೆಯಲ್ವಾ?
ಹೌದು ಮಗು
ಮತ್ತೆ ಇವರಿಬ್ಬರೂ ಕ್ಲೋಸ್ ರಿಲಟಿವ್ಸ್ ಅಂತಾಯ್ತಲ್ಲ?
ಹಾಗೇ ಅಂದ್ಕೋ...
ಮತ್ತೆ ನಮ್ಮಪ್ಪ ಲಾಲೂ ಅಂತಾನೂ ಇದೆ..!!!
ಇವರು ಮೂವರೂ ಸಂಬಂಧಿಕರಾಗ್ಲಿಲ್ವಾ?
ನಂಗೊತ್ತಿಲ್ಲ ಮಗು.
ಅಪ್ಪಾ..
ಹೇಳು ಮಗು..
ಬೆಂಗ್ಳೂರ್ ರೋಡುಗಳು ಮಳೆಯಿಂದ
ಹಳ್ಳ ಕೊಳ್ಳಗಳಾಗಿವೆಯಂತೆ..
ಹೌದು ಮಗು..ವಾಹನ ಏನು ಜನ ನಡೆದಾಡೋದೂ
ಅಪಾಯಕಾರಿ ಅಗ್ಬಿಟ್ಟಿದೆ
ಮತ್ತೆ ,,ಮಳೆ ಬರೋವರ್ಗೂ ರಿಪೇರಿ ಮಾಡೊಲ್ಲ
ಅಲ್ವಾ ಅಪ್ಪ,,?
ಹೌದು ಮಗು...
ಮಳೆ, ಸರ್ಕಾರ ನುಂಗಣ್ಣಗಳಿಗೆ ಒಳ್ಳೆ ಚಾನ್ಸು
ಅಂತ ಪೇಪರ್ನಲ್ಲಿ ಬರ್ದಿದ್ದಾರಲ್ಲಾ, ಯಾಕಪ್ಪಾ..?
ನಂಗೊತ್ತಿಲ್ಲ ಮಗು.
ಅಪ್ಪಾ..
ಏನು ಮಗು..?
ಕನ್ನಡದ ಗಾಯಕ ಪ್ರತಿಭೆಗಳಿದ್ರೂ
ಹಿಂದೀ ಗಾಯಕರನ್ನು ಕನ್ನಡಕ್ಕೆ ಯಾಕೆ ತರ್ತಾರೆ..?
ಅವರ ಹಾಡು ಜನಪ್ರಿಯ ಆಗಿದೆ ಅಂತ
...ಮತ್ತೆ ಬೋಲ್ಡ್ ಆಗಿ ಅಭಿನಯಿಸೋ
ಪರಭಾಷಾ ತಾರೆಯರನ್ನೂ ತರ್ತಾರಲ್ಲಾ..?
ಹೌದು ಮಗು..
ಅಷ್ಟು ‘ಬೋಲ್ಡ್‘ ಆಗಿ ಕನ್ನಡದ ಹುಡ್ಗೀರು
ಮಾಡೋಲ್ಲ ಆಂತಾನೇ..?
ನಂಗೊತ್ತಿಲ್ಲ ಮಗು.
ಅಪ್ಪಾ..
ಸ್ಲಂ ಅಂದ್ರೆ ಏನಪ್ಪಾ...??
ಬೆಂಗ್ಳೂರು ಹಳೇ ಮದ್ರಾಸು ರೋಡಿನಪಕ್ಕ
ಗುಡ್ಲು ಕಟ್ಕೊಂಡು ಇದ್ದಾರಲ್ಲಾ
ಕೊಳೆಗೇರಿ ಅಂತಾರಲ್ಲಾ ಅದು...
ಕೊಳೇಗೇರಿ ನಾಯಿಗೆ ಆಸ್ಕರ್ ಪ್ರಶಸ್ತಿ
ಕೊಟ್ಟರಂತೆ...??
ಹೌದು ಮಗು..
