Friday, August 28, 2009
Sunday, August 23, 2009
ಅದಲು-ಬದಲು
(ನನ್ನ ಬ್ಲಾಗ್ ಮಿತ್ರರ ಪ್ರತಿಕ್ರಿಯೆಯಿಂದ ಮಂಥಿತ ಕಾಂಪನ್ಸೇಷನ್ ಚುಟುಕದ ಎರಡನೇ ಭಾಗ)
ಎಂದಿನಂತೆ ಕೊಟ್ಟೆ ನನ್ನವಳಿಗೆ ಮುತ್ತು
ಜೊತೆಗೆ ಅವಳಮೂಗಿಗೊಂದು ನತ್ತು
ಗೊತ್ತಾಗಿಬಿಡ್ತು ನನ್ನ ಕಸರತ್ತು
ತೋರಿಯೇ ಬಿಟ್ಟಳಿವಳು ತನ್ನ ಗತ್ತು
ಬೇಡ ನನಗೆ ನತ್ತು ಸಾಕು ಒಂದೇ ಮುತ್ತು
ಅದಕೇ ಈಗ ಇಲ್ಲಿ ಮುತ್ತು
ಅಲ್ಲಿ ಮುತ್ತು ಮತ್ತು ನತ್ತು
ಎಂದಿನಂತೆ ಕೊಟ್ಟೆ ನನ್ನವಳಿಗೆ ಮುತ್ತು
ಜೊತೆಗೆ ಅವಳಮೂಗಿಗೊಂದು ನತ್ತು
ಗೊತ್ತಾಗಿಬಿಡ್ತು ನನ್ನ ಕಸರತ್ತು
ತೋರಿಯೇ ಬಿಟ್ಟಳಿವಳು ತನ್ನ ಗತ್ತು
ಬೇಡ ನನಗೆ ನತ್ತು ಸಾಕು ಒಂದೇ ಮುತ್ತು
ಅದಕೇ ಈಗ ಇಲ್ಲಿ ಮುತ್ತು
ಅಲ್ಲಿ ಮುತ್ತು ಮತ್ತು ನತ್ತು
Friday, August 21, 2009
ಎರಡು -ಕವನ ಚುಟುಕಗಳು
ಲೆಕ್ಕಾಚಾರ ಚಿಂದಿ
ಸೊಳ್ಳೆ ತಂತು ಮಲೇರಿಯಾ
ಆಮೇಲೆ ಡೆಂಗ್ಯೂ
ಜೊತೆಗೆ ಚಿಕನ್ ಗುನ್ಯಾ
ಈಗ ಎಲ್ಲಿ ನೋಡಿದರೂ
ಹಂದಿ-ಫೋಬಿಯಾ
ಬಂತು ಡಿ.ಡಿ.ಟಿ
ಎನ್ಡೋಸಲ್ಫಾನ್
ಸೊಳ್ಳೆಪರದೆ
ಟಾರ್ಟಾಯ್ಸ್ ಕಾಯಿಲ್
ಗುಡ್ ನೈಟ್ ಮ್ಯಾಟಿನ ಸೇಲ್
ಲಿಕ್ವಿಡೇಟರ್ ಗೂ ಕಾಲ್
ಅಮೇಲೆ ಕೋಳಿ ಸರದಿ
ತಂತು ಹಕ್ಕಿಜ್ವರದ ವರದಿ
ಈಗ ಸುದ್ದಿಯಲ್ಲಿದೆ ಹಂದಿ
ಜ್ವರ ಹರಡಿ ಮಾನವ ಬಂಧಿ
ರೋಗಗಳಿಗೆ ಇತಿಯಿಲ್ಲ
ಮಾಡಿವೆ ಮಾನವನ ಲೆಕ್ಕಾಚಾರ ಚಿಂದಿ.
ಮಳೆ-ಇಳೆ
ಮಳೆ
ಇಳೆಯತ್ತ
ಇಳಿದರೆ
ಬೆಳೆ
ಕಳೆ.
ಮಳೆ
ಬಂದರೆ
ಕೆರೆ ಹೊಳೆ
ನದಿ ನಾಲೆ
ಮಳೆ
ಆದರೆ ನೀರು
ಕುಡಿಯಲು
ಬೆಳೆಬೆಳೆಯಲು
ಕಳೆತೊಳೆಯಲು
ಮಳೆ
ಇಲ್ಲದಿರೆ
ಬತ್ತುವುದು ಸೆಲೆ
ತೊರೆವುದು ನೆಲೆ
ಕೆರೆ ನಾಲೆ
ಹಸಿರು ಎಲೆ
ಜೀವ ಕಾಣದು ಬೆಲೆ
ನಾಗರಿಕತೆಗದು ಬರಿ ಸೋಲೆ
ಮುತ್ತು
ಹತ್ತು-ಇಪ್ಪತ್ತು
ಮುತ್ತು ಸಿಕ್ಕಿತ್ತು
ಅದಕಿಲ್ಲ ಹೊತ್ತು ಗೊತ್ತು
ಬೇಡವೆನಲು ಆಪತ್ತು
ಯಾಕಂದ್ರೆ ಅದು ನಮ್ಮಿಬ್ಬರ ಸೊತ್ತು
ಕಾಂಪನ್ಸೇಷನ್
ಪ್ರಿಯೆಗೆ ಕೊಡಬೇಕು
ಕದ್ದು-ಮುಚ್ಚಿ ಮುತ್ತು
ಅದು ಗೊತ್ತಾಗದಿರಲು
ನನ್ನವಳಿಗೆ ಮುತ್ತು
ಜೊತೆಗೆ ಮುತ್ತಿನ ನತ್ತು
ಸೊಳ್ಳೆ ತಂತು ಮಲೇರಿಯಾ
ಆಮೇಲೆ ಡೆಂಗ್ಯೂ
ಜೊತೆಗೆ ಚಿಕನ್ ಗುನ್ಯಾ
ಈಗ ಎಲ್ಲಿ ನೋಡಿದರೂ
ಹಂದಿ-ಫೋಬಿಯಾ
ಬಂತು ಡಿ.ಡಿ.ಟಿ
ಎನ್ಡೋಸಲ್ಫಾನ್
ಸೊಳ್ಳೆಪರದೆ
ಟಾರ್ಟಾಯ್ಸ್ ಕಾಯಿಲ್
ಗುಡ್ ನೈಟ್ ಮ್ಯಾಟಿನ ಸೇಲ್
ಲಿಕ್ವಿಡೇಟರ್ ಗೂ ಕಾಲ್
ಅಮೇಲೆ ಕೋಳಿ ಸರದಿ
ತಂತು ಹಕ್ಕಿಜ್ವರದ ವರದಿ
ಈಗ ಸುದ್ದಿಯಲ್ಲಿದೆ ಹಂದಿ
ಜ್ವರ ಹರಡಿ ಮಾನವ ಬಂಧಿ
ರೋಗಗಳಿಗೆ ಇತಿಯಿಲ್ಲ
ಮಾಡಿವೆ ಮಾನವನ ಲೆಕ್ಕಾಚಾರ ಚಿಂದಿ.
ಮಳೆ-ಇಳೆ
ಮಳೆ
ಇಳೆಯತ್ತ
ಇಳಿದರೆ
ಬೆಳೆ
ಕಳೆ.