ಮತ್ತೆ ನಮ್ಮ ಗಬ್ಬು ನಾರೋದನ್ನ
ನಾವೇ ಜಗತ್ತಿಗೆ ತೋರ್ಸಿದ್ದಕ್ಕಾ ..ಪ್ರಶಸ್ತಿ?
ನಂಗೊತ್ತಿಲ್ಲ ಮಗು.
Thursday, May 21, 2009
ಮಹಾಮರ




ಕೊಕ್ಕಿಗೆ ಬೀಜ ಮೆತ್ತಿತ್ತು
ಅರಿವಿಲ್ಲದೇ ಬಿತ್ತಿತ್ತು
ಮಹಾವೃಕ್ಷಕ್ಕೆ ಆ ಸಣ್ಣಗಿಡ
ಆಗಿತ್ತು ಅಂಕುರಕೆ ದಡ
ನೋಡನೋಡುತಲೇ ಎಲೆ
ಹೆಣೆದು ಬೇರು ಗಿಡದ ಸುತ್ತ ಬಲೆ
ಗಿಡವಾಗತೊಡಗಿತು ಗೌಣ
ಬೀಜ ಬೀಗುವ ಮರಮಾಡಿ ತಾಣ
ಗಿಡ ಮಾಯವಾದದ್ದು,
ಮರ-ಅಮರವಾಗತೊಡಗಿದ್ದು,
ಆಸರೆಕೋರಿ ಬಂದದ್ದು,
ಮಹದಾಸರೆಯಾದದ್ದು,
ಬೇರು ಬೆರೆತದ್ದು,
ಕೊಂಬೆ ಬೇರುಬಿಟ್ಟದ್ದು,
ಚಾಚುಬಾಹು ಮರವಾದದ್ದು,
ಇದೆಲ್ಲ..ನಾವು ನೋಡಿಲ್ಲ
ನಮ್ಮ ಹಿರಿಯರಿಗೆ ನೆನಪಿಲ್ಲ
ಅಷ್ಟೇಕೆ ಅನ್ನುವರಲ್ಲ ಆಲಕ್ಕೆ ಹೂವಿಲ್ಲ.
ಇದು ಮಹಾ ವೃಕ್ಷ ಈಗ
ಪಾರ್ಕಿನಲಿ ವಿಹರಿಸಲು ಜಾಗ
ಹತ್ತಾರು ಮರಗಳು ಸೇರಿಕೊಂಡಂತೆ
ಸೂರಲಿ ಮೋಡ ಹರಡಿಕೊಂಡಂತೆ
ಆದರೆ...
ಒಂದು ದಿನ..!!??
ಬರಸಿಡಿಲು ಬಡಿದಂತೆ
ಧರೆಬಿರಿಯಿತೋ ಎಂಬಂತೆ
ಮಹಾವೃಕ್ಷ ಉರುಳಿತ್ತು ಧರೆಗೆ
ಒಮ್ಮೆಲೇ ತಲೆಯಮೇಲಿನ ಸೂರು
ಕಾಣದಾದಂತೆ
ಪಾರ್ಕು ಬಿಕೋ ಎನ್ನುತ್ತಿದೆ
ಆಲ ಇಲ್ಲದ್ದು ಏಕೋ ಕಾಡುತ್ತಿದೆ
ವಿಹಾರಾರ್ಥಿಗಳಿಗೆ ಆಸಕ್ತಿ ಇಲ್ಲದಾಗಿದೆ
ಮರದಿಂದಮರವಾಗುವ ಆಲ
ಸುತ್ತ ಹೆಣೆದ ಮಾನವ ಕೃತ್ರಿಮ ಜಾಲ
ಬೇರುಹರಡಲು ಇದಕೆ ಸಿಗದೆ ನೆಲ
ನೂರಾರು ವರ್ಷದ ಮಹಾ ಆಲ
ಧರೆಗುರುಳಿ ಕಂಡಿದೆ ಅಂತಿಮ ಕಾಲ
(Thanks Guru's World for the fotos and thought provocation)
Subscribe to:
Posts (Atom)