ಮಳೆ
ಬಂದರೆ
ಕೆರೆ ಹೊಳೆ
ನದಿ ನಾಲೆ
ಮಳೆ
ಆದರೆ ನೀರು
ಕುಡಿಯಲು
ಬೆಳೆಬೆಳೆಯಲು
ಕಳೆತೊಳೆಯಲು
ಮಳೆ
ಇಲ್ಲದಿರೆ
ಬತ್ತುವುದು ಸೆಲೆ
ತೊರೆವುದು ನೆಲೆ
ಕೆರೆ ನಾಲೆ
ಹಸಿರು ಎಲೆ
ಜೀವ ಕಾಣದು ಬೆಲೆ
ನಾಗರಿಕತೆಗದು ಬರಿ ಸೋಲೆ
ಮುತ್ತು
ಹತ್ತು-ಇಪ್ಪತ್ತು
ಮುತ್ತು ಸಿಕ್ಕಿತ್ತು
ಅದಕಿಲ್ಲ ಹೊತ್ತು ಗೊತ್ತು
ಬೇಡವೆನಲು ಆಪತ್ತು
ಯಾಕಂದ್ರೆ ಅದು ನಮ್ಮಿಬ್ಬರ ಸೊತ್ತು
ಕಾಂಪನ್ಸೇಷನ್
ಪ್ರಿಯೆಗೆ ಕೊಡಬೇಕು
ಕದ್ದು-ಮುಚ್ಚಿ ಮುತ್ತು
ಅದು ಗೊತ್ತಾಗದಿರಲು
ನನ್ನವಳಿಗೆ ಮುತ್ತು
ಜೊತೆಗೆ ಮುತ್ತಿನ ನತ್ತು
Thursday, July 30, 2009
ಒಂದು ಪ್ರಯತ್ನ
ಸ್ನೇಹಿತ/ತೆಯ ರೇ,
ರೂಪश्री ತಮ್ಮ ಬ್ಲಾಗ್ ನಲ್ಲಿ shape ಕವನಗಳ ಬಗ್ಗೆ ಬರೆದಿದ್ದು ಇನ್ನೂ ನಿಮ್ಮ ಸ್ಮೃತಿಯಲ್ಲಿ ಹಚ್ಚಗಿರಬೇಕು ಅದರ ಬೆಚ್ಚನೆ ನೆನಪು ಮತ್ತೆ ಹಚ್ಚ-ಲು ನನ್ನ ಬಾಲಿಶ ಪ್ರಯತ್ನ ಇಲ್ಲಿದೆ. ನೋಡಿ ನಿಮ್ಮ ಅನಿಸಿಕೆಯನ್ನು ದಯಮಾಡಿ ಹಾಗೇ...ಸುಮ್ಮನೆ...ಬರೆದುಬಿಡಿ...
ರೂಪश्री ತಮ್ಮ ಬ್ಲಾಗ್ ನಲ್ಲಿ shape ಕವನಗಳ ಬಗ್ಗೆ ಬರೆದಿದ್ದು ಇನ್ನೂ ನಿಮ್ಮ ಸ್ಮೃತಿಯಲ್ಲಿ ಹಚ್ಚಗಿರಬೇಕು ಅದರ ಬೆಚ್ಚನೆ ನೆನಪು ಮತ್ತೆ ಹಚ್ಚ-ಲು ನನ್ನ ಬಾಲಿಶ ಪ್ರಯತ್ನ ಇಲ್ಲಿದೆ. ನೋಡಿ ನಿಮ್ಮ ಅನಿಸಿಕೆಯನ್ನು ದಯಮಾಡಿ ಹಾಗೇ...ಸುಮ್ಮನೆ...ಬರೆದುಬಿಡಿ...
Tuesday, July 21, 2009
Sunday, July 19, 2009
ಫೋಟೋ





ಫೋಟೋ ಫೋಟೋ ....ಫೋಟೋಗಳು,
ಸ್ನೇಹಿತರೇ,
ನನಗೆ ಈ ಪೋಸ್ಟ್ ಗೆ ಪ್ರೇರಣೆ, ಶಿವು, ಮಲ್ಲಿಕಾರ್ಜುನ್, ಗುರು, ರೂಪಶ್ರೀ, ಮುಂತಾದ ಫೋಟೋ-ಪ್ರೇಮಿ ಅತಿರಥರು ಎಂದರೆ ಅತಿಶಯೋಕ್ತಿ ಏನಲ್ಲ. ಆದ್ರೆ ನನ್ನದು ಬರೀ ಎರವಲು ಪೋಸ್ಟ್..ಅವರಂತೆ ನಾನು ಚಿತ್ರಗ್ರಾಹಿಯಲ್ಲ. ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಾಯಿತು ಈ ಅದ್ಭುತ ಫೋಟೋಗಳನ್ನು...ಅದಕ್ಕೆ ಹಾಕಿದೆ ಬ್ಲಾಗ್ ಗೆ. ಇದರ ಮೂಲ ನಮ್ಮ ಕುವೈತ್ ಕನ್ನಡ ಕೂಟದ ಪ್ರೆಸಿಡೆಂಟರಾದ ನಕ್ರೆ ಸತೀಶ್ ಚಂದ್ರ ಶೆಟ್ಟರ ಮೈಲ್.
ಸ್ನೇಹಿತರೇ,
ನನಗೆ ಈ ಪೋಸ್ಟ್ ಗೆ ಪ್ರೇರಣೆ, ಶಿವು, ಮಲ್ಲಿಕಾರ್ಜುನ್, ಗುರು, ರೂಪಶ್ರೀ, ಮುಂತಾದ ಫೋಟೋ-ಪ್ರೇಮಿ ಅತಿರಥರು ಎಂದರೆ ಅತಿಶಯೋಕ್ತಿ ಏನಲ್ಲ. ಆದ್ರೆ ನನ್ನದು ಬರೀ ಎರವಲು ಪೋಸ್ಟ್..ಅವರಂತೆ ನಾನು ಚಿತ್ರಗ್ರಾಹಿಯಲ್ಲ. ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಾಯಿತು ಈ ಅದ್ಭುತ ಫೋಟೋಗಳನ್ನು...ಅದಕ್ಕೆ ಹಾಕಿದೆ ಬ್ಲಾಗ್ ಗೆ. ಇದರ ಮೂಲ ನಮ್ಮ ಕುವೈತ್ ಕನ್ನಡ ಕೂಟದ ಪ್ರೆಸಿಡೆಂಟರಾದ ನಕ್ರೆ ಸತೀಶ್ ಚಂದ್ರ ಶೆಟ್ಟರ ಮೈಲ್.
ಈ ಫೋಟೋಗಳು ಅಮೇರಿಕೆಯಲ್ಲಿ ನಡೆದ ಮರಳಿನಮೇಲೆ-ಕಲೆ ಸ್ಪರ್ಧೆಯಲ್ಲಿ ಕ್ಲಿಕ್ಕಿಸಿದವಿಗಳು
Monday, July 13, 2009
ಮೀನು

ಜಲಸಂಕುಲದಲಿ
ವಿಕಸನ ಸಂಕೋಲೆ
ಅದಮ್ಯ ಕೊಂಡಿಯಲಿ
ಮಿಂದು ಬಂದುದು ಮೀನು.
ಜಲಜನನ
ಜಲನಯನ
ಜಲಜೀವನ
ಜಲಜಾಕ್ಷಿ ಮೀನು.
ಸುತ್ತಿಬರುತಲಿ
ತತ್ತಿಯಿಡಿತಲಿ
ಬಿತ್ತಿ ವಂಶವ
ಜಲಮಹತು ಮೀನು.
ಬೆನ್ನು ಮೂಳೆಯ
ಬೆನ್ನು ಹಿಡಿದರೆ
ನರ ಬೇರುತೋರುವ
ಜಲೋಗಾಮಿ ಮೀನು.
ಕೊಳವಿರಲಿ
ಕೆರೆಬರಲಿ
ನದಿ ಸೇರಿ
ಸಾಗಿ ಸಾಗರ
ಎಲ್ಲ-ಸಲ್ಲ ಮೀನು.
ನಿನ್ನೆಯ ಹಾದು ಬಂದಬೀದಿ,
ನಾಳೆಗೆ ತೋರು ಬರುವರಿಗೆ ಹಾದಿ
ಕಲಕಿರಾಡಿಯಿರೆ ನೀರು
ಅದತೊರೆದು ಬೇರೆಡೆ ಸೇರು
ಸರಾಗ ಗಮನ ನಯವ ಕಲಿ
ವಿರಾಗ ಬಿಡು ಮೀನಂತೆ ನಲಿ
ದಾಹ, ಹರಿದುಸಿರು ಮರೆಯದಿರು ನೀರು
ರಾಡಿಮಾಡದಿರು ಕುಡಿವುದು ಬೇರು
ಜಲನಯನಕೆ ಜಲವೇ ಜೀವ,
ತರುವುದು ಮನುಕಲಕೆ ತಪ್ಪಿನಡೆದರೆ ಸಾವ.
Subscribe to:
Posts (Atom)